ನಕಲಿ ಪರ್ಮಿಟ್ ಬಳಸಿ ಅದಿರು ಸಾಗಿಸುತ್ತಿದ್ದ ರೆಡ್ಡಿ

ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಚ್ ಶೀಟ್ ನಲ್ಲಿ ಜನಾರ್ದನ ರೆಡ್ಡಿ ನಡೆಸಿರುವ ಅಕ್ರಮಗಳು ಕುರಿತು ವಿವರ ನೀಡಲಾಗಿದೆ. ಮೂರು ಹಂತದಲ್ಲಿ ಅದಿರು ಸಾಗಣೆ ಮಾಡುವ ಜಾಲವನ್ನು ರೆಡ್ಡಿ ನಿರ್ವಹಿಸಿಸುತ್ತಿದ್ದರು. ಬೇಲೇಕೇರಿ ಬಂದರು ಮೂಲಕ ಅದಿರು ಸಾಗಣೆ ಮಾಡುತ್ತಿದ್ದರು.
ಆಂಧ್ರಪ್ರದೇಶ ರಾಜ್ಯದ ನಕಲಿ ಅದಿರು ಸಾಗಣೆ ಪರವಾನಗಿಯನ್ನು ತೋರಿಸಿ, ರೆಡ್ಡಿ ಬೇಲೇಕೇರಿ ಬಂದರಿನ ಮೂಲಕ ಅದಿರು ಸಾಗಣೆ ಮಾಡುತ್ತಿದ್ದರು ಎಂದು ಚಾರ್ಚ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ರೆಡ್ಡಿ ಆಂಧ್ರಪ್ರದೇಶದಲ್ಲೂ ತಮ್ಮ ಪ್ರಭಾವ ಹೊಂದಿದ್ದರು ಎಂಬುದು ಬಹಿರಂಗವಾಗಿದೆ.
ಜನಾರ್ದನ ರೆಡ್ಡಿ ಜೊತೆಗಿದ್ದ ಸ್ವಸ್ತಿಕ್ ನಾಗರಾಜ್, ಕಾರದಪುಡಿ ಮಹೇಶ್ ಮತ್ತು ರೆಡ್ಡಿ ಆಪ್ತ ಅಲಿಖಾನ್ ಈ ನಕಲಿ ಪರವಾನಗಿ ಪಡೆಯುವುದು ಮತ್ತು ಅದನ್ನು ನಿರ್ವಹಿಸುವ ಕೆಲಸ ಮಾಡುತ್ತಿದ್ದರು ಎಂದು ವಿವರ ನೀಡಲಾಗಿದೆ.
ಹೀಗೆ ಆಂಧ್ರಪ್ರದೇಶದ ನಕಲಿ ಪರವಾನಗಿ ಬಳಸಿಕೊಂಡು ಬೇಲೇಕೇರಿ ಬಂದರಿನಿಂದ ರೆಡ್ಡಿಯ ಸೂಚನೆಯಂತೆ ಜನವರಿ 2009ರಿಂದ 2010ರ ಮೇ 31ರವರೆಗೆ ಅಕ್ರಮವಾಗಿ ಅದಿರು ಸಾಗಣೆ ಮಾಡಿದ್ದಾರೆ ಎಂದು ಚಾರ್ಚ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಶಾಫಿಯಾ ಮಿನರಲ್ಸ್, ಮಂಜುನಾಥೇಶ್ವರ ಮಿನರಲ್ಸ್ ಹೆಸರಿನಲ್ಲಿ ಈ ನಕಲಿ ಪರವಾನಗಿಗಳನ್ನು ತಯಾರು ಮಾಡಲಾಗಿತ್ತು. ರೆಡ್ಡಿ ಸಹಾಯಕರು, ಕೆಲಸಗಾರರು ಈ ಕಂಪನಿಗಳ ಮಾಲೀಕರಾಗಿದ್ದರು. ಹೀಗೆ ಅಕ್ರಮವಾಗಿ ಸಾಗಿಸಿದ ಅದಿರಿನ ಹಣ ರೆಡ್ಡಿ ಖಜಾನೆ ಸೇರುತ್ತಿತ್ತು.
ರೆಡ್ಡಿ ಮತ್ತು ಅಲಿಖಾನ್ ಸ್ಥಳೀಯ ಗಣಿ ಮಾಲೀಕರನ್ನು ಬೆದರಿಸಿ ಹಲವು ಗಣಿ ಗುತ್ತಿಗೆದಾರರಿಂದ ಬಲವಂತವಾಗಿ ಗಣಿಗಳನ್ನು ಉಪ ಗುತ್ತಿಗೆ ಪಡೆದಿದ್ದರು. ಕೆಲವು ಗಣಿ ಗುತ್ತಿಗೆಗಳಲ್ಲಿ ತೆಗೆಯುತ್ತಿದ್ದ ಅದಿರಿನಲ್ಲಿ ಶೇಕಡ 30ರಷ್ಟನ್ನು ಹಫ್ತಾ ರೂಪದಲ್ಲಿ ಸಂಗ್ರಹಿಸುತ್ತಿದ್ದರು ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ನಕಲಿ ಪರವಾನಗಿ ತೋರಿಸಿ ಅದಿರು ಸಾಗಿಸುವುದನ್ನು ಪ್ರಶ್ನಿಸುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರಿಗೆ ರೆಡ್ಡಿ ಆಪ್ತ ಅಲಿಖಾನ್ ಬೆದರಿಕೆ ಹಾಕುತ್ತಿದ್ದರು. ಈ ಮೂಲಕ ತಮ್ಮ ವ್ಯವಹಾರಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುತ್ತಿದ್ದರು ಎಂದು ಪಟ್ಟಿ ಹೇಳುತ್ತಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications