ನೂರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಸಿದ್ಧವಾದ ಬೆಂಗಳೂರಿನ ಉಡಾನ್!
ಬೆಂಗಳೂರು, ನವೆಂಬರ್ 4: ಬೆಂಗಳೂರಿನಲ್ಲಿ ಪಾರ್ಟ್ ಟೈಮ್ ಉದ್ಯೋಗ ಮಾಡುವ ಅದೆಷ್ಟೋ ಕಾರ್ಮಿಕರಿಗೆ ಖಾಸಗಿ ಕಂಪನಿಯೊಂದು ಶಾಕಿಂಗ್ ಸುದ್ದಿಯನ್ನು ಕೊಟ್ಟಿದೆ. ತನ್ನ ಕಾರ್ಯಚಟುವಟಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ನೋಡುತ್ತಿರು B2B ಯುನಿಕಾರ್ನ್ ಉಡಾನ್ (ಬೀದಿಯಲ್ಲಿ ಕೆಲಸ ಮಾಡುವವರು) ಸ್ಟ್ರೀಟ್ ವರ್ಕರ್ ಮತ್ತು ಮಾರಾಟ ಮೇಲ್ವಿಚಾರಕರನ್ನು ವಜಾಗೊಳಿಸುತ್ತಿದೆ.
ಈ ವಜಾಗೊಳಿಸುವಿಕೆಯ ಪ್ರಕ್ರಿಯೆಯು ಹೆಚ್ಚಾಗಿ ಗುತ್ತಿಗೆ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಸಂಸ್ಥೆಯು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅನೇಕ ಪ್ರದೇಶಗಳಲ್ಲಿ ಈ ಉದ್ಯೋಗಗಳು 'ಅನಗತ್ಯ'ವಾಗಿದೆ. ಈ ವರ್ಷದ ಜೂನ್ನಲ್ಲಿ ಸುಮಾರು 200 ಉದ್ಯೋಗಿಗಳನ್ನು ವಜಾಗೊಳಿಸಿದ ನಂತರ ಉಡಾನ್ನಲ್ಲಿ ಇದು ಎರಡನೇ ಸುತ್ತಿನ ವಜಾಗೊಳಿಸುವಿಕೆಯಾಗಿದೆ. ಆ ಸಮಯದಲ್ಲಿ, ಬದಲಾಗುತ್ತಿರುವ ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿ ತನ್ನ ವ್ಯವಹಾರ ಮಾದರಿಯನ್ನು ಮರುಶೋಧಿಸುತ್ತಿದೆ ಎಂದು ಸ್ಟಾರ್ಟಪ್ ಹೇಳಿತ್ತು.
ಕಳೆದ 2020ರ ಏಪ್ರಿಲ್ ತಿಂಗಳಿನಲ್ಲಿ ಕೋವಿಡ್ -19 ಸಾಂಕ್ರಾಮಿಕ ಪಿಡುಗಿನ ಪ್ರಭಾವದಿಂದಾಗಿ ಉಡಾನ್ ಮಾರಾಟ ಮತ್ತು ವಿತರಣಾ ಕಾರ್ಮಿಕರ ತಂಡದಲ್ಲಿ ಸುಮಾರು 1,000 ಕಾರ್ಮಿಕರನ್ನು ಕೆಲಸದಿಂದ ಕೈಬಿಟ್ಟಿತು. ಉಡಾನ್ ಪ್ರಸ್ತುತ 3000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.

ಹೊಸ ಮಾದರಿ ರಚನೆಗೆ ಮುಂದಾಗಿರುವ ಉಡಾನ್
ನಾವು ಲಾಭದಾಯಕ ಬೆಳವಣಿಗೆಯ ಚಾಲಕರಾಗಿ ದಕ್ಷತೆಯನ್ನು ನಂಬುತ್ತೇವೆ. ನಮ್ಮ ವೆಚ್ಚದ ರಚನೆಗಳು ಮತ್ತು ಮಾದರಿ ಪರಿಷ್ಕರಿಸುವುದನ್ನು ಮುಂದುವರಿಸುತ್ತೇವೆ. ಉಡಾನ್ ಅನ್ನು ಲಾಭದಾಯಕ ಕಂಪನಿಯನ್ನಾಗಿ ಮಾಡುವತ್ತ ನಮ್ಮ ಪ್ರಯಾಣದಲ್ಲಿ ನಾವು ಮುಂದುವರಿಯುತ್ತೇವೆ. ಕೆಲವು ವ್ಯವಸ್ಥೆಯಲ್ಲಿ ಪುನರಾವರ್ತನೆಗಳನ್ನು ಸೃಷ್ಟಿಸಿದೆ. ಈ ಪಾತ್ರಗಳು ಇನ್ನು ಮುಂದೆ ಅಗತ್ಯವಿಲ್ಲ. ಜವಾಬ್ದಾರಿಯುತ ಸಂಸ್ಥೆಯಾಗಿ ಪ್ರಭಾವಿತ ಉದ್ಯೋಗಿಗಳಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ಒದಗಿಸಲು ನಾವು ಸಿದ್ಧರಿದ್ದೇವೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಸಿಇಒ ಕಳುಹಿಸಿರುವ ಇಮೇಲ್ ಸಂದೇಶದಲ್ಲಿ ಏನಿದೆ?
ಕಳೆದ ಜೂನ್ 2022ರಲ್ಲಿ ಉದ್ಯೋಗಿಗಳಿಗೆ ಕಳುಹಿಸಲಾದ ಇಮೇಲ್ನಲ್ಲಿ 2022ರ ಮೊದಲಾರ್ಧದಲ್ಲಿ ಉಡಾನ್ನ ವೆಚ್ಚದಲ್ಲಿ ಸುಮಾರು ಶೇ.40ರಷ್ಟು ಕಡಿಮೆಯಾಗಿದೆ ಎಂದು ಸಿಇಒ ವೈಭವ್ ಗುಪ್ತಾ ಹೇಳಿದ ಹೊರತಾಗಿಯೂ ಎರಡನೇ ಸುತ್ತಿನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಅದೇ ಇಮೇಲ್ನಲ್ಲಿ ಅವರು ಕಂಪನಿಯು ಜೂನ್ 30ರಂದು ಕೊನೆಗೊಂಡ ಪ್ರಸಕ್ತ ತ್ರೈಮಾಸಿಕದಲ್ಲಿ ಯುನಿಟ್ ಎಕನಾಮಿಕ್ಸ್-ಪಾಸಿಟಿವ್ ಆಗುವ ಹಾದಿಯಲ್ಲಿದೆ ಎಂದು ಹೇಳಿಕೊಂಡಿದ್ದಾರೆ.

ಒಟ್ಟು 350 ಮಿಲಿಯನ್ ಡಾಲರ್ ಸಂಗ್ರಹಿಸಿದ ಉಡಾನ್
ಕಳೆದ ವಾರವಷ್ಟೇ, ಉಡಾನ್ ಅಸ್ತಿತ್ವದಲ್ಲಿರುವ ಹೂಡಿಕೆದಾರರು ಮತ್ತು ಬಾಂಡ್ ಹೋಲ್ಡರ್ಗಳಿಂದ ಕನ್ವರ್ಟಿಬಲ್ ನೋಟ್ ಮೂಲಕ 120 ಮಿಲಿಯನ್ ಡಾಲರ್ ಮೌಲ್ಯದ ಹಣವನ್ನು ಪಡೆದುಕೊಂಡಿದೆ. ಇದು ಲೈಟ್ಸ್ಪೀಡ್ ವೆಂಚರ್ ಪಾರ್ಟ್ನರ್ಸ್, ಟೆನ್ಸೆಂಟ್, ಡಿಎಸ್ಟಿ ಗ್ಲೋಬಲ್, ಜಿಜಿವಿ ಕ್ಯಾಪಿಟಲ್, ಟಾರ್ ಇನ್ವೆಸ್ಟ್ಮೆಂಟ್, ಅರೆನಾ ಹೂಡಿಕೆದಾರರು ಮತ್ತು ಎಂ & ಜಿ ಇನ್ವೆಸ್ಟ್ಮೆಂಟ್ಗಳನ್ನು ಅದರ ಬೆಂಬಲವಾಗಿ ಪರಿಗಣಿಸುತ್ತದೆ.
ಕಳೆದ ನಾಲ್ಕು ತ್ರೈಮಾಸಿಕಗಳಲ್ಲಿ ಬದಲಾಯಿಸಬಲ್ಲ (ಕನ್ವರ್ಟಿಬಲ್ ನೋಟು) ನಗದು ಮತ್ತು ಸಾಲದ ಮೂಲಕ ಉಡಾನ್ ಸಂಗ್ರಹಿಸಿದ ಒಟ್ಟು ನಿಧಿಯು 350 ಮಿಲಿಯನ್ ಡಾಲರ್ ದಾಟಿದೆ. ಇದರಲ್ಲಿ ಜನವರಿ 2022ರಲ್ಲಿ ಕನ್ವರ್ಟಿಬಲ್ ನೋಟುಗಳ ಮೂಲಕ ಪಡೆದುಕೊಂಡ 200 ಮಿಲಿಯನ್ ಮತ್ತು ಕೊನೆಯ ತ್ರೈಮಾಸಿಕದಲ್ಲಿ ಬಹಿರಂಗಪಡಿಸದ ಹೂಡಿಕೆದಾರರಿಂದ 50 ಮಿಲಿಯನ್ ಡಾಲರ್ ಸಾಲವೂ ಸೇರಿದೆ.

ಬೆಂಗಳೂರು ಮೂಲದ ಉಡಾನ್ ಬಗ್ಗೆ ತಿಳಿಯಿರಿ
ಬೆಂಗಳೂರು ಮೂಲದ ಉಡಾನ್ ಅನ್ನು 2016ರಲ್ಲಿ ಫ್ಲಿಪ್ಕಾರ್ಟ್ ಮಾಜಿ ಕಾರ್ಯನಿರ್ವಾಹಕರಾದ ಅಮೋದ್ ಮಾಳವಿಯಾ, ಸುಜೀತ್ ಕುಮಾರ್ ಮತ್ತು ವೈಭವ್ ಗುಪ್ತಾ ಸ್ಥಾಪಿಸಿದರು. 2018ರಲ್ಲಿ ಉಡಾನ್ 225 ಮಿಲಿಯನ್ ಡಾಲರ್ ಮೌಲ್ಯದ ತನ್ನ ಸರಣಿ C ಸುತ್ತನ್ನು ಪೂರ್ಣಗೊಳಿಸಿದಾಗ ಅಸ್ಕರ್ ಯುನಿಕಾರ್ನ್ ಸ್ಥಾನಮಾನವನ್ನು ಗಳಿಸಿತು. ಇದು ಪ್ರಸ್ತುತ ಜೀವನಶೈಲಿ, ಎಲೆಕ್ಟ್ರಾನಿಕ್ಸ್, ಮನೆ ಮತ್ತು ಅಡುಗೆಮನೆ, ಸ್ಟೇಪಲ್ಸ್, ಹಣ್ಣುಗಳು ಮತ್ತು ತರಕಾರಿಗಳು, FMCG, ಫಾರ್ಮಾ, ಆಟಿಕೆಗಳು ಮತ್ತು ಸಾಮಾನ್ಯ ಸರಕುಗಳಾದ್ಯಂತ ಚಿಲ್ಲರೆ ಮತ್ತು ಇತರ ಆಫ್ಲೈನ್ ಔಟ್ಲೆಟ್ಗಳಿಗೆ ಸರಕುಗಳನ್ನು ಮಾರಾಟ ಮಾಡುತ್ತದೆ.
ಕಳೆದ ಎರಡು ತ್ರೈಮಾಸಿಕಗಳಲ್ಲಿ ಕೊನೆಯ ಹಂತದ ಡೀಲ್ಗಳು ಸತತವಾಗಿ ಕುಸಿದಿರುವ ಕಠಿಣ ಹಣಕಾಸಿನ ವಾತಾವರಣದಲ್ಲಿ ಹಣವನ್ನು ಉಳಿಸಿಕೊಳ್ಳಲು ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರಕ್ಕೆ ಬರಲಾಗುತ್ತಿದೆ. PwC ಯ ಸ್ಟಾರ್ಟ್ಅಪ್ ಡೀಲ್ಸ್ ಟ್ರ್ಯಾಕರ್ ವರದಿಯ ಪ್ರಕಾರ, ಕ್ಯಾಲೆಂಡರ್ ವರ್ಷದ ಮೊದಲ ತ್ರೈಮಾಸಿಕಕ್ಕೆ (Q1CY22) ಹೋಲಿಸಿದರೆ Q3CY22 ನಲ್ಲಿ ಬೆಳವಣಿಗೆ ಮತ್ತು ಕೊನೆಯ ಹಂತದ ಡೀಲ್ಗಳು ಕ್ರಮವಾಗಿ ಶೇ.75 ಮತ್ತು ಶೇ.72ರಷ್ಟು ಕಡಿಮೆಯಾಗಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು












Click it and Unblock the Notifications