ಸ್ಲಂ ಭರತ್ ಶಿಷ್ಯನ ಮುಂಗೈ ಕತ್ತರಿಸಿದ ಕಿರಾತಕರು ಎಸ್ಕೇಪ್
ಬೆಂಗಳೂರು, ಜೂ. 01: ಬೆಂಗಳೂರಿನಲ್ಲಿ ಗ್ಯಾಂಗ್ ವಾರ್ ಮತ್ತೆ ಶುರುವಾಗಿದೆ. ಡಿಯೋ ಬೈಕ್ ಸರ್ವೀಸ್ ನೀಡುವ ವಿಚಾರವಾಗಿ ಬೆಂಗಳೂರಿನ ಹಳೇ ರೌಡಿಗಳ ಶಿಷ್ಯಂದಿರು ಕೈ ಕತ್ತರಿಸಿಕೊಂಡಿದ್ದಾರೆ. ಸ್ಲಂ ಬರತ್ ಮತ್ತು ಟಿಂಬರ್ ಕಿಟ್ಟಿ ಎಂಬ ಪಾತಕಿಗಳ ಸಹಚರರ ನಡುವೆ ಮಾರಾಮಾರಿ ನಡೆದು ಲಾಂಗ್ ಗಳಿಂದ ಹೊಡೆದಾಡಿಕೊಂಡಿದ್ದಾರೆ. ಸ್ಲಂ ಭರತ್ ನ ಆಪ್ತ ಚಂದನ್ ಅಲಿಯಾಸ್ ಪಿನ್ಲೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಬ್ಯಾಟರಾಯನಪುರ ಪೊಲೀಸ್ ಠಾಣೆ ರೌಡಿ ಶೀಟರ್ ಆಗಿರುವ ಚಂದನ್ ಪಾತಕಿ ಸ್ಲಂ ಭರತ್ ನ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ. ಸ್ಲಂ ಭರತ್ ಎನ್ ಕೌಂಟರ್ ಬಳಿಕ ಆತನ ಶಿಷ್ಯ ಚಂದನ್ ಪಾತಕ ಲೋಕ ಬಿಟ್ಟು ಗಣಪತಿ ನಗರದಲ್ಲಿ ಬೈಕ್ ಶೋ ರೂಂ ತೆರೆದಿದ್ದ. ಸ್ಲಂ ಭರತ್ ಎದುರಾಳಿ ಗ್ಯಾಂಗ್ ಟಿಂಬರ್ ಕಿಟ್ಟಿ ಸಹಚರರು ಗುರುವಾರ ಬೆಳಗ್ಗೆ ಗಣಪತಿ ನಗರದಲ್ಲಿರುವ ಚಂದನ್ ಬೈಕ್ ಶೋ ರೂಂಗೆ ಹೋಗಿದ್ದಾರೆ. ಸರ್ವೀಸ್ ವಿಚಾರವಾಗಿ ಜಗಳ ನಡೆದಿದೆ. ಈ ವೇಳೆ ಟಿಂಬರ್ ಕಿಟ್ಟಿ ಕಡೆಯವರು ಎನ್ನಲಾದ ಯುವಕರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ತಪ್ಪಿಸಿಕೊಳ್ಳಲು ಕೈ ಅಡ್ಡ ಇಟ್ಟ ಚಂದನ್ ಮುಂಗೈ ಅರ್ಧ ಕಟ್ಟಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಬ್ಯಾಟರಾಯನಪುರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Recommended Video
ಕೊರೊನಾ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪರಾಧ ಲೋಕ ತಣ್ಣಗೆ ಮಲಗಿತ್ತು. ಇದೀಗ ಲಾಕ್ ಡೌನ್ ಸಡಿಲ ಆಗುತ್ತಿದ್ದಂತೆ ಪಾತಕ ಲೋಕ ಪುಟಿದೆದ್ದಿದೆ. ಹಾಡ ಹಗಲೇ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ರನ್ನು ಹತ್ಯೆ ಮಾಡಿದ್ದರು. ರೇಖಾ ಸಂಬಂಧಿಕರಿಂದ ಸುಪಾರಿ ಪಡೆದು ಹತ್ಯೆ ಮಾಡಿದ ಏಳು ಮಂದಿ ಪಾತಕಿಗಳು ಜೈಲಿಗೆ ಹೋಗಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಎರಡು ರೌಡಿ ಪಡೆಗಳ ನಡುವಿನ ಕಾಳಗ ಬೆಂಗಳೂರು ಪಾತಕ ಲೋಕವನ್ನು ಅನಾವರಣಗೊಳಿಸಿದೆ.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications