ಕೈಲಾಸಂ ಅವರ ಸತ್ತವನ ಸಂತಾಪ ನಾಟಕ ನೋಡಿ
ಬೆಂಗಳೂರು, ಮಾರ್ಚ್ 08: ಹಾಸ್ಯ ಮತ್ತು ಗಂಭಿರತೆಗಳು ಕೈಲಾಸಂ ನಾಟಕಗಳ ವಿಶಿಷ್ಟತೆ. ನಿಜಜೀವನದಲ್ಲಿ ನಾವು ಹೇಗೆ ಹುಚ್ಚರಂತೆ ನಡೆದುಕೊಳ್ಳುತ್ತೇವೆ ಎಂಬುದನ್ನು ಅವರ ನಾಟಕಗಳು ಎತ್ತಿ ತೋರಿಸುತ್ತವೆ. ಅವು ನಮಗೆ ತೋರಿಸುವ ಸಮಾಜದ ವಿಕಾರಗಳನ್ನು ನಾವೇ ನೋಡಿ ನಗುತ್ತೇವೆ. ಅಂತಹ ನಾಟಕಗಳಲ್ಲಿ ಒಂದು, "ಸತ್ತವನ ಸಂತಾಪ".
ಬಹುತೇಕ ಹೊಸಬರು - ಅದರಲ್ಲೂ, ಹೆಚ್ಚಿನವರು ವಿದ್ಯಾರ್ಥಿಗಳು ಸೇರಿ ಕಟ್ಟಿಕೊಂಡಿರುವ ರಂಗತಂಡ ಜ್ಯೋತಿರಮೇಘ. ಈ ತಂಡದ ಮೊದಲ ಪ್ರಯೋಗ ಟಿ.ಪಿ. ಕೈಲಾಸಂ ಅವರ "ಸತ್ತವನ ಸಂತಾಪ" ನಾಟಕದ ಎರಡನೇ ಪ್ರದರ್ಶನವು
ಕೆ.ಹೆಚ್. ಕಲಾಸೌಧದಲ್ಲಿ ಮಾರ್ಚ್ 9, 2016 ರಂದು ಸಂಜೆ 7.30ಕ್ಕೆ ಪ್ರದರ್ಶನವಾಗಲಿದೆ.
ನಾಟಕದ ಹೆಸರು: ಸತ್ತವನ ಸಂತಾಪ
ಪ್ರದರ್ಶನದ ಸ್ಥಳ: ಕೆ.ಹೆಚ್. ಕಲಾಸೌಧ, ಹನುಮಂತ ನಗರ, ಬೆಂಗಳೂರು
ದಿನಾಂಕ: ಮಾರ್ಚ್ 9, 2016.
ಸಮಯ: ಸಂಜೆ 7.30
ಟಿಕೆಟ್ ದರ: 100 /-

"ಸತ್ತವನ ಸಂತಾಪ" ನಾಟಕವು ಈಗಿನ ಸಾಮಾಜಿಕ ಸ್ಥತಿಗೆ ತುಂಬ ಹತ್ತಿರ. ಈ ನಾಟಕವು ಹೆಂಡತಿಯನ್ನು ತನ್ನ ತಂದೆಯಿಂದ ಹಣ ಕೇಳಲು ಪದೇ ಪದೇ ಸತಾಯಿಸುವ ನರಸಿಂಹಯ್ಯ ಎಂಬ ವ್ಯಕ್ತಿಯ ಸುತ್ತ ನಡೆಯುತ್ತದೆ. ತಂದೆಗೆ ಹಣಕ್ಕಾಗಿ ಪತ್ರ ಬರೆಯಲು ನಿರಾಕರಿಸುವ ಹೆಂಡತಿಗೆ ತನ್ನ ಬೆಲೆ ತಿಳಿಸಬೇಕು ಎಂದು ತಾನು ಕೆರೆಗೆ ಬಿದ್ದು ಸತ್ತಂತೆ ನಟಿಸುತ್ತಾನೆ, ನರಸಿಂಹಯ್ಯ. ನರಸಿಂಹಯ್ಯನ ಸಾವನ್ನು ಊರಿನ ಶ್ಯಾನುಭೋಗರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ.
ಕೊನೆಗೆ ನರಸಿಂಹಯ್ಯನ ಬೆಲೆ ತನ್ನ ಹೆಂಡತಿಗೆ ಗೊತ್ತಾಗುತ್ತದೋ ಅಥವ ಅವನ ಹೆಂಡತಿಗೆ ತನ್ನ ಗಂಡನ ಬೆಲೆ ಗೊತ್ತಾಗುತ್ತೋ, ಅಥವ ಯಾರ ಬೆಲೆ ಮತ್ತು ಯೋಗ್ಯತೆಗಳು ಯಾರಿಗೆ ಅರಿವಾಗುತ್ತೆ ಎಂಬುದು ಈ ನಾಟಕದ ಕಥಾ ವಸ್ತು. ನಾಟಕವು ಪ್ರೇಕ್ಷಕರನ್ನು ನಗಿಸಿದರೂ, ಆ ನಗುವಿನ ಕೆಳಗೆ ಒಂದು ಗಂಭೀರವಾದ ಚಿಂತನೆ ಇದೆ.
Cast & Crew
==================
ರಚನೆ: ಟಿಪಿ ಕೈಲಾಸಂ
ನಿರ್ದೇಶನ: ಕಿರಣ್ ಪ್ರಭು
ಸಂಗೀತ: ಶಶಾಂಕ್ ಪ್ರಣವ್
ಬೆಳಕು: ಮನಸ್ ಸಂಪತ್
1. ಕಿರಣ್ ಚನ್ನವೀರ್ (ನರಸಿಂಹಯ್ಯ)
2. ಸಿಂಧು ಪುರೋಹಿತ್ (ಲಕ್ಷಮ್ಮ)
3. ಅಲ್ತಾಫ್ (ಶ್ಯಾನುಭೋಗ)
4. ಅಶ್ವಿನಿ (ಕೆಂಪಮ್ಮ)
5. ಪ್ರವೀಣ್ (ಧರಣ್ಣಯ್ಯ)
6. ಶರತ್ ಗೌಡ (ಸದಾಶಿವಯ್ಯ)
7. ಅರ್ಜುನ್ ಕುಮಾರ್ (ವೆಂಕಟರಮಣ ಶೆಟ್ರು)
8. ಶರತ್ ಪಿ. ಆರ್. (ಪೊಲೀಸ್ ಇನ್ಸ್ಪೆಕ್ಟರ್)
9. ವರುಣ್ (ಪೊಲೀಸ್ ಪೇದೆ)
10. ಶ್ರೀನಿಧಿ, ಧನುಶ್, ಅಕ್ಷಯ್, ಸುದರ್ಶನ್ (ದನಕಾಯುವವರು)
ಸಹಕಾರ: ಅವಿನಾಶ ಶಾಸ್ತ್ರಿ, ವರ್ಷ ವ.ಕೆ. ರಾವ್, ಅಜಯ್ ನಾಯಕ್, ಮನೋಜ್ ಎನ್, ಮನೋಹರ್ ಎನ್, ನಿಖಿಲ್ ವಾಯ್ಕರ್, ಅಪೂರ್ವ ಅಡಿಗ, ಪವನ್ ಕುಮಾರ್ ಎ, ನಿಖಿಲ್.

ಟಿಕೆಟುಗಳು 99doing.com ನಲ್ಲಿ ಲಭ್ಯ. https://www.99doing.com/sattavanasantaapa
Discount Coupon code: STVSNT20 (20% discount)
Our Facebook page: http://facebook.com/jyotirmegha
Food partner: South Kitchen
Online partner: One India
Photography Partner: Capture Life
Ticketing partner: Filmy sphere
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications