ನಾಗರಭಾವಿಯಲ್ಲಿ ಯಶ್ ಜತೆ ಕಬಾಬ್ ತಿನ್ನೋಣ ಬನ್ನಿ!
ಬೆಂಗಳೂರು, ಜನವರಿ 23: ಶುಚಿ ಹಾಗೂ ರುಚಿಗೆ ಹೆಸರುವಾಸಿಯಾಗಿರುವ ವೈಶಾಲಿ ಹೋಟೆಲ್ ತನ್ನ ನೂತನ ಶಾಖೆಯನ್ನು ನಾಗರಬಾವಿಯಲ್ಲಿ ತೆರೆಯಲಿದ್ದು ಅದಕ್ಕೆ ಕಬಾಬ್ ಫ್ಯಾಕ್ಟರಿ ಎಂದು ನಾಮಕರಣ ಮಾಡಲಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮವು ಜ.24ರಂದು ಬೆಳಗ್ಗೆ 10ಗಂಟೆಗೆ ನಡೆಯಲಿದೆ.
ಮಾಜಿ ಸಚಿವ ಹಾಗೂ ಖ್ಯಾತನ ನಟ ಅಂಬರೀಶ್ ಹಾಗೂ ನಟ ಯಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ನಟ ಶ್ರೀನಗರ ಕಿಟ್ಟಿ, ಸಚಿವ ಎಂ.ಕೃಷ್ಣಪ್ಪ, ಶಾಸಕರಾದ ಚಲುವರಾಯಸ್ವಾಮಿ, ಮುನಿರತ್ನ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ನಾಗರಭಾವಿ ಸಮೀಪದಲ್ಲಿರುವ ನಾನ್ ವೆಜ್ ಪ್ರಿಯರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಕಬಾಬ್ ಹೋಟೆಲ್ ನಾಗರಭಾವಿ ಬಳಿಯ ರವಿ ಜಿಮ್ ಬಳಿ ಪ್ರಾರಂಭವಾಗುತ್ತಿದೆ.

ವ್ಯವಸ್ಥಾಪಕ ನಿರ್ದೇಶಕರಾದ ಪುರುಷೋತ್ತಮ್ ಅವರ ನೇತೃತ್ವದಲ್ಲಿ ಮೈಸೂರು ರಸ್ತೆಯಲ್ಲಿ ವೈಶಾಲಿ ಹೋಟೆಲ್ ನಡೆಸಲಾಗುತ್ತಿದೆ. ಇದೀಗ ,ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು ಕಬಾಬ್ ಫ್ಯಾಕ್ಟರಿ ಹೋಟೆಲ್ ನ್ನು ತೆರೆಯಲಾಗುತ್ತಿದೆ.












Click it and Unblock the Notifications