Property Tax: 17ವರ್ಷದಿಂದ ಸೇವಾ ಶುಲ್ಕ ಕಟ್ಟದ 'ವಿಧಾನಸೌಧ-ವಿಕಾಸಸೌಧ'..
ಬೆಂಗಳೂರು, ಜುಲೈ 18: ಆಸ್ತಿ ತೆರಿಗೆ ಕಟ್ಟದವರ ಸಾರ್ವಜನಿಕರ ಮನೆ, ಆಸ್ತಿ ಬಗ್ಗೆ ಸರ್ವೇ ನಡೆಸಿ ನೋಟಿಸ್ ಕೊಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ರಾಜ್ಯದ ಶಕ್ತಿ ಕೇಂದ್ರಗಳಿಂದಲೇ ಕೋಟಿಗಟ್ಟಲೇ ಆಸ್ತಿ ಸೇವಾ ಶುಲ್ಕ ಪಾವತಿಯಾಗದೇ ಬಾಕಿ ಉಳಿದುಕೊಂಡಿದೆ. ಸುಮಾರು 17 ವರ್ಷದಿಂದ ಬಾಕಿ ಉಳಿದ ಹಣ ಪಾವತಿಸಿಕೊಳ್ಳಲು ಬಿಬಿಎಂಪಿ ಶತಪ್ರಯತ್ನ ನಡೆಸಲು ಮುಂದಾಗಿದೆ.
ಹೌದು, ರಾಜ್ಯ ಶಕ್ತಿ ಕೇಂದ್ರಗಳೆಂದು ಕರೆಯುವ ವಿಧಾನಸೌಧ ಮತ್ತು ವಿಕಾಸಸೌಧಗಳು ಬಿಬಿಎಂಪಿಗೆ ನಿಗದಿತ ಆಸ್ತಿ ತೆರಿಗೆ ಪಾವತಿಸದೇ ಒಂದೂವರೆ ದಶಕದಿಂದ ವಿಳಂಬ ಮಾಡಿದೆ. ಈ ಎರಡು ಸೌಧಗಳು ತರಿಗೆಯಿಂದ ವಿನಾಯಿತಿ ಪಡೆದಿದ್ದು, ಕನಿಷ್ಠ ತೆರಿಗೆಯ ಸೇವಾ ಭಾಗವನ್ನು ಕಟ್ಟಬೇಕು. ಆದರೆ ಕಟ್ಟದೇ ಬಾಕಿ ಉಳಿಸಿಕೊಂಡಿವೆ ಎಂದು 'ಕನ್ನಡಪ್ರಭ' ಪತ್ರಿಕೆ ವರದಿ ಮಾಡಿದೆ.

ಈ ಸಂಬಂಧ ರಾಜ್ಯ ಸರ್ಕಾರ ಶಕ್ತಿ ಸೌಧಗಳ ಬಿಬಿಎಂಪಿ ತೆರಿಗೆ ಕಟ್ಟುವ ವಿಚಾರದಲ್ಲಿ ವಿನಾಯಿತಿ ಪಡೆದುಕೊಂಡಿದೆ. ಆದರೆ ಕನಿಷ್ಠ ಮೊತ್ತದ ಸೇವಾ ಶುಲ್ಕವನ್ನು ನೋಟಿಸ್ ನೀಡಿದರೂ ಸಹ 17 ವರ್ಷಗಳಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ಸದ್ಯ ಜಾರಿಗೆ ತಂದಿರುವ ''ಒನ್ ಟೈಮ್ ಸೆಟ್ಲಮೆಂಟ್'' (OTS) ಯೋಜನೆ ಮೂಲಕವಾದರೂ ಬಾಕಿ ಇರುವ 7 ಕೋಟಿ ರೂ. ಆಸ್ತಿ ಶುಲ್ಕ ಕಟ್ಟುವಂತೆ ಬಿಬಿಎಂಪಿ ಸರ್ಕಾರಕ್ಕೆ ದುಂಬಾಲು ಬೀಳಲು ಮುಂದಾಗಿದೆ.
ಪ್ರತ್ಯೇಕವಾಗಿ ಎಷ್ಟು ಕೋಟಿ ತೆರಿಗೆ ಬಾಕಿ ಇದೆ
ವಿಧಾನಸೌಧದಕ ಕಟ್ಟಡಕ್ಕೆ 5.35 ಕೋಟಿ ರೂಪಾಯಿ ಹಾಗೂ ವಿಕಾಸಸೌಧದಿಂದ 2.14 ಕೋಟಿ ರೂಪಾಯಿ ಸೇವಾ ಶುಲ್ಕ ಬಾಕಿ ಉಳಿದುಕೊಂಡಿದೆ.
2008ರಲ್ಲಿ ಬಿಬಿಎಪಿ ರಚನೆಯಾದ ಬಳಿಕ ಶಕ್ತಿಸೌಧಗಳ ತೆರಿಗೆ ಮನ್ನಾ ಮಾಡಿತ್ತು. ನಂತರದ ದಿನಗಳಲ್ಲಿ ಹಲವು ಬಿಬಿಎಂಪಿಯು ಶೇಕಡಾ 25ರಷ್ಟು ಮಾತ್ರ ಸೇವಾ ಶುಲ್ಕ ಪಾವತಿಸುವಂತೆ ಕೆಲವು ಬಾರಿ ಮನವಿ ಮಾಡಿತ್ತು. ಅಲ್ಲದೇ ನೋಟಿಸ್ ಮೂಲಕ ಆಡಳಿತ ಮಂಡಳಿಗೆ ಸೂಚನೆ ನೀಡಿತ್ತು.

OTS ಮೂಲಕ ಪಾವತಿಸಿದವರಿಗೆ ರಿಯಾಯಿತಿ
ಇದರ ನಡುವೆ ಇತ್ತೀಚೆಗೆ ಬಿಬಿಎಂಪಿ ಆಸ್ತಿ ತೆರಿಗೆ ಯಾರೆಲ್ಲ ಬಾಕಿ ಉಳಿಸಿಕೊಂಡಿದ್ದಾರೋ ಅವರೆಲ್ಲ ಬಗ್ಗೆ ಸರ್ವೇ ನಡೆಸಿದ ಬಿಬಿಎಂಪಿ ತೆರಿಗೆ ಕಟ್ಟಲು ನೋಟಿಸ್ ಜಾರಿ ಮಾಡಿತು. 'ಅಲ್ಲದೇ ಒನ್ ಟೈಮ್ ಸೆಟ್ಲಮೆಂಟ್' ಯೋಜನೆಯಡಿ ತೆರಿಗೆ ಪಾವತಿಸುವವರಿಗೆ ಒಂದಷ್ಟು ವಿನಾಯಿತಿ ಸಹ ಘೋಷಿಸಿದೆ.
ಇದರಿಂದ ತೆರಿಗೆ ಬಾಕಿ ಉಳಿದಿದ್ದ ಅದೇ ಆಸ್ತಿ ತೆರಿಗೆ ಪುನಃ ಪಾಲಿಕೆಗೆ ಸಂದಾಯವಾಗತೊಡಗಿತು. ಅದೇ ರೀತಿ ಶಕ್ತಿ ಸೌಧಗಳಿಗೂ ಒನ್ ಟೈಮ್ ಸೆಟ್ಲಮೆಂಟ್ ಮೂಲಕ ಕನಿಷ್ಠ ಸೇವಾ ಶುಲ್ಕ ಪಾವತಿಸುವಂತೆ ಕಂದಾಯ ವಿಭಾಗದ ಅಧಿಕಾರಿಗಳು ಮನವಿ ಮಾಡುತ್ತಲೇ ಬಂದಿದ್ದಾರೆ.
ಸೇವಾ ಶುಲ್ಕ ಮನ್ನಾ ಮಾಡಲು ಪತ್ರ: ಮಾಡಲ್ಲ ಎಂದ ಬಿಬಿಎಂಪಿ
ಆದರೆ ಬಿಬಿಎಂಪಿ ಮನವಿಗೆ ಒಪ್ಪದ ಶಕ್ತಿ ಸೌಧಗಳ ಆಡಳಿತ ಸಿಬ್ಬಂದಿ ಸೇವಾ ಶುಲ್ಕ ಸಹ ಮನ್ನಾ ಮಾಡುವಂತೆ ಕೋರಿ ಬಿಬಿಎಂಪಿಗೆ ಪತ್ರ ಬರೆದಿದೆ. ಈಗಾಗಲೇ ಆಸ್ತಿ ತೆರಿಗೆ ಸಂಪೂರ್ಣ ಮನ್ನಾ ಮಾಡಲಾಗಿದ್ದು, ಸೇವಾ ಶುಲ್ಕವನ್ನು ಯಾವುದೇ ಕಾರಣಕ್ಕೂ ಮನ್ನಾ ಮಾಡುವುದಿಲ್ಲ ಎಂದು ಬಿಬಿಎಂಪಿ ಸಷ್ಟಪಡಿಸಿದೆ. ಸೌಧಗಳ ಹೊರಾಂಗಣ ಸ್ವಚ್ಚತೆ, ಕಸ ವಿಲೇವಾರಿಯಂತ ನಿರ್ವಹಣೆಗಾಗಿ ಸೇವಾ ಶುಲ್ಕ ವಿಧಿಸಲಾಗಿದೆ. ಅದನ್ನು ಸರ್ಕಾರ ಪಾವತಿಸುವಂತೆ ಬಿಬಿಎಂಪಿ ಮನವಿ ಮಾಡಿದೆ. ಇದಕ್ಕೆ ಸರ್ಕಾರದ ಉತ್ತರ ನಿರೀಕ್ಷೆಯಲ್ಲಿ ಬಿಬಿಎಂಪಿ ಕಾಯುತ್ತಿದೆ.
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ









Click it and Unblock the Notifications