Railway: ಪ್ರಯಾಣಿಕರೇ ಗಮನಿಸಿ ವಿವಿಧ ರೈಲುಗಳ ಸಂಚಾರದಲ್ಲಿ ವ್ಯತ್ಯಯ, ರದ್ದಾದ ರೈಲುಗಳ ಪಟ್ಟಿ
ಬೆಂಗಳೂರು, ಜುಲೈ 15: ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಹಲವು ರೈಲುಗಳ ಸಂಚಾರವು ಎಂದಿನಂತೆ ಇರದೇ ರದ್ದುಗೊಂಡಿವೆ. ಮುಂದಿನ ಒಂದು ವಾರದಲ್ಲಿ ಎರಡು ದಿನ ತುರ್ತು ಕಾಮಗಾರಿ ಪ್ರಯುಕ್ತ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ಗಮನಿಸಿ ಸಂಚರಿಸಬೇಕು ಎಂದು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನೈಋತ್ಯ ರೈಲ್ವೆ ವಲಯವು ರದ್ದಾದ, ಭಾಗಶಃ ರದ್ದಾದ ರೈಲುಗಳು, ನಿಲುಗಡೆ ರದ್ದಿನ ರೈಲುಗಳು, ಕಾರಣ, ದಿನಾಂಕ ಮತ್ತು ಸಮಯದ ಪಟ್ಟಿ ನೀಡಿದ್ದಾರೆ. ಅದರ ಮಾಹಿತಿ ಇಲ್ಲಿದೆ.

ನಿಟ್ಟೂರು ಮತ್ತು ಸಂಪಿಗೆ ರಸ್ತೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ (62) ಕಾಮಗಾರಿ ಜುಲೈ 18 ಮತ್ತು 25 ರಂದು ಕೈಗೆತ್ತಿಕೊಳ್ಳಲಾಗುತ್ತಿದೆ. ಹೀಗಾಗಿ ಈ ಮಾರ್ಗದಲ್ಲಿ ಓಡಾಡುವ ವಿವಿಧ ರೈಲುಗಳ ಸಂಚಾರ ರದ್ಗೊಳಿಸಲಾಗಿದೆ.
ರದ್ದಾದ ರೈಲುಗಳು ಮತ್ತು ಗಾಡಿ ಸಂಖ್ಯೆ ವಿವರ
ತುಮಕೂರು-ಚಾಮರಾಜನಗರ ರೈಲು (ಸಂಖ್ಯೆ 07346), ಚಾಮರಾಜನಗರ-ಮೈಸೂರು ರೈಲು (ಸಂಖ್ಯೆ07328), ಚಾಮರಾಜನಗರ-ಯಶವಂತಪುರ ರೈಲು (ಸಂಖ್ಯೆ 16239), ಯಶವಂತಪುರ-ಚಾಮರಾಜನಗರ ರೈಲು (ಗಾಡಿ ಸಂಖ್ಯೆ 16240), ತುಮಕೂರು- ಕೆಎಸ್ಆರ್ ಬೆಂಗಳೂರು ರೈಲು (ಸಂಖ್ಯೆ 06576), ಕೆಎಸ್ಆರ್ಬೆಂಗಳೂರಿನಿಂದ ತುಮಕೂರಿಗೆ ಹೊರಡುವ ರೈಲು (ಸಂಖ್ಯೆ 06575), ಶಿವಮೊಗ್ಗ-7ಟೌನ್-9 ಯಶವಂತಪುರ ತೆರಳುವ (ಸಂಖ್ಯೆ 16580) ರೈಲುಗಳನ್ನು ಮುಂದಿನ ಜುಲೈ 18 ಮತ್ತು 25 ರಂದು ಸಂಚಾರ ನಡೆಸುವುದಿಲ್ಲ ಎಂದು ತಿಳಿಸಲಾಗಿದೆ.

ಭಾಗಶಃ ರದ್ದಾದ ರೈಲುಗಳು ಯಾವವು?
ತುರ್ತು ರೈಲ್ವೆ ಕ್ರಾಸಿಂಗ್ ಕಾಮಗಾರಿ ಸಂಬಂಧ ಜುಲೈ 18 ಮತ್ತು 25 ರಂದು ಬೆಂಗಳೂರು ಮೆಜೆಸ್ಟಿಕ್ (KSR) ರೈಲು ನಿಲ್ದಾಣದಿಂದ ತುಮಕೂರಿಗೆ ಹೊರಡುವ (ಸಂಖ್ಯೆ 06571/06572) ರೈಲುಗಳನ್ನು ಹಿರೇಹಳಿ - ತುಮಕೂರು ನಡುವೆ ರಸ್ತೆ ರದ್ದುಗೊಳಿಸಲಾಗಿದೆ.
ಇನ್ನೂ ಅದೇ ರೀತಿ ತಾಳಗುಪ್ಪ-ಕೆಎಸ್ಆರ್ಬೆಂಗಳೂರು ರೈಲು (ಸಂಖ್ಯೆ 20652), ಕೆಎಸ್ ಬೆಂಗಳೂರು-ಧಾರವಾಡ-ಕೆಎಸ್ಆರ್ ಬೆಂಗಳೂರು ರೈಲು (ಸಂಖ್ಯೆ 12725/12726) ಮತ್ತು ಅರಸೀಕೆರೆ-ಕೆಎಸ್ ಆರ್ ಬೆಂಗಳೂರು ನಿಲ್ದಾಣಗಳ ನಡುವಿನ ರೈಲನ್ನು ರದ್ದುಗೊಳಿಸಲಾಗಿದೆ.
ರೈಲು ಮಾರ್ಗ ಬದಲಾವಣೆ ಮಾಹಿತಿ
ಜುಲೈ 17, 24 ರಂದು ವಾಸ್ಕೋಡ ಗಾಮಾದಿಂದ ಹೊರಡುವ ರೈಲು (ಸಂಖ್ಯೆ 17310) ವಾಸ್ಕೋಡ ಗಾಮಾ-ಯಶವಂತಪುರ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಆಗುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿ ಜುಲೈ 18, 25 ರಂದು ಹೊರಡುವ ಮೈಸೂರು- ವಾರಣಾಸಿ ರೈಲು (ಸಂಖ್ಯೆ 22687), ಯಶವಂತಪುರ-ಜೈಪುರ ರೈಲು (ಸಂಖ್ಯೆ 82653) ರೈಲುಗಳು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದ ಮೂಲಕ ಸಂಚರಿಸಲಿವೆ.
ಆದರೆ ಈ ರೈಲುಗಳು ತುಮಕೂರು ನಿಲ್ದಾಣದಲ್ಲಿ ನಿಲುಗಡೆ ನೀಡುವುದಿಲ್ಲ.
ಮೈಸೂರು-ಬೆಳಗಾವಿ (ಸಂಖ್ಯೆ 17326) ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದ ಮೂಲಕ ಸಂಚರಿಸಲಿದೆ. ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ. ಮೈಸೂರು-ಉದಯಪುರ ಸಿಟಿ ರೈಲು (ರೈಲು 19668) ಕೆಎಸ್ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ, ದಾವಣಗೆರೆ ಮೂಲಕ ಪ್ರಯಾಣ ಸೇವೆ ನೀಡಲಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications