ಬೆಂಗಳೂರಿನಲ್ಲಿ ಶ್ರೀಗಳ ಉಪವಾಸ ಸತ್ಯಾಗ್ರಹ ಆರಂಭ
ಬೆಂಗಳೂರು, ನ. 17 : ಮೂಢ ನಂಬಿಕೆ ನಿಷೇಧಿಸುವ ಕಾನೂನು ಜಾರಿ ಮಾಡಬೇಕು ಮತ್ತು ಸಾಮಾಜಿಕ ತಾರತಮ್ಯ ನಿವಾರಣೆ ಮಾಡಬೇಕೆಂದು ಒತ್ತಾಯಿಸಿ ನಿಡುಮಾಮಿಡಿ ಮಹಾಸಂಸ್ಥಾನ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ನೂರಾರು ಮಠಾಧೀಶರು ಮೂರು ದಿನಗಳ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಬೆಂಗಳೂರಿನ
ಫ್ರೀಡಂಪಾರ್ಕ್ನಲ್ಲಿ
ಸೋಮವಾರ
ಪ್ರಗತಿಪರ
ಮಠಾಧೀಶರ
ವೇದಿಕೆ
ಉಪವಾಸ
ಸತ್ಯಾಗ್ರಹ
ಆರಂಭಿಸಿದ್ದಾರೆ.
ಮಾಧ್ಯಮಗಳನ್ನು
ಉದ್ದೇಶಿಸಿ
ಮಾತನಾಡಿದ
ಶ್ರೀ
ವೀರಭದ್ರ
ಚನ್ನಮಲ್ಲ
ಸ್ವಾಮೀಜಿ
ಅವರು,
13
ವಿವಿಧ
ಬೇಡಿಕೆಗಳನ್ನು
ಈಡೇರಿಸುವಂತೆ
ಒತ್ತಾಯಿಸಿ
ನಿರಶನ
ನಡೆಸಲಾಗುತ್ತಿದೆ
ಎಂದರು.
ನ.25, 29 ಹಾಗೂ 30ರಂದು ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ಮಡೆಸ್ನಾನ, ಎಡೆಸ್ನಾನ ನಡೆಯುವ ಸಾಧ್ಯತೆ ಇದೆ. ಈ ಕಂದಾಚಾರಗಳನ್ನು ತಡೆಯುವಂತೆ ಸರ್ಕಾರದ ಗಮನ ಸೆಳೆಯಲು ಈ ಉಪವಾಸ ಹಮ್ಮಿಕೊಂಡಿದ್ದೇವೆ ಎಂದು ಶ್ರೀಗಳು ಹೇಳಿದರು. [ಮಡೆಸ್ನಾನ ವಿರೋಧಿಸಿ ನಿಡುಮಾಮಿಡಿ ಶ್ರೀ ಉಪವಾಸ]
ಮೂಢನಂಬಿಕೆ ನಿಷೇಧ ಸೇರಿದಂತೆ 13 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈ ನಿರಶನ ನಡೆಸಲಾಗುತ್ತಿದೆ. ಮುಖ್ಯಮಂತ್ರಿಗಳು ಅಥವ ಜನಪ್ರತಿನಿಧಿಗಳು ಬಂದು ಭರವಸೆ ನೀಡುವ ತನಕ ನಿರಶನವನ್ನು ಹಿಂಪಡೆಯುವುದಿಲ್ಲ ಎಂದು ಶ್ರೀಗಳು ತಿಳಿಸಿದರು.
ವಿಶ್ವವಿದ್ಯಾಲಯಗಳಲ್ಲಿ ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳ ಸಂಸ್ಕೃತಿಯ ಸಂಶೋಧನೆಗಾಗಿ ಅಧ್ಯಯನ ಪೀಠ ಸ್ಥಾಪಿಸಬೇಕು. ಬಾಲ್ಯ ವಿವಾಹ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಜೀತಪದ್ಧತಿ, ಋತುಮತಿಯಾದ ಮಹಿಳೆಯನ್ನು ಗ್ರಾಮದಿಂದ ಬಹಿಷ್ಕರಿಸುವ ಅನಿಷ್ಠ ಪದ್ಧತಿಗಳು ತೊಲಗಬೇಕು ಎಂದು ಶ್ರೀಗಳು ಒತ್ತಾಯಿಸಿದರು.
ಮೂರು ದಿನಗಳ ನಿರಶನದಲ್ಲಿ ಯಡಿಯೂರು ಶ್ರೀ ತೋಂಟದ ಸಿದ್ದಲಿಂಗಸ್ವಾಮೀಜಿ, ಕಲ್ಬುರ್ಗಿಯ ಶ್ರೀ ಶರಣಬಸವ ಸ್ವಾಮೀಜಿ, ಹುಕ್ಕೇರಿಯ ಶ್ರೀ ಪಂಚಮ ಶಿವಲಿಂಗಸ್ವಾಮೀಜಿ, ಸಾಣೆಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ ಮುಂತಾದವರು ಪಾಲ್ಗೊಂಡಿದ್ದಾರೆ.