ಜ.14ಕ್ಕೆ ನಾಗರಾಜ ವಸ್ತಾರೆ 8 ಪುಸ್ತಕ ಬಿಡುಗಡೆ, ಸೆಲ್ಫಿ-ಹರಟೆ
ಬೆಂಗಳೂರು, ಜನವರಿ 13: ಸಂಕ್ರಾಂತಿ ಜನವರಿ ಹದಿನೈದರ ಸೋಮವಾರದಂದು ಇದೆ. ಅದಕ್ಕೆ ಒಂದು ದಿನ ಮೊದಲು ಅಂದರೆ ಹದಿನಾಲ್ಕರ ಭಾನುವಾರದಂದು ಪುಸ್ತಕಗಳ ಸುಗ್ಗಿ ಇದೆ. ಇದು ಓದುಗರ ಪಾಲಿಗೆ ಹಬ್ಬ. ಒಂದೇ ಸಲಕ್ಕೆ ನಾಗರಾಜ ವಸ್ತಾರೆ ಅವರ ಎಂಟು ಪುಸ್ತಕಗಳ ಬಿಡುಗಡೆ ಇದೆ.
ಪುಸ್ತಕ ಬಿಡುಗಡೆ ಎಲ್ಲಿ?: ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ
ಉಪಾಹಾರ- ಉಪಚಾರ: ಬೆಳಗ್ಗೆ ಹತ್ತು ಗಂಟೆಯಿಂದ ಆರಂಭ

ಯಾರ್ಯಾರು ಇರುತ್ತಾರೆ?: ಎಚ್.ಎಸ್.ವೆಂಕಟೇಶ್ ಮೂರ್ತಿ, ವಸುಧೇಂದ್ರ, ಜಯಂತ್ ಕಾಯ್ಕಿಣಿ, ನಾಗರಾಜ ವಸ್ತಾರೆ, ಅಪರ್ಣಾ, ಮಂಡ್ಯ ರಮೇಶ್, ಬಿ.ಸುರೇಶ್ ಸೇರಿದಂತೆ ಇನ್ನೂ ಹಲವರು.
ಯಾವ ಪುಸ್ತಕಗಳು?: ಸಾಂಚಿಮುದ್ರೆ, ಪಟ್ಟಣ ಪುರಾಣ, ಅರ್ಬನ್ ಪ್ಯಾಂಥರ್, ಕಮಾನು ಕಟ್ಟುಕತೆ ಕಟ್ಟುಪಾಡು, ಬಿಯಾಂಡ್ Zee ಇನ್ನಷ್ಟು ಪುಸ್ತಕ

ಸಾಹಿತ್ಯ ಸಂಭ್ರಮದಲ್ಲಿ ನೀವೂ ಪಾಲ್ಗೊಳ್ಳಿ. ಹಬ್ಬದ ಸಂತಸಕ್ಕೆ ಒಂದು ದಿನ ಮೊದಲೇ ಮುನ್ನುಡಿ ಬರೆಯಿರಿ. ನಿಮ್ಮ ಮೆಚ್ಚುವ ಸಾಹಿತಿ, ಕಲಾವಿದರ ಜತೆಗೆ ಒಂದಿಷ್ಟು ಹರಟೆ, ಸೆಲ್ಫಿ, ಆಟೋಗ್ರಾಫ್ ಎಲ್ಲವೂ ಸಾಧ್ಯವಿದೆ.












Click it and Unblock the Notifications