ಬಿಬಿಎಂಪಿ ಮುಖ್ಯ ಆಯುಕ್ತ ಫೋಟೋ ಬಳಸಿ ಸೈಬರ್ ವಂಚನೆ..!
ಬೆಂಗಳೂರು, ಜುಲೈ07: ಹಣವನ್ನು ವಂಚನೆ ಮಾಡಲು ಹೊಸ ಹೊಸ ಸ್ಕೆಚ್ಗಳನ್ನು ಹಾಲಲಾಗುತ್ತದೆ. ಐಎಎಸ್ ಐಪಿಎಸ್ ಹೆಸರಿನಲ್ಲಿರುವ ಫೇಸ್ಬುಕ್ ಪ್ರೊಫೈಲ್ ಕ್ರಿಯೆಟ್ ಮಾಡಿ ಅವರ ಹೆಸರಿನಲ್ಲಿ ಹಣವನ್ನು ಕೇಳಿದ್ದರು. ಕೆಲವರು ಹಣವನ್ನು ಹಾಕಿ ಯಾಮಾರಿದ್ದರು. ಇದೀಗ ನೇರವಾಗಿಯೇ ಕರೆಯನ್ನು ಹಣಕ್ಕಾಗಿ ಡಿಮ್ಯಾಂಡ್ ಮಾಡುವ ಚಾಳಿ ಶುರುವಾಗಿದೆ. ಅದು ಬಿಬಿಎಂಪಿ ಆಯುಕ್ತರ ಹೆಸರಿನಲ್ಲಿ ಫೋನ್ ಮಾಡಿ ಹಣಕ್ಕಾಗಿ ಡಿಮ್ಯಾಡ್ ಮಾಡುತ್ತಿದ್ದಾರೆ. ಆ ವಂಚಕರ ವಿರುದ್ದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಬಿಎಂಪಿ ಆಯುಕ್ತರ ಫೋಟೋವನ್ನು ತಮ್ಮ ವಾಟ್ಸ್ ಆಪ್ ಡಿಪಿಗೆ ಹಾಕಿಕೊಂಡು ಆಯುಕ್ತರ ಸೋಗಿನಲ್ಲಿ ಕರೆಯನ್ನು ಮಾಡುತ್ತಿದ್ದಾರೆ. ಆ ಮೂಲಕ ಅಮೆಜಾನ್ನಿಂದ ಆಫರ್ಗಳ ಬಗ್ಗೆ ಹೇಳಿ ಹಣವನ್ನು ಕೇಳುತ್ತಿದ್ದರು ಎಂದು ಆಯುಕ್ತರ ಪರವಾಗಿ ಅಧಿಕಾರಿಯೊಬ್ಬರು ಕೇಂದ್ರ ವಿಭಾಗ ಸೈಬರ್ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.
ಬಿಬಿಎಂಪಿ ಆಯುಕ್ತರ ಕಚೇರಿಂದ ಪ್ರಕಟಣೆಯನ್ನು ಹೊರಡಿಸಿದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರ ಹೆಸರು ಭಾವಚಿತ್ರವನ್ನು ಬಳಸಿಕೊಂಡು ಅನಧಿಕೃತವಾಗಿ ಅಪರಿಚಿತರ ಸಂಖ್ಯೆ 7076522681ಯಿಂದ ಎಸ್ಎಂಎಸ್ ಹಾಗೂ ವಾಟ್ಸ್ ಆಪ್ ಮೂಲಕ ಸಂದೇಶಗಳನ್ನು ರವಾನಿಸಲಾಗುತ್ತಿದ್ದು. ಮುಖ್ಯ ಆಯುಕ್ತರ ಹೆಸರನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದು ನನ್ನ ಗಮನಕ್ಕೆ ಬಂದ ತಕ್ಷಣ ಬಿಬಿಎಂಪಿಯು ಸೈಬರ್ ಕ್ರೈಂನಲ್ಲಿ ದೂರನ್ನು ದಾಖಲಿಸಲಾಗಿದೆ.

ಸೈಬರ್ ಕ್ರೈಂಗೆ ದೂರು ನೀಡುವಂತೆ ಸಲಹೆ
ಎಲ್ಲಾ ನಾಗರೀಕರು ಮತ್ತು ಅಧಿಕಾರಿಗಳು ಮೇಲ್ಕಂಡ ಸಂಖ್ಯೆಯಿಂದ ಎಸ್ಎಂಎಸ್ ಅಥವಾ ವಾಟ್ಸ್ ಆಪ್ ಸಂದೇಶಗಳಿಗೆ ಸ್ಪಂದಿಸದಂತೆ ಮುಖ್ಯ ಆಯುಕ್ತರು ಕೋರಿರುತ್ತಾರೆ. ಈ ರೀತಿಯ ಸಂದೇಶಗಳು ಬಂದಲ್ಲಿ ಅಥವಾ ಯಾವುದೇ ಅನುಮಾನಗಳು ಇದ್ದಲ್ಲಿ ಕೂಡಲೇ ಮುಖ್ಯ ಆಯುಕ್ತರ ಕಚೇರಿಗೆ ವರದಿ ಮಾಡುವಂತೆ ಅಥವಾ ಸೈಬರ್ ಕ್ರೈಂಗೆ ದೂರನ್ನು ನೀಡುವಂತೆ ವಿನಂತಿಸಿದೆ ಎಂದು ಮಾಹಿತಿ ತಂತ್ರಜ್ಞಾನದ ನಿರ್ದೇಶಕರು ತಿಳಿಸಿದ್ದಾರೆ.

