ಮೊಹರಂ ಮೆರವಣಿಗೆ, ಸಂಚಾರ ಮಾರ್ಗ ಬದಲು
ಬೆಂಗಳೂರು, ನ.4 : ಮಂಗಳವಾರ ಮೊಹರಂ ಹಬ್ಬದ ಅಂಗವಾಗಿ ಮುಸ್ಲಿಂ ಭಾಂದವರು ಬೆಂಗಳೂರಿನ ಅಶೋಕನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸೂರು ರಸ್ತೆಯಲ್ಲಿ 'ಅಂಜುಮಾನ್ ಇ ಇಮಾಮಿಯಾ' (ರಿ) ಸಂಸ್ಥೆ ವತಿಯಿಂದ ಮೆರವಣಿಗೆ ಹಮ್ಮಿಕೊಂಡಿದ್ದಾರೆ.
ಹೊಸೂರು
ರಸ್ತೆಯ
ಜಾನ್ಸನ್
ಮಾರ್ಕೆಟ್ನಿಂದ
ಎಲ್ಜಿನ್
ಅಪಾರ್ಟ್ಮೆಂಟ್
(ಸಿಯಾ
ರುದ್ರ
ಭೂಮಿ)
ವರೆಗೆ
ಈ
ಮೆರವಣಿಗೆ
ನಡೆಯಲಿದೆ.
ಆದ್ದರಿಂದ
ಈ
ರಸ್ತೆಯಲ್ಲಿ
ಸಂಚರಿಸುವ
ಎಲ್ಲಾ
ಮಾದರಿಯ
ವಾಹನ
ಸಂಚಾರವನ್ನು
ನ.4
ರ
ಮಂಗಳವಾರ
ಬೆಳಗ್ಗೆ
11
ಗಂಟೆಯಿಂದ
ಸಂಜೆ
5
ಗಂಟೆಯವರೆಗೆ
ನಿಷೇಧಿಸಲಾಗಿದೆ.
ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಿ ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಪರ್ಯಾಯ ಮಾರ್ಗಗಳು ಹೀಗಿವೆ.
* ಆಡುಗೋಡಿ, ಆನೇಪಾಳ್ಯ ಕಡೆಯಿಂದ ಬರುವ ವಾಹನ ಸವಾರರು ಸಿಮೆಂಟ್ರಿ ಕ್ರಾಸ್ ಬಳಿ ಕಡ್ಡಾಯವಾಗಿ ಎಡ ತಿರುವು ಪಡೆದುಕೊಂಡು ಬರ್ಲೀ ಸ್ಟ್ರೀಟ್ ಮಾರ್ಗವಾಗಿ ಮುಂದೆ ಸಂಚರಿಸಬೇಕು.
* ರಿಚ್ಮಂಡ್ ವೃತ್ತ, ನಂಜಪ್ಪ ವೃತ್ತದ ಕಡೆಯಿಂದ ಬರುವವರು ಸಿ.ಎಂ.ಪಿ. ಗೇಟ್ ಬಳಿ ಕಡ್ಡಾಯವಾಗಿ ಬಲ ತಿರುವು ಪಡೆದುಕೊಂಡು ಆನೇಪಾಳ್ಯ ಕಡೆಗೆ ಸಂಚರಿಸಬೇಕು.
* ಬ್ರಿಗೇಡ್ ರಸ್ತೆ, ಡಿಸೋಜಾ ವೃತ್ತದ ಕಡೆಯಿಂದ ಬಂದು ಹೊಸೂರು ರಸ್ತೆ ಮೂಲಕ ಆನೇಪಾಳ್ಯ ಕಡೆಗೆ ಹೋಗುವ ವಾಹನಗಳು ಕಡ್ಡಾಯವಾಗಿ ರಿಚ್ಮಂಡ್ ವೃತ್ತದ ಕಡೆಗೆ ಸಂಚರಿಸಿ ಮುಂದೆ ಸಾಗಬಹುದು.