ಮನವೊಲಿಸಲು ಯಶಸ್ವಿಯಾದ್ರಾ ಡಿಕೆಶಿ: ಮತ್ತೆ ನಿರ್ಧಾರ ಬದಲಿಸಿದ್ರಾ ಶಾಸಕರು?
Recommended Video
ಮೈತ್ರಿ ಸರ್ಕಾರ ಉಳಿಸಿಕೊಳ್ಳುವಲ್ಲಿ ಡಿಕೆಶಿ ಪ್ರಯತ್ನ ಯಶಸ್ವಿಯಾಯ್ತಾ? | Oneindia Kannada
ಬೆಂಗಳೂರು, ಜುಲೈ 6: ಬೆಂಗಳೂರು ಶಾಸಕರನ್ನು ಡಿಕೆ ಶಿವಕುಮಾರ್ ಅವರು ತಮ್ಮ ಕಾರಿನಲ್ಲಿ ಸರ್ಕಾರಿ ಬಂಗಲೆಗೆ ಕರೆದೊಯ್ದಿದ್ದಾರೆ.
ಹಾಗಾದರೆ ಡಿಕೆ ಶಿವಕುಮಾರ್ ಅವರು ಅತೃಪ್ತ ಶಾಸಕರ ಮನವೊಲಿಸಲು ಯಶಸ್ವಿಯಾದರಾ, ಶಾಸಕರು ತಮ್ಮ ನಿರ್ಧಾರವನ್ನು ಬದಲಿಸಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ.
ವಿಧಾನಸೌಧಕ್ಕೆ ಡಿಕೆ ಶಿವಕುಮಾರ್ ಆಗಮನಕ್ಕೂ ಮುನ್ನ 12 ಮಂದಿ ಶಾಸಕರು ರಾಜೀನಾಮೆ ನೀಡಿದ್ದರು. ಈಗ ಮಾತನಾಡಿ ಏನು ಪ್ರಯೋಜನವಿಲ್ಲ ಎಂದು ರಮೇಶ್ ಜಾರಕಿಹೊಳಿ ಶಿವಕುಮಾರ್ಗೆ ಹೇಳಿದ್ದರು.

ಈಗ ಅತೃಪ್ತ ಶಾಸಕರು ರಾಜಭವನಕ್ಕೆ ತೆರಳಲಿದ್ದಾರೆ. ವಿಧಾನಸೌಧದಲ್ಲಿ ಸ್ಪೀಕರ್ ಇಲ್ಲದ ಕಾರಣ ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಹೇಳುವಂತೆ ಅವರ ಬಳಿ 25 ಶಾಸಕರ ರಾಜೀನಾಮೆ ಪತ್ರವಿದೆ.
ಶಾಸಕ ಮುನಿರತ್ನ ಅವರ ರಾಜೀನಾಮೆ ಪತ್ರವನ್ನು ಡಿಕೆ ಶಿವಕುಮಾರ್ ಹರಿದುಹಾಕಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications