ಎಂಎಆರ್ ಯೋಜನೆ: ಪ್ರತಿ 1 ಕಿಮೀ ರಸ್ತೆಗೆ ಬರೋಬ್ಬರಿ 43 ಕೋಟಿ ವೆಚ್ಚ!
ಬೆಂಗಳೂರು, ಫೆಬ್ರವರಿ 14 : ನಾಡಪ್ರಭು ಕೆಂಪೇಗೌಡ ಬಡಾವಣೆಯಿಂದ ಮಾಗಡಿ ರಸ್ತೆ ಹಾಗೂ ಮೈಸೂರು ರಸ್ತೆಯನ್ನು ಸಂಪರ್ಕಿಸುವ 10.7 ಕಿ.ಮೀ ರಸ್ತೆಗೆ ಬರೋಬ್ಬರಿ 466 ಕೋಟಿ ರೂ ವೆಚ್ಚಮಾಡಲಾಗುತ್ತಿದ್ದು ಪ್ರತಿ ಕಿ.ಮೀ ಗೆ 43 ಕೋಟಿ ರೂ ತಲುಗುಲುತ್ತದೆ ಈ ಸುದ್ದಿ ಸಾರ್ವಜನಿಕರು ಹುಬ್ಬೇರಿಸುವಂತೆ ಮಾಡಿದೆ.
ನಮ್ಮ ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನಕ್ಕೆ ಖರ್ಚಾಗಿರುವುದ 450 ಕೋಟಿ. ಆದರೆ, ಇದಕ್ಕಿಂತ ಹೆಚ್ಚಿನ ಹಣವನ್ನು ಸಿದ್ದರಾಮಯ್ಯ ಸರ್ಕಾರ ಬರೀ 10 ಕಿಲೋಮೀಟರ್ ರಸ್ತೆಗೆ ಖರ್ಚು ಮಾಡಲು ಹೊರಟಿದೆ.
ಈ ರಸ್ತೆಯನ್ನು ಬಿಡಿಎ ನಿರ್ಮಿಸುತ್ತಿದೆ. ಜನವರಿ 2 ರಂದು ನಡೆದ ಕ್ಯಾಬಿನೇಟ್ ನಲ್ಲಿ ಎಂಎಆರ್ ಯೊಜನೆಗೆ 466 ಕೋಟಿ ರೂ ಮೀಸಲಿಡುವ ಬಗ್ಗೆ ಹಸಿರು ನಿಶಾನೆ ನೀಡಲಾಗಿದೆ. ಈ ಹಿಂದೆ ಫೆರಿಪೆರಲ್ ರಿಂಗ್ ರೋಡ್ 2 ಭಾಗ 1 ರಲ್ಲಿ ತುಮಕೂರು ರಸ್ತೆ , ಹೊಡೂರು ರಸ್ತೆ, ಬಳ್ಳಾರಿ ರಸ್ತೆ ಮಾರ್ಗವಾಗಿ ಹಳೆ ಮದ್ರಾಸ್ ರಸ್ತೆ ಹಾಗೂ ಸರ್ಜಾಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಯೋಜನೆ ಇನ್ನುವರೆಗೂ ಮುಗಿದಿಲ್ಲ.

ಕೆಂಪೇಗೌಡ ಲೇಔಟ್ ಪ್ರಾಜೆಕ್ಟ್ನ ಭಾಗವಾಗಿ ಈ ಕಾಮಗಾರಿಯ ಗುತ್ತಿಗೆಯನ್ನು ಸ್ಟಾರ್ ಕಂಪೆನಿಗೆ ವಹಿಸಿಕೊಡಲಾಗುತ್ತಿದೆ. ಒಂದು ಕಿಲೋಮೀಟರ್ ಡಾಂಬರ್ ರಸ್ತೆಗೆ ಹೆಚ್ಚೆಂದರೆ ಖರ್ಚಾಗುವುದು 1 ಕೋಟಿ. ಇನ್ನೂ ಕಾಂಕ್ರಿಟ್ ರಸ್ತೆಗೆ ಪ್ರತಿ ಕಿಲೋಮೀಟರ್ಗೆ 2ರಿಂದ ಮೂರುವರೆ ಕೋಟಿಯಾಗುತ್ತೆ.
ಇವತ್ತಿನ ದಿನಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಟೆಂಡರ್ ಶ್ಯೂರ್ ರಸ್ತೆಗೆ ಪ್ರತಿ ಕಿಲೋಮೀಟರ್ಗೆ 5 ಕೋಟಿಯಾದರೆ ವೈಟ್ ಟಾಪಿಂಗ್ ರಸ್ತೆಯ ಖರ್ಚಾಗೋದು ಕಿಲೋಮೀಟರ್ಗೆ ಹೆಚ್ಚೆಂದ್ರೂ 10 ಕೋಟಿ. ಹೀಗಿರುವಾಗ ಕೆಂಪೇಗೌಡ ಲೇಔಟ್ನ ಪ್ರತಿ ಕಿಲೋಮೀಟರ್ ರಸ್ತೆಗೆ 39 ಕೋಟಿ ಖರ್ಚು ಮಾಡುತ್ತಿರುವುದು ಯಾರ ಉದ್ದಾರಕ್ಕೆ ಎನ್ನುವುದು ಈಗಿರುವ ಪ್ರಶ್ನೆಯಾಗಿದೆ.
ಈಗ ನಡೆಯುತ್ತಿರುವ ಎನ್ ಎಚ್ ಎಎಲ್ ರಸ್ತೆಯಲ್ಲಿ ಒಂದು ಕಿ.ಮೀ ಗೆ 15 ಕೋಟಿ ರೂ. ವೆಚ್ಚಮಾಡಲಾಗುತ್ತಿದೆ. ನಗರಾಭಿವೃದ್ಧಿ ಇಲಾಖೆ ಮಾಹಿತಿ ಪ್ರಕಾರ ಅಭಿವೃದ್ಧಿ ವೆಚ್ಚವು ಅಧಿಕವಾಗಿದೆ ಹಾಗೂ ಸೇವಾ ತೆರಿಗೆ ಕೂಡ ಹೆಚ್ಚಳವಾಗಿದೆ ಆದ್ದರಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದಿದ್ದಾರೆ.
ಜಿಎಸ್ ಟಿ ಪ್ರಭಾವದಿಂದ ನಂತರ ಎಂಎಆರ್ ಯೋಜನೆಗೆ ೪೩೮ ಕೋಟಿ ಮೀಸಲಿಡುಲು ಚಿಂತನೆ ನಡೆಸಲಾಗಿತ್ತು, ಅದಾದ ನಂತರ 469 ಕೋಟಿ ಮೀಡಲಿಡುವಂತೆ ಬಿಡ್ ಮಾಡಲಾಗಿತ್ತು. ಕೊನೆಯದಾಗಿ ಸರ್ಕಾರವು 466 ಕೋಟಿ ಮೀಲಿಡುವುದಾಗಿ ತಿಳಿಸಿದೆ. ಇದು 350 ಎಕರೆ ಪ್ರದೇಶದಲ್ಲಿ, 2 ಸರ್ವೀಸ್ ರಸ್ತೆ ಒಳಗೊಂಡಂತೆ, 10 ಲೈನ್ ರಸ್ತೆಗಳನ್ನು ನಿರ್ಮಿಸಲಾಗುತ್ತದೆ.
-
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain












Click it and Unblock the Notifications