ಹೊರದೇಶದ ವಿದ್ಯಾರ್ಥಿಗಳು ಹಣ ಉಳಿಸಲು ಏನು ಮಾಡಬೇಕು?
ಬೆಂಗಳೂರು, ಆಗಸ್ಟ್. 03 : ವಿದ್ಯಾರ್ಥಿಗಳು ಜೀವನದಲ್ಲಿ ತಮ್ಮದೇ ಆದ ಗುರಿಗಳೊಂದಿಗೆ ಸಾಗುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಹೊರದೇಶಗಳಿಗೆ ಹೋಗಿ ವಿದ್ಯಾಭ್ಯಾಸ ಪಡೆಯುವ ಹಂಬಲ ಕೆಲವರಿಗೆ ಗಾಢವಾಗಿ ಬೇರೂರಿರುತ್ತದೆ. ಆಗ ಅವರ ಮುಂದೆ ಮೊದಲು ಎದುರಾಗುವುದು ಹೊಳೆಯಂತೆ ಖರ್ಚಾಗುವ ಹಣವನ್ನು ಹೇಗೆ ಉಳಿಸುವುದು?
ಉಳಿತಾಯವೇ ಸರ್ವ ಸಮಸ್ಯೆಗಳಿಗೆ ಮದ್ದು, ಖರ್ಚು-ವೆಚ್ಚ ಸಮತೋಲವಾದಲ್ಲಿ ಉಳಿತಾಯವೂ ಸುಲಭವಾಗಿರುತ್ತದೆ. ಆಗ ಯಾವ ಲೋನ್ ಗೂ ಮೊರೆಹೋಗದೆ, ತಂದೆ-ತಾಯಿಯರಿಗೂ ಹೊರೆಯಾಗದೆ ಸುಲಲಿತವಾಗಿ ಹೊರದೇಶದಲ್ಲಿ ವಿದ್ಯಾಭ್ಯಾಸ ಕೈಗೊಳ್ಳಬಹುದು.[ಶಿಕ್ಷಕರು ಆಧಾರ್ ಕಾರ್ಡ್ ನಂಬರ್ ನೀಡುವುದು ಕಡ್ಡಾಯ]

ಹಣ ಉಳಿತಾಯ ಮಾಡುವ ಸರಳ ಸೂತ್ರಗಳು :
* ಮೊದಲು ಅನಾವಶ್ಯಕ ಶಾಂಪಿಂಗ್ ಗಳನ್ನು ಕಡಿಮೆ ಮಾಡಬೇಕು.
* ಯಾರಿಗಾದರೂ, ಯಾವುದಾದರೂ ಬಿಲ್ ಪಾವತಿ ಮಾಡಬೇಕೆಂದಿದ್ದಲ್ಲಿ ಸರಿಯಾದ ಸಮಯಕ್ಕೆ ಹಣವನ್ನು ಪಾವತಿಸಿ,
* ಇಬ್ಬರು ಅಥವಾ ಮೂವರು ಸೇರಿ ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳಿ. ಆಗ ಮನೆ ಬಾಡಿಗೆ ಸೇರಿದಂತೆ ಎಲ್ಲವೂ ಶೇರ್ ಆಗುವುದರಿಂದ ಖರ್ಚು ಸ್ವಲ್ಪ ಮಟ್ಟಿಗೆ ತಗ್ಗುವುದು.
* ನಿಮ್ಮ ಮೊಬೈಲ್ ಗಳಿಗೆ ಹಣವನ್ನು ಹೆಚ್ಚು ವ್ಯಯಿಸದೆ ಫ್ರೀ ಎಸ್ಎಮ್ಎಸ್, ಅನ್ಲಿಮಿಟೆಡ್ ಕರೆಗಳ ಮೊರೆ ಹೋದರೆ ಒಳ್ಳೆಯದು.
* ಸಾಮಾನ್ಯವಾಗಿ ವಿದ್ಯಾರ್ಥಿಗಳಿಗಾಗಿ ಹಲವಾರು ಡಿಸ್ಕೌಂಟ್ ಗಳು ಇದ್ದೇ ಇರುತ್ತದೆ. ಇವುಗಳ ಮೂಲಕ ನಿಮಗೆ ಬೇಕಾದ ವಸ್ತುಗಳನ್ನು ಕೊಂಡು ಹಣ ಉಳಿತಾಯ ಮಾಡಬಹುದು.