ಮೋಸದ ಬಗ್ಗೆ ಎಚ್ಚರಿಕೆ
ಟ್ವೀಟ್ ಮಾಡುವ ಮೂಲಕ ತಮ್ಮ ಫೋಟೋವನ್ನು ಬಳಸಿ ಕೆಲವು ವಂಚಕರು ಮೋಸವನ್ನು ಮಾಡುತ್ತಿದ್ದಾರೆ ಎಚ್ಚರದಿಂದ ಇರುವಂತೆ ಸೂಚನೆಯನ್ನು ನೀಡಿದ್ದಾರೆ. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಫೋನ್ ಪೇ ಗೂಗಲ್ ಪೇ ಮೂಲಕ ಹಣ
ಬಿಬಿಎಂಪಿ ಆಯುಕ್ತರ ಹೆಸರನ್ನು ಹೇಳಿದರೇ ಹೆಚ್ಚು ಹಣವನ್ನು ವಂಚಿಸಬಹುದು ಎಂದು ಸೈಬರ್ ವಂಚಕರು ಪ್ಲಾನ್ ಮಾಡಿರುವ ಸಾಧ್ಯತೆಗಳಿವೆ. ಈ ಹಿಂದೆ ಫೇಸ್ ಬುಕ್ ನಲ್ಲಿ ನಕಲಿ ಖಾತೆಯನ್ನು ತೆರೆದು ಅಸಲಿ ವ್ಯಕ್ತಿಗಳು ಹಾಕಿದ್ದ ಪ್ರೊಫೈಲ್ ಫೋಟೋವನ್ನೇ ನಕಲಿ ಅಕೌಂಟ್ಗೂ ಹಾಕಿರುತ್ತಿದ್ದರು. ನಕಲಿ ಖಾತೆಯ ಮೂಲಕ ಅಸಲಿ ಖಾತೆಯ ಸ್ನೇಹಿತರಿಗೆ ಹಾಯ್, ಹೌ ಆರ್ ಯು ಎಂದೆಲ್ಲಾ ಸಂದೇಶ ಕಳುಹಿಸುತ್ತಿದ್ದರು. ತಕ್ಷಣವೇ ಹಣ ಬೇಕಾಗಿದೆ ಕಳುಹಿಸಿ ಅರ್ಜೆಂಟ್ ಎಂದೆಲ್ಲಾ ಹೇಳಿ ಹಣಕ್ಕಾಗಿ ಪೀಡಿಸಿ ಫೋನ್ ಪೇ ಅಥವಾ ಗೂಗಲ್ ಪೇ ನಂಬರ್ ಕಳುಹಿಸುತ್ತಿದ್ದರು. ಅಸಲಿ ಖಾತೆಯವರೇ ಮೆಸೇಜ್ ಮಾಡಿದ್ದಾರೆ ಎಂದು ಹಣವನ್ನು ಕಳುಹಿಸಿದರೇ ಆ ನಂತರ ಫೋನ್ ಸ್ವಿಚ್ ಆಫ್ ಆಗಿರುತ್ತಿತ್ತು.

ಮುಖ್ಯ ಆಯುಕ್ತರ ಫೋಟೋ ಬಳಕೆ ಹೊಸ ವಿಧದ ವಂಚನೆ
ಸೈಬರ್ ಖದೀಮರ ಹೊಸ ಹೊಸ ತಂತ್ರವನ್ನು ಹೂಡುತ್ತಾರೆ. ಮಿಲಿಟರಿ ವ್ಯಕ್ತಿಯ ಸೋಗಿನಲ್ಲಿ ಖಾಲಿ ನಿವೇಶನದ ಜಾಹೀರಾತು ನೋಡಿ ಕರೆಯನ್ನು ಮಾಡಿ ಯಾಮಾರಿಸುವ ದೊಡ್ಡ ಜಾಲವೂ ಇದೆ. ಬಾರ್ ಕೋಡ್ ಸ್ಕ್ಯಾನ್ ಮಾಡಿದರೇ ಇರುವ ದುಡ್ಡನ್ನೆಲ್ಲಾ ದೋಚಿ ಬಿಡುತ್ತಾರೆ. ಸೈಬರ್ ವಿಧಗಳಲ್ಲಿ ಓಟಿಪಿಯನ್ನು ಪಡೆಸು ಮೋಸ ಮಾಡುವವರೇ ಹೆಚ್ಚಾಗಿದ್ದಾರೆ. ಆದರೆ ಬಿಬಿಎಂಪಿ ಆಯುಕ್ತ ಫೋಟೋ ಬಳಸಿ ಹಣವನ್ನು ಕೇಳು್ತಿರುವುದು ವಂಚಕರ ಮತ್ತೊಂದು ವಂಚನೆಯ ವಿಧವಾಗಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಆಗಿ ಬದಲಾದ ಪೆರಿಫೆರಲ್ ರಿಂಗ್ ರೋಡ್: 2029ರ ವೇಳೆಗೆ ನಗರದ ಟ್ರಾಫಿಕ್ಗೆ ಸಿಗಲಿದೆ ಮುಕ್ತಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications