ದಾಬೋಲ್ಕರ್, ಕಲಬುರಗಿ, ಗೌರಿ ಹತ್ಯೆ: ಮೂರು ಕೊಲೆ, ನಾಲ್ಕು ಸಾಮ್ಯತೆ
ಗೌರಿ ಲಂಕೇಶ್, ಕಲಬುರಗಿ, ದಾಬೋಲ್ಕರ್ ಹತ್ಯೆಗಳಲ್ಲಿ ಹಲವಾರು ಸಾಮ್ಯತೆ. ಕೆಲವು ಸುದ್ದಿ ವಾಹಿನಿಗಳ ವಿಶ್ಲೇಷಣೆ.
ಬೆಂಗಳೂರು, ಸೆಪ್ಟೆಂಬರ್ 6: ಮಂಗಳವಾರ ರಾತ್ರಿ ನಡೆದಿರುವ ಹಿರಿಯ ಪತ್ರಕರ್ತೆ ಹಾಗೂ ಲಂಕೇಶ್ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಅವರ ಹತ್ಯೆಯು ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ನಡೆದಿರುವ ವಿಚಾರವಾದಿಗಳ ಹತ್ಯೆಯ ಮುಂದುವರಿದ ಭಾಗ ಎಂಬುದನ್ನು ಸಾಬೀತುಪಡಿಸುವಂಥ ಕೆಲವಾರು ಸಾಮ್ಯತೆಗಳು ಇವೆ ಎಂದು ಕೆಲ ವಾಹಿನಿಗಳು ಅಭಿಪ್ರಾಯಪಟ್ಟಿವೆ.
2013ರಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರ ಹತ್ಯೆಯಾಗಿತ್ತು. 2015ರಲ್ಲಿ ಕನ್ನಡದ ಸಾಹಿತಿ ಹಾಗೂ ಚಿಂತಕ ಎಂ.ಎಂ. ಕಲಬುರಗಿಯವರನ್ನು ಧಾರವಾಡದಲ್ಲಿ ಹತ್ಯೆ ಮಾಡಲಾಗಿತ್ತು. ಇದೀಗ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲಾಗಿದೆ.

ಈ ಮೂರು ಕೊಲೆಗಳು ಪ್ರತ್ಯೇಕ ಪ್ರಕರಣಗಳಾಗಿದ್ದರೂ ಇದರಲ್ಲಿ ಹಂತಕರು ಅನುಸರಿಸುವ ವಿಧಾನಗಳು ಕೆಲವಾರು ಸ್ವಾಮ್ಯತೆಗಳಿದ್ದು, ದಾಬೋಲ್ಕರ್, ಕಲುಬರಗಿಯವನ್ನು ಕೊಂದವರೇ ಈಗ ಗೌರಿ ಅವರನ್ನೂ ಕೊಂದಿದ್ದಾರೆಂದು 'ನ್ಯೂಸ್ ಎಕ್ಸ್' ವಾಹಿನಿ ಹೇಳಿದೆ.

ಪ್ರತಿ ಕೊಲೆಗೂ ಸರಿಯಾಗಿ 2 ವರ್ಷ ಅಂತರ!
ದಾಬೋಲ್ಕರ್, ಕಲಬುರಗಿ ಹಾಗೂ ಗೌರಿ ಲಂಕೇಶ್ ಹತ್ಯೆಗಳು ಹೆಚ್ಚು ಕಡಿಮೆ ಒಂದೇ ದಿನದಂದು ನಡೆದಿವೆ. ದಾಬೋಲ್ಕರ್ ಹತ್ಯೆಯು 2013ರ ಆಗಸ್ಟ್ 30ರಂದು ನಡೆದಿದ್ದರೆ, ಕಲಬುರಗಿ ಹತ್ಯೆಯು 2015ರ ಆಗಸ್ಟ್ 30ರಂದು ನಡೆದಿದೆ. ಆ ಎರಡೂ ಕೊಲೆಗಳ ನಡುವೆ ಸರಿಯಾಗಿ ಎರಡು ವರ್ಷಗಳ ಅಂತರವಿದೆ. ಕಲಬುರಗಿ ಹತ್ಯೆ ನಡೆದು ಸರಿಯಾಗಿ 2 ವರ್ಷ ಕಳೆದ ಮೇಲೆ ಈಗ, ಗೌರಿ ಲಂಕೇಶ್ ಹತ್ಯೆಯಾಗಿದೆ. ಇದು ಈ ಮೂರೂ ಕೊಲೆಗಳ ನಡುವೆ ಇರುವ ಮೊದಲ ಸಾಮ್ಯತೆ.

ಮೂರು ಪ್ರಕರಣಗಳಲ್ಲಿ ನಾಡ ಪಿಸ್ತೂಲು
ದಾಬೋಲ್ಕರ್ ಹತ್ಯೆಗೂ ಕಂಟ್ರಿ ಪಿಸ್ತೂಲ್ ಅನ್ನು ಬಳಸಲಾಗಿತ್ತು. ಇನ್ನು ಕಲಬುರಗಿ ಹತ್ಯೆಗೂ ಕಂಟ್ರಿ ಪಿಸ್ತೂಲನ್ನೇ ಬಳಸಲಾಗಿತ್ತು. ಇದೀಗ, ಗೌರಿ ಲಂಕೇಶ್ ಹತ್ಯೆಗೂ ಕಂಟ್ರಿ ಪಿಸ್ತೂಲನ್ನೇ ಬಳಸಲಾಗಿದೆ. ದಾಬೋಲ್ಕರ್ ಅವರ ವಿರುದ್ಧ 4 ಸುತ್ತು, ಕಲಬುರಗಿ ವಿರುದ್ಧ 2 ಸುತ್ತು ಹಾಗೂ ಗೌರಿ ಲಂಕೇಶ್ ವಿರುದ್ಧ 7 ಸುತ್ತು ಗುಂಡು ಹಾರಿವೆ.

ಎಲ್ಲವೂ ಪಾಯಿಂಟ್ ಬ್ಲಾಂಕ್ ರೇಜ್ ಶೂಟ್ ಗಳೇ!
ಮೂವರನ್ನೂ ಪಾಯಿಂಟ್ ಬ್ಲಾಂಕ್ ರೇಂಜ್ ನಲ್ಲೇ ಹತ್ಯೆ ಮಾಡಲಾಗಿರುವುದು ಮತ್ತೊಂದು ಸಾಮ್ಯತೆ. ಅಲ್ಲದೆ, ಈ ಕೊಲೆಗಳನ್ನು ಮಾಡಲು ಇಬ್ಬರಿಂದ ಮೂವರಷ್ಟೇ ಬಂದಿದ್ದು ಮತ್ತೊಂದು ಸಾಮ್ಯತೆ. ದಾಬೋಲ್ಕರ್, ಕಲಬುರಗಿ ಹತ್ಯೆಗೆ ಇಬ್ಬರು ಬಂದಿದ್ದರೆ, ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲು ಮೂವರು ಬಂದಿದ್ದಾರೆ. ಅಲ್ಲದೆ, ಸಾವನ್ನಪ್ಪಿರುವುದನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಹಂತಕರು ಪರಾರಿ.

ಹಣೆ, ದೇಹಕ್ಕೆ ಮಾತ್ರ ಗುರಿ
ಈ ಮೂವರ ಕಡೆಗೆ ಗುಂಡು ಹಾರಿಸಿರುವ ರೀತಿಯೂ ಹೆಚ್ಚು ಕಡಿಮೆ ಸಾಮ್ಯತೆಯಿಂದಲೇ ಕೂಡಿದೆ. ದಾಬೋಲ್ಕರ್ ಅವರಿಗೆ ತಲೆ ಹಾಗೂ ಎದೆಗೆ ಗುಂಡು ಹೊಡೆದಿದ್ದರೆ, ಕಲಬುರಗಿ ಅವರಿಗೆ ಹಣ ಹಾಗೂ ದೇಹಕ್ಕೆ ಗುಂಡು ಹೊಡೆಯಲಾಗಿತ್ತು. ಗೌರಿಯವರಿಗೂ ಹಣೆ ಹಾಗೂ ಎದೆಗೆ ಗುಂಡು ಹೊಡೆಯಲಾಗಿದೆ.
-
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ











Click it and Unblock the Notifications