ಜುಲೈ 15ಕ್ಕೆ ದಲಿತರ ಸಮಸ್ಯೆಗಳ ಕುರಿತ ಚರ್ಚೆಗೆ ವಿಚಾರ ಸಂಕಿರಣ
ಬೆಂಗಳೂರು, ಜುಲೈ 13: ಇದೇ ಜುಲೈ 15ನೇ ತಾರೀಕು ಬೆಳಗ್ಗೆ 10ಕ್ಕೆ ಬೆಂಗಳೂರಿನ ಶಿವಾನಂದ ಸರ್ಕಲ್ ನಲ್ಲಿರುವ ಗಾಂಧಿಭವನದ ಜೆ.ಪಿ.ಹಾಲ್ ನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ದಲಿತರ ವಿರುದ್ಧದ ಸುಪ್ರೀಂಕೋರ್ಟ್ ನ ತೀರ್ಪುಗಳು, ದಲಿತರ ಮೇಲಿನ ದೌರ್ಜನ್ಯಗಳು ಮತ್ತು ಭೂಮಿ ಪ್ರಶ್ನೆಗಳು, ಎಸ್.ಸಿ./ಎಸ್.ಟಿ, ಸಮಯದಾಯದ ಮೇಲಿನ ದುಷ್ಪರಿಣಾಮಗಳು ಅವರ ಘನತೆ-ಗೌರವ ಹಾಗೂ ಸ್ಥಿತಿ-ಗತಿಗಳ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಇದಾಗಿದೆ.
ಉದ್ಘಾಟನೆ : ಎಲ್.ಹನುಮಂತಯ್ಯ, ರಾಜ್ಯಸಭಾ ಸದಸ್ಯರು
ವಿಷಯ ಮಂಡನೆ : ನ್ಯಾ.ಎಚ್.ಎನ್.ನಾಗಮೋಹನ್ ದಾಸ್, ನಿವೃತ್ತ ನ್ಯಾಯಾಧೀಶರು
ಡಿ.ಶಿವಶಂಕರ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಸರಕಾರಿ ಎಸ್ ಸಿ/ಎಸ್ ಟಿ ನೌಕರರ ಸಮನ್ವಯ ಸಮಿತಿ
ನಾಗರಾಜ್ ನಂಜುಂಡಯ್ಯ, ದಲಿತ ಹಕ್ಕುಗಳ ಸಮಿತಿ
ಮಧ್ಯಾಹ್ನ 1.30ಕ್ಕೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಇವಿಷ್ಟು ಸಂಕಿರಣದ ಬಗೆಗಿನ ವಿವರಗಳು. ಹೆಚ್ಚಿನ ಸಂಖ್ಯೆಯಲ್ಲಿ ಈ ವಿಚಾರ ಸಂಕಿರಣದಲ್ಲಿ ಜನರು ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.