ಅರಮನೆ ಮೈದಾನದಲ್ಲಿ ಮೋದಿ ಸಮಾವೇಶ, ಏರ್ಪೋರ್ಟ್ ಮಾರ್ಗ ಬದಲು
ಬೆಂಗಳೂರು,ಏ.13: ಲೋಕಸಭಾ ಚುನಾವಣೆ ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿಯೇ ಇದೆ. ಅರಮನೆ ಮೈದಾನಲ್ಲಿ ಇಂದು(ಏ.13) ಬಿಜೆಪಿ ಸಭೆ ನಡೆಯಲಿದೆ.
ಬಹುದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಸೇರುವ ಸಾಧ್ಯತೆ ಇರುವ ಕಾರಣ, ಸಂಚಾರ ದಟ್ಟಣೆ ಉಂಟಾಗುವ ಎಲ್ಲಾ ಸಾಧ್ಯತೆ ಇದೆ.
ಶನಿವಾರ ಕರ್ನಾಟಕದಲ್ಲಿ ಮೋದಿ, ರಾಹುಲ್ ಪ್ರಚಾರ
ಸಂಜೆ 4 ಗಂಟೆಗೆ ಆರಂಭವಾಗುವ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದು, ಎಚ್ಎಎಲ್ ವಿಮಾನ ನಿಲ್ದಾಣದಿಂದ ಅರಮನೆ ಮೈದಾನಕ್ಕೆ ಆಗಮನ ಮತ್ತು ನಿರ್ಗಮಿಸುವ ವೇಳೆ ಜೋರೋ ಟ್ರಾಫಿಕ್ ಇರುವ ಕಾರಣ ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.
ಅರಮನೆ
ಮೈದಾನದ
ಸುತ್ತಲಿನ
ರಸ್ತೆಗಳಲ್ಲಿ
ಟ್ರಾಫಿಕ್
ಜಾಮ್
ಆಗುವ
ಕಾರಣ
ಕೆಐಎ
ವಿಮಾನ
ನಿಲ್ದಾಣಕ್ಕೆ
ತೆರಳುವ
ಪ್ರಯಾಣಿಕರು
ಅರಮನೆ
ಮೈದಾನದ
ಬದಲು
ತಮ್ಮ
ಪ್ರದೇಶದಿಂದ
ರಿಂಗ್
ರಸ್ತೆಗೆ
ತೆರಳಿ
ಹೆಬ್ಬಾಳ
ಮೂಲಕ
ಕೆಐಎ
ಕಡೆ
ತೆರಳಬಹುದು.
ಬೆಂಗಳೂರಿನಿಂದ ಶಿರಡಿಗೆ ನಿತ್ಯ ವಿಮಾನ ಸೇವೆ
ಶನಿವಾರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ರಮಣ ಮಹರ್ಷಿ ರಸ್ತೆ, ಸರ್ ಸಿವಿ ರಾಮನ್ ರಸ್ತೆ, ಬಳ್ಳಾರಿ ರಸ್ತೆ, ಹೆಬ್ಬಾಳ ಮೇಲು ಸೇತುವೆ, ಮೇಖ್ರಿ ವೃತ್ತ, ಹಳೇ ವಿಮಾನ ನಿಲ್ದಾಣ ರಸ್ತೆ, ಕಬ್ಬನ್ ರಸ್ತೆ, ಚಾಲುಕ್ಯ ವೃತ್ತ ಮತ್ತು ಸದಾಶಿವನಗರ ವಸತಿ ಸಮುಚ್ಚಯ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ನಿಷೇಧಿಸಲಾಗಿದೆ.