ಇಂದಿನಿಂದ 3 ದಿನ 'ವೀರಲೋಕ ಪುಸ್ತಕ ಸಂತೆ': ಸಾಹಿತ್ಯಾಸಕ್ತರು ಸೇರಿ ಒಂದು ಲಕ್ಷ ಜನರ ನಿರೀಕ್ಷೆ..
ಬೆಂಗಳೂರು, ನವೆಂಬರ್ 15: ನವೆಂಬರ್ ತಿಂಗಳು ಬಂತೆಂದರೆ ಸಾಕು ವಿವಿಧ ಸಂಸ್ಥೆಗಳು ಸಾಹಿತ್ಯಾಸಕ್ತರಿಗೆ ಪುಸ್ತಕಗಳ ಮಾರಾಟ ಆಯೋಜನೆ, ರಿಯಾಯಿತಿಯಂತಹ ಕೊಡುಗೆ ಮೂಲಕ ಓದುಗರನ್ನು ಸೆಳೆಯುತ್ತಿವೆ. ಇದೀಗ ವೀರಲೋಕ ಸಂಸ್ಥೆಯು ಇಂದಿನಿಂದ ಮೂರು ದಿನ ನಗರದಲ್ಲಿ ಪುಸ್ತಕ ಸಂತೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಪುಸ್ತಕ ಮತ್ತು ಸಾಹಿತ್ಯ ಪ್ರೇಮಿಗಳಿಗೆ ಖರೀದಿಗೆ ಒಳ್ಳೆಯ ಅವಕಾಶ ಎನ್ನಲಾಗಿದೆ.
ಇದು ವೀರಲೋಕದ ಎರಡನೇ ಪುಸ್ತಕ ಸಂತೆ ಆಗಿದೆ. ಈ ಕಾರ್ಯಕ್ರಮವು ಇಂದು ನವೆಂಬರ್ 15ರಿಂದ 16 ಮತ್ತು 17ರವರೆಗೆ ಮೂರು ದಿನ ನಡೆಯಲಿದೆ. ಜಯನಗರದ ಶಾಲಿನಿ ಮೈದಾನದಲ್ಲಿ ಹಮ್ಮಿಕೊಂಡಿರುವ ಈ ಹೊತ್ತಿಗೆಗಳ ಸಂತೆಯನ್ನು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ನಾಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅಂಕೇಗೌಡ ಅವರು ಪುಸ್ತಕ ಪರಿಚಾರಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪುಸ್ತಕ ಮಳಿಗೆಗೆ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಆಹಾರ ಮೇಳಕ್ಕೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮಕ್ಕಳ ಮೇಳಕ್ಕೆ ವಿಶ್ವವಿದ್ಯಾಲಯ ಕುಲಪತಿ ಡಾ. ಜಯಕರ ಎಸ್.ಎಂ.ಚಾಲನೆ ನೀಡಲಿದ್ದಾರೆ.
ಸಂತೆಯಲ್ಲಿ ಪ್ರಕಾಶಕರು, ಲೇಖಕರು, ಓದುಗರು
ರಾಜ್ಯದ ಮಟ್ಟದಲ್ಲಿ ಹೆಚ್ಚು ಪ್ರಕಾಶಕರು ಈ ಪುಸ್ತಕ ಸಂತೆಗೆ ಆಗಮಿಸಲಿದ್ದಾರೆ. ವಿವಿಧ ಲೇಕಕರು ಸಂತೆಯಲ್ಲಿರಲಿದ್ದಾರೆ. ಸಾಹಿತ್ಯಾಸಕ್ತರು ಇಲ್ಲಿಗೆ ಬಂದರೆ, ಲೇಖಕರು, ಪ್ರಕಾಶಕರು ಸೇರಿ ಈ ಮೂವರ ಮಧ್ಯೆ ಮುಖಾ ಮುಖಿ ಸಂವಾದ ನಡೆಸಬಹುದಾಗಿದೆ. ಅವರೆಲ್ಲರು ಮೂರು ದಿನ ಇಲ್ಲಿ ಸೇರುವ ಮೂಲಕ ಈ ವೀರಲೋಕ ಸಂತೆ, ಹಬ್ಬವಾಗಿ ಬದಲಾಗುವ ನಿರೀಕ್ಷೆ ಇದೆ. ಅಪಾರ ಪ್ರಮಾಣದಲ್ಲಿ ಜನರು ಬರುವ ಸಾಧ್ಯತೆ ಇದೆ. ಸುಮಾರು ಒಂದು ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ.
ಸಂತೆಯಲ್ಲಿ 20 ಪುಸ್ತಕ ಬಿಡುಗಡೆ
ಮುಖ್ಯವಾಗಿ ಈ ಸಂತೆಯಲ್ಲಿ ವೀರಲೋಕ ಪ್ರಕಟಣೆಯ ವಿವಿಧ ಪ್ರಕಾರಗಳ 20 ಪುಸ್ತಕಗಳು ಈ ವೇಳೆ ಬಿಡುಗಡೆಗೊಳ್ಳಲಿವೆ.ಅದಷ್ಟ ಅಲ್ಲದೇ ಜಾನಪದ ಸಂಜೆ, ಭಾವಗೀತೆ ಸಂಜೆ, ಚಲನಚಿತ್ರಗೀತೆ ಸಂಜೆ ಎಂಬ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ವೀರಲೋಕ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಸಂಜೆ 5.30ಕ್ಕೆ ಒಟ್ಟು 6 ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮನು ಬಳಿಗಾರ್, ನಟಿ ಭಾವನಾ, ರಂಗನಾಥ್ ಭಾರಧ್ವಾಜ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ನವೆಂಬರ್ 16ರಂದು 'ಕತೆ ಕಟ್ಟೋಣ ಬನ್ನಿ' ಕಾರ್ಯಾಗಾರ ನಡೆಯಲಿದೆ. ನಂತರ ಸಂಜೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಇದೇ ರೀತಿಯ ಕಾರ್ಯಕ್ರಮಗಳು ನವೆಂಬರ್ 17ರಂದು ನಡೆಯಲಿದ್ದು, ಅಂದು ಸಹ ಪುಸ್ತಕ ಬಿಡುಗಡೆ ಆಗಲಿವೆ. ವಿವಿಧ ಗಣ್ಯರು, ಸಾಹಿತ್ಯಗಳು, ಲೇಖಕರು ಪ್ರಕಾಶಕರು ಪಾಲ್ಗೊಳ್ಳಲಿದ್ದಾರೆ.
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications