ಉತ್ತರ ಪತ್ರಿಕೆಗಳಲ್ಲಿ ಅಸಂಬದ್ಧ ಬರಹ, ಚಿಹ್ನೆ ಇನ್ನು ಪರೀಕ್ಷಾ ಅಕ್ರಮ
Recommended Video

ಬೆಂಗಳೂರು, ಅಕ್ಟೋಬರ್ 5: ಇನ್ನುಮುಂದೆ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಅಸಂಬದ್ಧ ಬರಹಗಳಿದ್ದರೆ ಅವುಗಳನ್ನು ಪರೀಕ್ಷಾ ಅಕ್ರಮವೆಂದು ಪರಿಗಣಿಸಲಾಗುತ್ತದೆ.
ಉತ್ತರ ಪತ್ರಿಕೆಗಳಲ್ಲಿ ದೇವರ ಹೆಸರನ್ನು ಬರೆಯುವುದು ಅಥವಾ ಯಾವುದೋ ಚಿಹ್ನೆಗಳನ್ನು ಬರೆದರೆ ಅಂತಹ ವಿದ್ಯಾರ್ಥಿಗಳು ಡಿಬಾರ್ ಮಾಡಲಾಗುತ್ತದೆ.
ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ಖಾಲಿ ಬಿಟ್ಟಿರುವ ಜಾಗವನ್ನು ಹೇಗೆ ತುಂಬಿಸುವುದು ಎಂದು ದೇವರ ಹೆಸರು ಇನ್ನೇನೋ ಚಿಹ್ನೆಗಳನ್ನು ಬರೆಯುವಂತಿಲ್ಲ ಇವೆಲ್ಲವನ್ನೂ ಅಕ್ರಮ ಎಂದು ಪರಿಗಣಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾಲಯ ನಿರ್ಧರಿಸಿದೆ.

ಉತ್ತರ ಪತ್ರಿಕೆಯಲ್ಲಿ ಸ್ವಸ್ತಿಕ್, ಶ್ರೀ, ಓಂ, ಏಸುವಿನ ಶಿಲುಬೆ ಬರೆದು ಬಳಿಕ ಉತ್ತರಿಸುತ್ತಿದ್ದು, ದೇವರು ಕಾಪಾಡುತ್ತಾನೆಂಬ ನಂಬಿಕೆ ಹೊಂದಿದ್ದಾರೆ ಅಲ್ಲದೆ ಗುರುತನ್ನು ತಿಳಿಸುವ ಮೂಲಕ ಮೌಲ್ಯಮಾಪಕರಿಂದ ಹೆಚ್ಚಿನ ಅಂಕ ಪಡೆಯಲು ಆಮಿಷ ಒಡ್ಡಿದಂತೆ ಎಂದು ನಿರ್ಧರಿಸಲಾಗಿದೆ.
ಒಂದು ವೇಳೆ ಬರೆದಿದ್ದರೆ ಅಂತಹ ಉತ್ತರ ಪತ್ರಿಕೆಯನ್ನು ನಕಲು ಎಂದು ಪರಿಗಣಿಸಲಾಗುತ್ತದೆ. ಎಲೆಕ್ಟ್ರಾನಿಕ ಗೆಜೆಟ್ಸ್ ಗಳಾದ ಪೆನ್, ಇಯರ್ ಫೋನ್, ವಾಚ್, ಮೊಬೈಲ್ ತರುವಂತಿಲ್ಲ, ಮೈ-ಉಡುಪಿನ ಮೇಲೆ ಏನನ್ನೂ ಬರೆಯುವಂತಿಲ್ಲ ಎಂದು ಎಂದು ತಿಳಿಸಲಾಗಿದೆ.











Click it and Unblock the Notifications