ಸಾಮಾಜಿಕ ಮಾಧ್ಯಮಗಳಲ್ಲೂ ರವಿ ಬೆಳಗೆರೆ ಬಂಧನ ಪ್ರತಿಧ್ವನಿ
ಬೆಂಗಳೂರು, ಡಿಸೆಂಬರ್ 09: ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆಯವರನ್ನು ಸಿಸಿಬಿ ಪೊಲೀಸರು ನಿನ್ನೆ ಬಂಧಿಸಿರುವ ಪ್ರಕರಣ ಇಂದೂ ಬಿಸಿ ಬಿಸಿ ಸುದ್ದಿಯಾಗಿ ಚರ್ಚೆಯಾಗುತ್ತಲೇ ಇದೆ.
ಪ್ರಕರಣದ ಕುರಿತು ಊಹಾಪೋಹಗಳನ್ನು ಬಿಟ್ಟರೆ, ಯಾವುದೇ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ವಿಚಾರಣೆಯ ನಂತರವೇ ಸತ್ಯ ಹೊರಬೀಳಲಿದೆ.
ಅನಾರೋಗ್ಯದ ಕಾರಣ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿ ಬೆಳಗೆರೆಯವರನ್ನು ನಾಲ್ಕು ದಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.
ಈ ಕುರಿತು ಕೆಲವು ರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯಾಗಿದೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲೂ ಇದು ವ್ಯಾಪಕ ಚರ್ಚೆಯಾಗುತ್ತಿದೆ. ಬೆಳೆಗೆರೆ ಅಭಿಮಾನಿಗಳಿಗೆ ಈ ಆಘಾತದ ಸುದ್ದಿ ನುಂಗಲಾರದ ಬಿಸಿತುಪ್ಪ ಅನ್ನಿಸಿದೆ.
|
ಪ್ರಶಸ್ತಿ ಹಿಂದಿರುಗಿಸಿದವರೆಲ್ಲ ಎಲ್ಲಿ ಹೋದರು?!
ಅಸಹಿಷ್ಣುತೆಯ ಹೆಸರಿನಲ್ಲಿ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ ಕೆಲವು ಪತ್ರಕರ್ತರೆಲ್ಲ ಈಗ ಎಲ್ಲಿ ಹೋದರು. ತಮ್ಮ ಸಹೋದ್ಯೋಗಿಯ ಮೆಲೆ ಇಂಥ ಆರೋಪ ಬಂದಿರುವ ಬಗ್ಗೆ ಅವರು ಏನು ಪ್ರತಿಕ್ರಿಯೆ ನೀಡುತ್ತಾರೆ?! ಎಂದು ಶೀಥಲ್ ಆರ್ ಸಂಜಯ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಅವರವರ ಕರ್ಮದ ಫಲ ಅನುಭವಿಸಲೇಬೇಕು!
ಗೌರಿ ಲಂಕೇಶ್ ಹತ್ಯೆಯ ಸಮಯದಲ್ಲಿ ರವಿ ಬೆಳಗೆರೆಯವರು ಉಪದೇಶ ನೀಡುತ್ತಿದ್ದುದನ್ನು ನಾನು ನೋಡಿದ್ದೆ. ಆದರೆ ಈಗ ಅವರೇ ತಮ್ಮ ಸಹೋದ್ಯೋಗಿಯೊಬ್ಬರ ಹತ್ಯೆಗೆ ಸುಪಾರಿ ಕೊಟ್ಟಿದ್ದಾರೆಂಬುದು ತಿಳಿಯಿತು. ಏನೇ ಆದರೂ ಯಾವತ್ತೂ ಗೆಲ್ಲುವುದು ಕರ್ಮವೇ! ಅವರವರ ಕರ್ಮದ ಫಲ ಅವರವರೇ ಅನುಭವಿಸಬೇಕು! ಎಂದು ಗುರುಪ್ರಸಾದ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಮತ್ತೊಬ್ಬರ ಬಗ್ಗೆ ಬರೆಯುತ್ತಾರೆ!
ಮತ್ತೊಬ್ಬರ ಬಗ್ಗೆ ಬರೆಯುವ, ವಿಮರ್ಶೆ ಮಾಡುವ ಪತ್ರಕರ್ತರು ತಾವೇ ಸುಪಾರಿ ಕಿಲ್ಲರ್ ಗಳಾಗುತ್ತಿದ್ದಾರೆ. ಇಂಥವರನ್ನು ಜೈಲಿಗೆ ಹಾಕಲೇ ಬೇಕು. ನಿಜಕ್ಕೂ ಇಂಥ ನಡೆಗಳು ಪತ್ರಕರ್ತರು ನಾಚಿಕೆ ಪಡುವಂಥ ವಿಷಯ ಎಂದು ಕಿಶನ್ ಚಡಗ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಇದಕ್ಕೂ ಮೋದಿ ಕಾರಣ ಎನ್ನಬೇಡಿ!
ಟೌನ್ ಹಾಲ್ ಸಹ ಈ ಲಿಬ್ರಲ್ ಗಳ ಕಳ್ಳ ಹೋರಾಟಗಳನ್ನು ನೋಡಿ ನೋಡಿ ವಾಕರಿಸಿಕೊಂಡಿದೆ,ಅವತ್ತು ಲಬ್ಬೊ ಅಂತ ಬಾಯಿ ಬಡಿದುಕೊಂಡ ಸರ್ವೋತ್ತಮರೆಲ್ಲ ಎಲ್ಲಿದಿರಪ್ಪ, ಇದಕ್ಕೂ ಮತ್ತೆ ಮೋದಿ ಕಾರಣ ಅಂಥ ಹೇಳಿ ಟೌನ್ ಹಾಲ್ ಕಡೆ ಓಡಿ ಹೋಗಿರ ಬಹುದೇನೋ ಎಂದು ರವಿ ಕೀರ್ತಿ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಪ್ರಕಾಶ್ ರೈ ಎಲ್ಲಿದ್ದೀರಾ?
ಪ್ರಕಾಶ್ ರೈ ಅವರೇ ಈಗ ಎಲ್ಲಿದ್ದೀರಾ? ಈ ಪ್ರಶ್ನೆ ಮಾಡುವುದಕ್ಕೆ ಬರುವುದಿಲ್ಲವೇ ಎಂದು ವೆಂಕಟರಮಣನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
-
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
SSLC Hindi Exam: ಮಾರ್ಚ್ 30ರ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ











Click it and Unblock the Notifications