* ದೇಹ ಕಟ್ಟು ಮಸ್ತಾಗಿ, ಸ್ಲಿಮ್ ಇರಬೇಕು ಎಂದಾದಲ್ಲಿ ನಿಮ್ಮ ಕಾಲೇಜಿನಲ್ಲಿರುವ ಜಿಮ್ ತರಗತಿಗಳಿಗೆ ತೆರಳಿ, ಬೇರೆ ಸಂಸ್ಥೆಗಳು ನಡೆಸುವ ಜಿಮ್ ತರಗತಿಗಳಿಗೆ ಸೇರಿಕೊಂಡು ಹಣ ಖರ್ಚು ಮಾಡಿಕೊಳ್ಳಬೇಡಿ.
* ಪುಸ್ತಕಗಳನ್ನು ಕಾಲೇಜು ಗ್ರಂಥಾಲಯದಿಂದ ಪಡೆದುಕೊಳ್ಳಿ. ಅನಾವಶ್ಯಕವಾಗಿ ಪುಸ್ತಕಗಳನ್ನು ಕೊಂಡುಕೊಳ್ಳಬೇಡಿ.
* ಫ್ರೀ ಇರುವ ಅವಧಿಯಲ್ಲಿ ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಸಣ್ಣ ವೃತ್ತಿಯನ್ನು ಕೈಗೊಂಡು ನಿಮ್ಮ ಹಣವನ್ನು ನೀವು ಸಂಪಾದಿಸಿಕೊಳ್ಳಿ.
* ಬ್ಯಾಂಕಿನಲ್ಲಿ ನಿಮ್ಮ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆಗೆದು, ಅದರಲ್ಲಿ ಹಣವನ್ನು ಉಳಿಸುತ್ತಾ ಬನ್ನಿ. ವರ್ಷದ ಕೊನೆಯಲ್ಲಿ ಸಾಕಷ್ಟು ಹಣ ನಿಮ್ಮ ಕೈ ಸೇರುತ್ತದೆ.
* ನಿಮ್ಮ ವಿದ್ಯಾಭ್ಯಾಸದ ಹೊರತಾಗಿ ಅನಾವಶ್ಯಕವಾಗಿ ಬ್ಯಾಂಕಿನಲ್ಲಿ ಲೋನ್ ಪಡೆಯಬೇಡಿ.
-
Bengaluru-Hyderabad ಬುಲೆಟ್ ಟ್ರೈನ್: ಕೇವಲ 2 ಗಂಟೆ ಪ್ರಯಾಣ, 626 ಕಿಮೀ ಉದ್ದದ ಹಾದಿಯಲ್ಲಿ 12 ನಿಲ್ದಾಣಗಳು -
Gold Rate: ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಹೀಗಿದೆ, ನಿಮ್ಮ ನಗರದ ದರ ಪರಿಶೀಲಿಸಿ -
Karnataka Weather: ರಾಜ್ಯದಲ್ಲಿ ಏರುತ್ತಿದೆ ಬಿಸಿಲಿನ ಝಳ; ಬೆಂಗಳೂರಿನ ತಾಪಮಾನ 34 ಡಿಗ್ರಿಗೆ ಏರಿಕೆ -
ಜೈಲಲ್ಲಿರುವ ಪವಿತ್ರಾ ಗೌಡಗೆ ಮನೆ ಊಟ ವ್ಯವಸ್ಥೆಗೆ ಬ್ರೇಕ್ ಹಾಕಿದ ಹೈಕೋರ್ಟ್ -
Dog Satish: ಇನ್ಸ್ಟಾಗ್ರಾಂ ಯಾರ ಅಪ್ಪಂದೂ ಅಲ್ಲ, ವಿಡಿಯೋ ಡಿಲೀಟ್ ಮಾಡಲ್ಲ, ನನಗೆ ಮೀಟರ್ ಇದೆ: ಡಾಗ್ ಸತೀಶ್ -
Toxic: ಅವಸರಕ್ಕಿಂತ ತಾಳ್ಮೆ ಮುಖ್ಯ: ಟಾಕ್ಸಿಕ್ ಬಿಡುಗಡೆ ಮುಂದೂಡಿದ ಬೆನ್ನಲ್ಲೇ ಯಶ್ ಬೆಂಬಲಕ್ಕೆ ನಿಂತ ಅಭಿಮಾನಿಗಳು -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ -
Gold Rate: ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಹೀಗಿದೆ, ನಿಮ್ಮ ನಗರದ ದರ ಪರಿಶೀಲಿಸಿ












Click it and Unblock the Notifications