Get Updates
Get notified of breaking news, exclusive insights, and must-see stories!

M.M. Naravane: ಕೇಂದ್ರ ಸರ್ಕಾರ ಎಂ.ಎಂ. ನರವಣೆ ಪುಸ್ತಕದ ಚರ್ಚೆ ತಡೆಯುತ್ತಿರುವುದೇಕೆ: ಸಿ.ಎಂ ಸಿದ್ದರಾಮಯ್ಯ ಪ್ರಶ್ನೆ

MM Naravane: ಲೋಕಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಮಾತನ್ನು ತಡೆಯಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪದೇ ಪದೇ ಪ್ರಯತ್ನಿಸುತ್ತಿರುವುದು ತೀವ್ರ ತೊಂದರೆಯನ್ನುಂಟು ಮಾಡುತ್ತಿದೆ. ಇದು ಭಾರತದ ಪ್ರಜಾಪ್ರಭುತ್ವದ ಹೃದಯಭಾಗಕ್ಕೆ ಘಾಸಿಯನ್ನುಂಟು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರು ಬರೆದ ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ಪುಸ್ತಕದ ಆಯ್ದ ಭಾಗಗಳನ್ನು ಆಧರಿಸಿ ರಾಷ್ಟ್ರೀಯ ಭದ್ರತೆಯ ಕುರಿತು ಕಾನೂನುಬದ್ಧ ಪ್ರಶ್ನೆಗಳನ್ನು ಎತ್ತಿದರು. ಮೂಲತಃ 2024 ರಲ್ಲಿ ಬಿಡುಗಡೆಯಾಗಬೇಕಿದ್ದ ಈ ಪುಸ್ತಕವನ್ನು ಭಾರತ ಸರ್ಕಾರ ತಡೆಹಿಡಿದಿರುವುದರಿಂದ ಇನ್ನೂ ಪ್ರಕಟವಾಗಿಲ್ಲ. ದಿ ಕ್ಯಾರವಾನ್ ಮ್ಯಾಗಜೀನ್‌ನ ಇತ್ತೀಚಿನ ಲೇಖನದಲ್ಲಿ ಈ ಆಯ್ದ ಭಾಗಗಳನ್ನು ಉಲ್ಲೇಖಿಸಲಾಗಿದೆ.

siddaramaiah backs rahul gandhi

ಮುಖ್ಯವಾಗಿ, ಜನರಲ್ ನರವಣೆ ಅವರು ತಮ್ಮ ಪುಸ್ತಕದ ವಿಷಯಗಳನ್ನು ನಿರಾಕರಿಸಿಲ್ಲ. ಇದಕ್ಕೆ ವಿರುದ್ಧವಾಗಿ, ಅವರು ತಮ್ಮ ಪುಸ್ತಕವು ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ಈ ಹೇಳಿಕೆಗಳು ತಪ್ಪಾಗಿದ್ದರೆ ಅಥವಾ ದಾರಿತಪ್ಪಿಸುತ್ತಿದ್ದರೆ. ಆಗ ಕೇಂದ್ರ ಸರ್ಕಾರವು ಸ್ಪಷ್ಟ ನಿರಾಕರಣೆಯನ್ನು ನೀಡಬಹುದಿತ್ತು. ಪುಸ್ತಕವನ್ನು ತಡೆಹಿಡಿದು ಚರ್ಚೆ ಮಾಡದಂತೆ ತಡೆಯುವ ನಿರ್ಧಾರವು ಅಹಿತಕರ ಸತ್ಯಗಳನ್ನು ನಿಗ್ರಹಿಸುವ ಉದ್ದೇಶ ಹೊಂದಿದೆಯೇ ಎನ್ನುವ ಅನುಮಾನವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.

2020ರಲ್ಲಿ ಭಾರತ - ಚೀನಾ ಗಡಿ ಬಿಕ್ಕಟ್ಟಿನ ನಿರ್ಣಾಯಕ ಹಂತದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸ್ಪಷ್ಟ ಮತ್ತು ನಿರ್ಣಾಯಕ ಕಾರ್ಯತಂತ್ರದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಯಿತು. ಸಶಸ್ತ್ರ ಪಡೆಗಳು ಕಠಿಣ ನಿಯಮಗಳು ಮತ್ತು ಮಿತಿಗಳ ನಡುವೆ ಸಂಕೀರ್ಣ ರಾಜಕೀಯ ಬಿಕ್ಕಟ್ಟನ್ನು ನಿರ್ವಹಿಸಬೇಕಾದ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದವು ಎಂದು ಸೂಚಿಸುತ್ತದೆ. ಇದು ಸೇನೆಯ ಯಾವುದೇ ವೈಫಲ್ಯವನ್ನು ಸೂಚಿಸುವುದಿಲ್ಲ, ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಂದಿನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದಲ್ಲಿ ಬಲವಾದ ರಾಜಕೀಯ ನಾಯಕತ್ವದ ಕೊರತೆಯನ್ನು ಸೂಚಿಸುತ್ತದೆ. ಇಂತಹ ವಿಷಯಗಳು ಸಂಸತ್ತಿನಲ್ಲಿ ಗಂಭೀರ ಚರ್ಚೆಗೆ ಅರ್ಹವಾಗಿವೆ.

ರಾಹುಲ್ ಗಾಂಧಿಯವರು ವಿರೋಧ ಪಕ್ಷದ ಜವಾಬ್ದಾರಿಯುತ ನಾಯಕ ಮಾಡಬೇಕಾದ ಕರ್ತವ್ಯವನ್ನು ಮಾಡಿದ್ದಾರೆ. ಜನರ ಪರವಾಗಿ ಪ್ರಶ್ನೆಗಳನ್ನು ಕೇಳಿ, ರಾಷ್ಟ್ರ ಅಥವಾ ಸಶಸ್ತ್ರ ಪಡೆಗಳ ವಿರುದ್ಧ ಮಾತನಾಡಲಿಲ್ಲ. ಆದರೂ, ಸರ್ಕಾರವು ಉತ್ತರಿಸುವ ಬದಲು ಸತತ ಎರಡು ದಿನಗಳ ಕಾಲ ಸಂಸತ್ತನ್ನು ಮುಂದೂಡಿದೆ. ಎಂಟು ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ರಾಷ್ಟ್ರಪತಿಗಳ ಭಾಷಣದ ಕುರಿತು ಮಾತನಾಡದಂತೆ ತಡೆಯಲಾಗಿದೆ.

ಯಾವುದೇ ಜವಾಬ್ದಾರಿಯುತ ಪ್ರಜಾಪ್ರಭುತ್ವದಲ್ಲಿ, ಈ ರೀತಿಯ ಗಂಭೀರ ವಿಷಯಗಳನ್ನು ಬಹಿರಂಗಪಡಿಸುವಿಕೆ ಉನ್ನತ ಮಟ್ಟದಲ್ಲಿ ಹೊಣೆಗಾರಿಕೆ ಮತ್ತು ಗಂಭೀರ ರಾಜಕೀಯ ಪರಿಣಾಮಗಳಿಗೆ ಕಾರಣವಾಗುತ್ತಿದ್ದವು. ಬದಲಾಗಿ, ಈ ಸರ್ಕಾರವು ದಮನ ಮತ್ತು ಬೆದರಿಕೆಯ ಅಸ್ತ್ರವನ್ನು ಆಯ್ಕೆ ಮಾಡಿಕೊಂಡಿದೆ.

ಮೋದಿ ಸರ್ಕಾರವು ಏನನ್ನೂ ಮರೆಮಾಚುವುದು ಇಲ್ಲದಿದ್ದರೆ, ಚರ್ಚೆಯನ್ನು ಏಕೆ ತಡೆಯುತ್ತಿದೆ. ಭಾರತದ ರಾಷ್ಟ್ರೀಯ ಹಿತಾಸಕ್ತಿಯನ್ನು ಸಂಪೂರ್ಣವಾಗಿ ರಕ್ಷಿಸಿದ್ದರೆ, ಸಂಸತ್ತಿನಲ್ಲಿ ಪರಿಶೀಲನೆಗೆ ಏಕೆ ಭಯಪಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+