ನಂದಿ ಹಿಲ್ಲಥಾನ್ : ಯಾಕಾಗಿ? ಏನಿದರ ಮಹತ್ವ?
ಬೆಂಗಳೂರು, ಮೇ 30: ಯುನೈಟೆಡ್ ವೇ ಬೆಂಗಳೂರು ಆಶ್ರಯದಲ್ಲಿ "ನಂದಿ ಹಿಲ್ಲಥಾನ್ " ಜೂನ್ 12 ಭಾನುವಾರ ನಡೆಯಲಿದೆ. ಪರಿಸರ ಸಮತೋಲನ, ಜಾಗೃತಿ, ಕಸ ವಿಲೇವಾರಿ, ಸುಂದರ ರಸ್ತೆಗಳು ಎಂಬ ಪರಿಕಲ್ಪನೆ ಆಧಾರದಲ್ಲಿ ಮ್ಯಾರಥಾನ್ ನಡೆಯಲಿದೆ.
ನಂದಿ ಹಿಲ್ಲಥಾನ್ ಪ್ರಮುಖ ಅಂಶಗಳು
* ನಂದಿ ಬೆಟ್ಟದ ಬುಡದಲ್ಲಿ ಮ್ಯಾರಥಾನ್ ಓಟ ಆರಂಭವಾಗಲಿದೆ.[ಬುಗುರಿ, ಗೋಲಿ, ಗಿಲ್ಲಿದಾಂಡು ಆಡುತ್ತ ಮ್ಯಾರಥಾನ್ ಓಡಿ]
* ಸಂಗ್ರಹವಾಗುವ ಹಣವನ್ನು ಗ್ರಾಮೀಣ ಜನರ ಉದ್ಧಾರಕ್ಕೆ ಬಳಕೆ ಮಾಡಿಕೊಳ್ಳಲಾಗುವುದು.
* ತೃತೀಯ ಲಿಂಗಿಗಳು ಸಹ ಓಟದಲ್ಲಿ ಭಾಗವಹಿಸಲಿದ್ದಾರೆ.
* ಸ್ಥಳೀಯ ಯುವಕರು ಸಹಕಾರ ನೀಡಿಲಿದ್ದು ಮ್ಯಾರಥಾನ್ ನಲ್ಲಿ ಭಾಗವಹಿಸಲಿದ್ದಾರೆ
* ಅರಣ್ಯ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಕಾರ್ಯಕ್ರಮಕ್ಕೆ ಸಹಕಾರ ನೀಡಲಿವೆ.
ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸ್ಥಳೀಯ ಯುವಕರು ಈಗಾಗಲೇ ಜನರಿಗೆ ಮಾಹಿತಿ ನೀಡಿ ಹಿಲ್ಲಥಾನ್ ಸಿದ್ಧತೆಯಲ್ಲಿ ತೊಡಗಿದ್ದಾರೆ. ಅಲ್ಲಲ್ಲಿ ಬ್ಯಾನರ್ ಗಳನ್ನು ಅಳವಡಿಕೆ ಮಾಡಲಾಗುತ್ತಿದೆ.

ಯಾರ್ಯಾರು ಭಾಗವಹಿಸಲಿದ್ದಾರೆ?
ಪರಿಸರ ವಾದಿ ಡಾ ಯಲ್ಲಪ್ಪ ರೆಡ್ಡಿ, , ಬೆಂಗಳೂರು ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಧರ್ ಪಬ್ಬಿಶೆಟ್ಟಿ ಕಲ್ಪನಾ ಕೌರ್, ನಿಕೊಲ್ ಫರೀರಾ, ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾರಣ್ಯ, ಚಿಲುಮೆ, ಸೆ ಟ್ರೀಸ್, ಎನ್ ಫೋಲ್ಡ್, ಕಘಜ್, ಸೆಲ್ಕೋ ಫೌಂಡೇಶನ್, ಸಮಂಥಮ್ ಎನ್ ಜಿಒ ಗಳು ಮ್ಯಾರಥಾನ್ ಗೆ ಸಾಥ್ ನೀಡಲಿವೆ.

ಸಂಸ್ಥೆಗಳ ಸಹಕಾರ
ಡೆಕೋರಾ, ಫೋರ್ಸ್, ಇಂದಿರಾನಗರ್ ಸೆಕೆಂಡ್ ಸ್ಟೇಜ್ ಲೀಗ್, ಸೋಮ ಸುಂದರಪಾಳ್ಯ ಅಭಿವೃದ್ಧಿ ಟ್ರಸ್ಟ್, ಸಿಫೋರ್ಸ್ ಸಂಜಯನಗರ್ ಸಂಸ್ಥೆಗಳು ಸಹಕಾರ ನೀಡಲಿವೆ.

ಯುನೈಟೆಡ್ ವೇ ಬೆಂಗಳೂರು
ಸಮುದಾಯ ಅಭಿವೃದ್ಧಿ, ಶಿಕ್ಷಣ, ಪರಿಸರ ಉಳಿಸುವಲ್ಲಿ ಸದಾ ಮುಂದಿರುವ ಯುನೈಡೆಟ್ ವೇ ಬೆಂಗಳೂರು ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿದೆ. ಜನರಿಗೆ ಮೂಲ ಸೌಕರ್ಯ ನೀಡುವುದರೊಂದಿಗೆ ಜೀವನ ಕ್ರಮದಲ್ಲಿ ಬದಲಾವಣೆ ತರುವುದು ಸಂಸ್ಥೆಯ ಮುಖ್ಯ ಧ್ಯೇಯ.

ಸಾಮಾಜಿಕ ಕಾರ್ಯ
ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ನೀಡುವುದು, ಆರೋಗ್ಯ ಶಿಬಿರ ನಡೆಸುವುದು ಮತ್ತು ಮೂಲ ಸೌಕರ್ಯ ಒದಗಿಸುವ ಕೆಲಸವನ್ನು ಯುನೈಡೆಟ್ ವೇ ಬೆಂಗಳೂರು ಆರಂಭದಿಂದ ಮಾಡಿಕೊಂಡು ಬಂದಿದೆ.

ಕಾರ್ಪೋರೇಟ್ ಪಾಲುದಾರರು
ಹಿಲ್ಲಥಾನ್ ಗೆ ಕಾರ್ಪೋರೇಟ್ ಕಂಪನಿಗಳು ಸಹಕಾರ ನೀಡುತ್ತಿವೆ. ತ್ರೀ ಎಂ, ಡಿಲೋಟ್, ಜಿಇ, ಟಾರ್ಗೆಟ್, ಥಾಮ್ಸನ್ ರಿಟರ್ನ್ಸ್, ಗೋಲ್ಡ್ ಮ್ಯಾನ್ ಸಾಚ್ಸ್, ಯುಟಿಸಿ, ಐಗೇಟ್ ಕಂಪನಿಗಳು ಸಾಥ್ ನೀಡಲಿವೆ.

ಮಾರ್ಗದರ್ಶನ
ಒನ್ ಇಂಡಿಯಾ.ಕಾಮ್, ಎಸ್ ಆರ್ ನೋವಾ, ಐಗೇಟ್ಇಂಡಸ್ ಲಾ, ಮಣಿಪಾಲ್ ಫೌಂಡೇಶನ್, ಪಥಂಮ್ ಬುಕ್ಸ್, ಆಲ್ ಸ್ಟೇಟ್, ಅಲ್ಸೆಲ್ ಪಾರ್ಟನ್ಸ್, ನಾರ್ಥನ್ ಟ್ರಸ್ಟ್, ಟಿಐಇ ಬೆಂಗಳೂರು ಆಂಡ್ ಪೀಪಲ್ ಬಿಸಿನಸ್ ಇಂಡಿಯಾ ಕಂಪನಿಗಳ ಮಾರ್ಗದರ್ಶನದಲ್ಲಿ ಮ್ಯಾರಥಾನ್ ಓಟ ನಡೆಯಲಿದೆ.

ಎಲ್ಲಿಂದ ಆರಂಭ?
ಸುಲ್ತಾನ ಪೇಟ್ ಸಮೀಪದ ಕಣಿವೆ ನಂದೀಶ್ವರ ದೇವಾಲಯದ ಸಮೀಪದ ಡಿಸ್ಕವರಿ ವಿಲೇಜ್ ಬಳಿಯಿಂದ ಮ್ಯಾರಥಾನ್ ಆರಂಭವಾಗಲಿದೆ. 21 ಕಿಮೀ ವ್ಯಾಪ್ತಿಯಲ್ಲಿ ಮ್ಯಾರಥಾನ್ ನಡೆಯಲಿದೆ. ಸ್ಥಳೀಯರು ಈಗಾಗಲೇ ಪ್ರಚಾರ ಮತ್ತು ಸಿದ್ಧತೆಯಲ್ಲಿ ತೊಗಡಿಕೊಂಡಿದ್ದಾರೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications