ಬೆಂಗಳೂರಿನಲ್ಲಿ ಜು.15 'ಉಪಾಸನಾ ಟ್ರಸ್ಟ್ ಹದಿನೆಂಟರ ಸಂಭ್ರಮ'
ಬೆಂಗಳೂರು, ಜುಲೈ 11: ವಿನೂತನ ರೀತಿಯಲ್ಲಿ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುವ ಉಪಾಸನಾ ಟ್ರಸ್ಟ್ ಆರಂಭವಾಗಿ 2017 ಕ್ಕೆ ಹದಿನೆಂಟು ವರ್ಷ ತುಂಬಿದೆ.
ತನ್ನಿಮಿತ್ತ "ಉಪಾಸನಾ ಟ್ರಸ್ಟ್ ಹದಿನೆಂಟರ ಸಂಭ್ರಮ" ಪ್ರಶಸ್ತಿ ಪ್ರದಾನ, ಗೀತಗಾಯನ ಮತ್ತು ನೃತ್ಯ ಕಾರ್ಯಕ್ರಮವನ್ನು ಜುಲೈ 15, ಶನಿವಾರದಂದು ಸಂಜೆ 6 ಗಂಟೆಗೆ ಬೆಂಗಳೂರಿನ ಜಯನಗರ 7 ನೇ ಬ್ಲಾಕ್ ನ ಜೆ.ಎಸ್.ಎಸ್.ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಅದಮ್ಯ ಚೇತನ ಟ್ರಸ್ಟ್ ನ ನಿರ್ದೇಶಕಿ ತೇಜಸ್ವಿನಿ ಅನಂತಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಖ್ಯಾತ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಪ್ರಸಿದ್ಧ ಸುಗಮ ಸಂಗೀತ ಗಾಯಕಿ ಬಿ.ಎಸ್.ಮೀರ ಮತ್ತು ಪ್ರಸಿದ್ಧ ಕೊಳಲು ವಾದಕ ಎಲ್.ಎನ್.ವಸಂತಕುಮಾರ್ ಅವರನ್ನು ಸನ್ಮಾನಿಸಲಾಗುವುದೆಂದು ಉಪಾಸನಾ ಟ್ರಸ್ಟ್ ನ ಮೋಹನ್ ತಿಳಿಸಿದ್ದಾರೆ.

ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದ್ದು, ಸಹೃದಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.












Click it and Unblock the Notifications