ಬೆಂಗಳೂರಿನ ಉಬರ್ ಚಾಲಕನೊಂದಿಗಿನ ಆ ಒಂದು ಹೃದಯ ಸ್ಪರ್ಶಿ ಸಂದರ್ಭ..
ಬೆಂಗಳೂರು ಸೆಪ್ಟೆಂಬರ್ 2: ಆಟೋ, ಟ್ಯಾಕ್ಸಿಯಲ್ಲಿ ತೆರಳುವಾಗ ಪ್ರಯಾಣಿಕರಿಗೆ ಊಟ, ತಿಂಡಿ ಬಗ್ಗೆ ಕೇಳುವುದು ಒಂದು ಕಡೆ ಇರಲಿ ಕೊಂಚ ನಿದ್ದೆಗೆ ಜಾರಿದರೆ ಯಾಮಾರಿಸುವ ಚಾಲಕರೇ ಹೆಚ್ಚು. ಹೀಗಿರುವಾಗ ಉಬರ್ ಚಾಲಕನೊಂದಿಗಿನ ಅತ್ಯುತ್ತಮ ಕ್ಷಣಗಳನ್ನು ಪ್ರಯಾಣಿಕರೊಬ್ಬರು ಲಿಂಕ್ಡಿನ್ನಲ್ಲಿ ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ಜನಮೆಚ್ಚುಗೆಯನ್ನು ಪಡೆದುಕೊಂಡಿದೆ.
ಬೆಂಗಳೂರಿನ ಉಬರ್ ರೈಡ್ನಲ್ಲಿ ಸಂಭವಿಸಿದ ಹೃದಯಸ್ಪರ್ಶಿ ಘಟನೆಯನ್ನು ಪ್ರಯಾಣಿಕರೊಬ್ಬರು ಹಂಚಿಕೊಂಡಿದ್ದಾರೆ. ಹರ್ಷ್ ಶರ್ಮಾ ಎಂಬ ವ್ಯಕ್ತಿ ತನ್ನ ಉಬರ್ ಚಾಲಕ ರವಿಯ ಕುರಿತು ಲಿಂಕ್ಡ್ಇನ್ನಲ್ಲಿ ಹೃದಯಸ್ಪರ್ಶಿ ಕಥೆಯನ್ನು ಪೋಸ್ಟ್ ಮಾಡಿದ್ದಾರೆ. ಸುದೀರ್ಘ ಪೋಸ್ಟ್ನಲ್ಲಿ, ಹರ್ಷ್ ಶರ್ಮಾ ಅವರನ್ನು ಬೇರೆ ಸ್ಥಳದಲ್ಲಿ ಅಪರಿಚಿತರು ಹೇಗೆ ನಡೆದುಕೊಳ್ಳುತ್ತಾರೆ ಮತ್ತು ಅವರನ್ನು ತನ್ನ ಸ್ವಂತ ಮನೆಯವರಂತೆ ನೋಡಿಕೊಂಡ ರೀತಿಯನ್ನು ವಿವರಿಸಿದ್ದಾರೆ.
ಹರ್ಷ್ ಶರ್ಮಾ ಅವರು ತಮ್ಮ ಉಬರ್ ಡ್ರೈವರ್ನ ಸ್ವಭಾವ ಅವರಿಗೆ ಹೇಗೆ ಆರಾಮವಾಗಿ ಮತ್ತು ಪರಿಚಯವಿಲ್ಲದ ಸ್ಥಳದಲ್ಲಿ ಮನೆಯ ವಾತಾವರಣವನ್ನು ನೀಡಿತು ಎಂಬುದರ ಕುರಿತು ಲಿಂಕ್ಡ್ಇನ್ನಲ್ಲಿ ಬರೆದಿದ್ದಾರೆ. ಹರ್ಷ್ ಪ್ರಕಾರ, ಭಾಷೆಯ ಸಮಸ್ಯೆಯಿಂದಾಗಿ ಸಂವಹನ ನಡೆಸಲು ಸಾಧ್ಯವಾಗದೆ ಹೆಡ್ಫೋನ್ಗಳನ್ನು ಬಳಸುವ ಇತರ ಚಾಲಕರಿಗೆ ಹೋಲಿಸಿದರೆ ಚಾಲಕ ರವಿ ಎಷ್ಟು ಬೆಸ್ಟ್ ಎನ್ನುವ ಬಗ್ಗೆ ಅವರು ಬರೆದಿದ್ದಾರೆ. ವಿಮಾನದಲ್ಲಿ ಸಾಕಷ್ಟು ನಿದ್ರೆ ಮಾಡದ ಪರಿಣಾಮವಾಗಿ ದಣಿದಿದ್ದ ಹರ್ಷ ಅವರನ್ನು ಚಾಲಕ ರವಿ ಮನೆಯವರಂತೆ ನೋಡಿಕೊಂಡಿದ್ದಾರೆ.

ಹರ್ಷನು ನಿಶ್ಚಿಂತೆಯಿಂದ ಮಲಗಲು ರವಿ ಕಾರಿನ ಸೀಟ್ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ರವಿ ಅವರು ಉಪಹಾರ ಸೇವನೆಯ ಬಗ್ಗೆ ಹರ್ಷನನ್ನು ಪ್ರಶ್ನಿಸಿದರು. ಅದಕ್ಕೆ ಹರ್ಷನು ತಾನು ಮಾಡಿಲ್ಲ ಎಂದು ಉತ್ತರಿಸಿದರು. ಹರ್ಷ ಅವರಿಗೆ ಮಲಗಲು ಹೇಳಿದ ಚಾಲಕ ರವಿ ಒಂದು ಗಂಟೆಯ ನಂತರ ಅವರನ್ನು ಒಳ್ಳೆಯ ರೆಸ್ಟೋರೆಂಟ್ನಲ್ಲಿ ಎಬ್ಬಿಸಿದ್ದಾರೆ.
ಎರಡು ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಹರ್ಷ್ ಲಿಂಕ್ಡ್ಇನ್ನಲ್ಲಿ ಸಂಪೂರ್ಣ ಕಥೆಯನ್ನು ವಿವರಿಸಿದ್ದಾರೆ. ಇದನ್ನು ಹಂಚಿಕೊಂಡ ನಂತರ, ಪೋಸ್ಟ್ 44,000 ಕ್ಕೂ ಹೆಚ್ಚು ಲೈಕ್ಗಳನ್ನು ಪಡೆದುಕೊಂಡಿದೆ. ಪೋಸ್ಟ್ ಜನಪ್ರಿಯತೆ ಗಳಿಸಿದ ನಂತರ 'ಉಬರ್ ಇಂಡಿಯಾ' ಹರ್ಷ್ಗೆ ಕರೆ ಮಾಡಿ, ರವಿ ಅವರ ಈ ರೀತಿಯ ಕಾರ್ಯವನ್ನು ಪ್ರಶಂಸಿಸಲು ಅವರ ಸಂಪರ್ಕ ಮಾಹಿತಿಯನ್ನು ನೀಡುವಂತೆ ವಿನಂತಿಸಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications