ಸಾಮಾಜಿಕ ಮಾಧ್ಯಮಗಳಲ್ಲೂ ರವಿ ಬೆಳಗೆರೆ ಬಂಧನ ಪ್ರತಿಧ್ವನಿ
ಬೆಂಗಳೂರು, ಡಿಸೆಂಬರ್ 09: ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆಯವರನ್ನು ಸಿಸಿಬಿ ಪೊಲೀಸರು ನಿನ್ನೆ ಬಂಧಿಸಿರುವ ಪ್ರಕರಣ ಇಂದೂ ಬಿಸಿ ಬಿಸಿ ಸುದ್ದಿಯಾಗಿ ಚರ್ಚೆಯಾಗುತ್ತಲೇ ಇದೆ.
ಪ್ರಕರಣದ ಕುರಿತು ಊಹಾಪೋಹಗಳನ್ನು ಬಿಟ್ಟರೆ, ಯಾವುದೇ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ವಿಚಾರಣೆಯ ನಂತರವೇ ಸತ್ಯ ಹೊರಬೀಳಲಿದೆ.
ಅನಾರೋಗ್ಯದ ಕಾರಣ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿ ಬೆಳಗೆರೆಯವರನ್ನು ನಾಲ್ಕು ದಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.
ಈ ಕುರಿತು ಕೆಲವು ರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯಾಗಿದೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲೂ ಇದು ವ್ಯಾಪಕ ಚರ್ಚೆಯಾಗುತ್ತಿದೆ. ಬೆಳೆಗೆರೆ ಅಭಿಮಾನಿಗಳಿಗೆ ಈ ಆಘಾತದ ಸುದ್ದಿ ನುಂಗಲಾರದ ಬಿಸಿತುಪ್ಪ ಅನ್ನಿಸಿದೆ.
|
ಪ್ರಶಸ್ತಿ ಹಿಂದಿರುಗಿಸಿದವರೆಲ್ಲ ಎಲ್ಲಿ ಹೋದರು?!
ಅಸಹಿಷ್ಣುತೆಯ ಹೆಸರಿನಲ್ಲಿ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ ಕೆಲವು ಪತ್ರಕರ್ತರೆಲ್ಲ ಈಗ ಎಲ್ಲಿ ಹೋದರು. ತಮ್ಮ ಸಹೋದ್ಯೋಗಿಯ ಮೆಲೆ ಇಂಥ ಆರೋಪ ಬಂದಿರುವ ಬಗ್ಗೆ ಅವರು ಏನು ಪ್ರತಿಕ್ರಿಯೆ ನೀಡುತ್ತಾರೆ?! ಎಂದು ಶೀಥಲ್ ಆರ್ ಸಂಜಯ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಅವರವರ ಕರ್ಮದ ಫಲ ಅನುಭವಿಸಲೇಬೇಕು!
ಗೌರಿ ಲಂಕೇಶ್ ಹತ್ಯೆಯ ಸಮಯದಲ್ಲಿ ರವಿ ಬೆಳಗೆರೆಯವರು ಉಪದೇಶ ನೀಡುತ್ತಿದ್ದುದನ್ನು ನಾನು ನೋಡಿದ್ದೆ. ಆದರೆ ಈಗ ಅವರೇ ತಮ್ಮ ಸಹೋದ್ಯೋಗಿಯೊಬ್ಬರ ಹತ್ಯೆಗೆ ಸುಪಾರಿ ಕೊಟ್ಟಿದ್ದಾರೆಂಬುದು ತಿಳಿಯಿತು. ಏನೇ ಆದರೂ ಯಾವತ್ತೂ ಗೆಲ್ಲುವುದು ಕರ್ಮವೇ! ಅವರವರ ಕರ್ಮದ ಫಲ ಅವರವರೇ ಅನುಭವಿಸಬೇಕು! ಎಂದು ಗುರುಪ್ರಸಾದ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಮತ್ತೊಬ್ಬರ ಬಗ್ಗೆ ಬರೆಯುತ್ತಾರೆ!
ಮತ್ತೊಬ್ಬರ ಬಗ್ಗೆ ಬರೆಯುವ, ವಿಮರ್ಶೆ ಮಾಡುವ ಪತ್ರಕರ್ತರು ತಾವೇ ಸುಪಾರಿ ಕಿಲ್ಲರ್ ಗಳಾಗುತ್ತಿದ್ದಾರೆ. ಇಂಥವರನ್ನು ಜೈಲಿಗೆ ಹಾಕಲೇ ಬೇಕು. ನಿಜಕ್ಕೂ ಇಂಥ ನಡೆಗಳು ಪತ್ರಕರ್ತರು ನಾಚಿಕೆ ಪಡುವಂಥ ವಿಷಯ ಎಂದು ಕಿಶನ್ ಚಡಗ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಇದಕ್ಕೂ ಮೋದಿ ಕಾರಣ ಎನ್ನಬೇಡಿ!
ಟೌನ್ ಹಾಲ್ ಸಹ ಈ ಲಿಬ್ರಲ್ ಗಳ ಕಳ್ಳ ಹೋರಾಟಗಳನ್ನು ನೋಡಿ ನೋಡಿ ವಾಕರಿಸಿಕೊಂಡಿದೆ,ಅವತ್ತು ಲಬ್ಬೊ ಅಂತ ಬಾಯಿ ಬಡಿದುಕೊಂಡ ಸರ್ವೋತ್ತಮರೆಲ್ಲ ಎಲ್ಲಿದಿರಪ್ಪ, ಇದಕ್ಕೂ ಮತ್ತೆ ಮೋದಿ ಕಾರಣ ಅಂಥ ಹೇಳಿ ಟೌನ್ ಹಾಲ್ ಕಡೆ ಓಡಿ ಹೋಗಿರ ಬಹುದೇನೋ ಎಂದು ರವಿ ಕೀರ್ತಿ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಪ್ರಕಾಶ್ ರೈ ಎಲ್ಲಿದ್ದೀರಾ?
ಪ್ರಕಾಶ್ ರೈ ಅವರೇ ಈಗ ಎಲ್ಲಿದ್ದೀರಾ? ಈ ಪ್ರಶ್ನೆ ಮಾಡುವುದಕ್ಕೆ ಬರುವುದಿಲ್ಲವೇ ಎಂದು ವೆಂಕಟರಮಣನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications