ಟಿಪ್ಪು ಜಯಂತಿ ಆಚರಣೆ: ಪರಮೇಶ್ವರ್ ಉನ್ನತ ಮಟ್ಟದ ಸಭೆ
ಬೆಂಗಳೂರು, ನವೆಂಬರ್ 5: ಟಿಪ್ಪು ಜಯಂತಿ ಆಚರಣೆ ವಿರುದ್ಧ ವಿರೋಧ ಕೇಳಿಬರುತ್ತಿದೆ ಇದರ ಮಧ್ಯೆಯೂ ಟಿಪ್ಪು ಆಚರಣೆಗೆ ಸರ್ಕಾರ ಅಣಿಯಾಗಿದೆ. ಟಿಪ್ಪು ಜಯಂತಿ ಆಚರಣೆಗೆ ದೋಸ್ತಿ ಸರ್ಕಾರ ಸಿದ್ಧತೆಗಾಗಿ ಗೃಹ ಖಾತೆ ಹೊಂದಿರುವ ಡಿಸಿಎಂ ಜಿ ಪರಮೇಶ್ವರ ಅವರು ಇಂದು(ನ.5ರಂದು) ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.
ಟಿಪ್ಪು ಜಯಂತಿಗೆ ಪ್ರತಿಪಕ್ಷ ಬಿಜೆಪಿ, ಹಿಂದು ಸಂಘಟನೆಗಳ ಆಕ್ಷೇಪವಿದ್ದರೂ ಕೂಡ ಈ ನಡುವೆ ಟಿಪ್ಪಿ ಜಯಂತಿ ಆಚರಣೆಗೆ ಸಿದ್ಧವಾಗಿದೆ. ಈ ವಿಚಾರವಾಗಿ ಪರಮೇಶ್ವರ ಮಾತನಾಡಿ ಟಿಪ್ಪು ಜಯಂತಿ ವೇಳೆ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
'ಯಾರೂ ವಿರೋಧ ಮಾಡಿದರೂ ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ'
ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ವಿರೋಧ
ಬಿಜೆಪಿಯವರು ಕೋಮುವಾದಿಗಳು, ಇದೇ ಕಾರಣಕ್ಕೆ ಟಿಪ್ಪು ಜಯಂತಿ ವಿರೋಧಿಸುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ದೂರಿದರು. ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸದಂತೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮನವಿಗೆ ಪ್ರತಿಕ್ರೊಯಿಸಿ ಶಿಷ್ಟಾಚಾರ ರೀತಿಯ ಆಮಂತ್ರಣ ಪತ್ರಿಕೆ ಮುದ್ರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.