ಮೋದಿ ಪ್ರಧಾನಿಯಾಗೋಲ್ಲ, ಅನಿರೀಕ್ಷಿತ ಫಲಿತಾಂಶ! ಹೀಗೊಂದು ಭವಿಷ್ಯ
Recommended Video
ಭೋಪಾಲ್, ಮೇ 21: ಲೋಕಸಭೆ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಹೊರಬೀಳಲಿದ್ದು, ನರೇಂದ್ರ ಮೋದಿ ಅವರು ಈ ಬಾರಿ ಪ್ರಧಾನಿಯಾಗುವುದಿಲ್ಲ ಎಂದಿದ್ದ ಜ್ಯೋತಿಷಶಾಸ್ತ್ರದ ಪ್ರೊಫೆಸರ್ ವೊಬ್ಬರನ್ನು ಅಮಾನತುಗೊಳಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಈ ಕುರಿತು ಶೈಲೇಂದ್ರ ಶರ್ಮಾ ಎಂಬ ಈ ಜ್ಯೋತಿಷಿ ಈ ಕುರಿತು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಚುನಾವಣಾ ಆಯೋಗದ ಕ್ರಮವನ್ನು ಕಟುವಾಗಿ ಖಂಡಿಸಿದ್ದಾರೆ.
ಮೇ 19 ರಂದು ಕೊನೆಯ ಹಂತದ ಮತದಾನ ನಡೆದ ದಿನ ಅಪರಾಹ್ನ 4 ಗಂಟೆಗೆ ಅವರು ತಮ್ಮ ಅಭಿಪ್ರಾಯವನ್ನು ಬಿಡುಗಡೆ ಮಾಡಿದ್ದರು. ಆದರೆ ಆಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಿದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ.

ಚುನಾವಣೆ ಫಲಿತಾಂಶದ ಬಗ್ಗೆ ಅವರು ನೀಡಿದ್ದ ಭವಿಷ್ಯವಾಣಿ ಹೀಗಿತ್ತು.
1. ಈ ದೇಶ ಅತ್ಯಂತ ಅನಿರೀಕ್ಷಿತ ಫಲಿತಾಂಶವನ್ನು ಕಾಣಲಿದೆ
2. ನರೇಂದ್ರ ಮೋದಿ ಅವರು ಈ ದೇಶದ ಮುಂದಿನ ಪ್ರಧಾನಿಯಾಗುವುದಿಲ್ಲ.
3.ಈ ಬಾರಿ ಸಂಸತ್ತಿನಲ್ಲಿ ಯುಪಿಎ ಮತ್ತು ಎನ್ ಡಿಎ ಯಾವ ಪಕ್ಷಗಳೂ ಬಹುಮತ ಪಡೆಯುವುದಿಲ್ಲ.
4.ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ.
5.ರಾಹುಲ್ ಗಾಂಧಿ ಅವರು ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರಾದರೂ, ಅವರು ಪ್ರಧಾನಿಯಾಗುವುದಿಲ್ಲ.
6.ಪ್ರಾದೇಶಿಕ ಪಕ್ಷದ ಪ್ರಧಾನಿಯಾಗುತ್ತಾರೆ. ಪ್ರಾದೇಶಿಕ ಪಕ್ಷಗಳು ತೃತೀಯ ರಂಗ ರಚಿಸಿ ಮೈತ್ರಿ ಸರ್ಕಾರ ರಚಿಸುತ್ತವೆ.
7. ಆಡಳಿತ ನಡೆಸುವ ಮೈತ್ರಿಕೂಟವು 320 ಸೀತುಗಳನ್ನು ಪಡೆಯಲಿದೆ.












Click it and Unblock the Notifications