40 ವರ್ಷಕ್ಕಿಂತ ಮೇಲ್ಪಟ್ಟ ಚಾಲಕರಿಂದಲೇ 40%ರಷ್ಟು ಬಸ್ ಅಪಘಾತ
ಬೆಂಗಳೂರು, ಮೇ18: ಸಾರ್ವಜನಿಕರ ದಿನನಿತ್ಯದ ಅಗತ್ಯ ಪ್ರಯಾಣ ಸಾರಿಗೆ ಅವಶ್ಯವಾಗಿರುವ ಕೆಎಸ್ಆರ್ಟಿಸಿ ಬಸ್ ಸೇವೆ ಸಾಕಷ್ಟು ಅನುಕೂಲತೆಯನ್ನು ಹೊಂದಿದೆ. ಆದರೆ ದಿನನಿತ್ಯವು ಸಾವಿರಾರು ಬಸ್ಗಳು ರಸ್ತೆಗಿಳಿದು ಸಾರ್ವಜನಿಕರ ಪ್ರಯಾಣದ ಸೇವೆಯಲ್ಲಿ ನಿರತರಾಗಿರುವ ಕೆಎಸ್ಆರ್ಟಿಸಿ ಬಸ್ಗಳು ಕಳೆದ 4 ತಿಂಗಳಲ್ಲಿ ಚಾಲಕರು 80 ಕೆಎಸ್ಆರ್ಟಿಸಿ ಬಸ್ಗಳನ್ನು ಮಾರಣಾಂತಿಕ ಅಪಘಾತಗಳಿಗೆ ಹಾನಿ ಪಡಿಸಿದ್ದಾರೆ. ಹೀಗೆ ಸಂಭವಿಸಿರುವ ಈ ಮಾರಣಾಂತಿಕ ರಸ್ತೆ ಅಪಘಾತಗಳಿಗೆ 40ರಿಂದ 50 ವರ್ಷ ವಯಸ್ಸಿನ ಬಸ್ ಚಾಲಕರೇ ಕಾರಣರಾಗಿದ್ದಾರೆ ಎಂದು ನಿಗಮವು ಈ ಮಾಹಿತಿಯನ್ನು ಚಾಲಕರಿಗೆ ನೀಡಿದ ಕಾರ್ಯಗಾರದಲ್ಲಿ ಬಹಿರಂಗ ಪಡಿಸಿದೆ.
2022ರ ಕೇವಲ 4 ತಿಂಗಳ ನಡುವೆ ವರದಿಯಾಗಿರುವ 82 ಬಸ್ಗಳು ಮಾರಣಾಂತಿಕ ಅಪಘಾತಗಳನ್ನು ನಿಗಮದ ಅಧಿಕಾರಿಗಳು ವಿಶ್ಲೇಷಿಸಿದಾಗ ಈ ಗಂಭೀರ ಮಾಹಿತಿ ಸಿಕ್ಕಿದೆ. ಕೆಎಸ್ಆರ್ಟಿಸಿ ಬಸ್ ಚಲಾಯಿಸಿದ್ದ ಶೇಕಡಾ 39ರಷ್ಟು 40ರಿಂದ 50 ವಯಸ್ಸಿನವರು ಬಸ್ಗಳನ್ನು ರಸ್ತೆ ಅಫಘಾತಗಳಲ್ಲಿ ಮಾರಣಾಂತಿಕವಾಗಿ ಹಾನಿಪಡಿಸಲಾಗಿದೆ. ಇದಕ್ಕೆ ಮೂಲ ಕಾರಣ 40ರಿಂದ 50 ವಯಸ್ಸಿನ ಬಸ್ ಚಾಲಕರೇ ಆಗಿದ್ದಾರೆ. ಇನ್ನು ಶೇಕಡಾ 23ರಷ್ಟು ಬಸ್ ಅಪಘಾತಗಳು 36ರಿಂದ 40 ವಯಸ್ಸಿನ ಬಸ್ ಚಾಲಕರೇ ಕಾರಣವಾಗಿದ್ದಾರೆ ಎಂದು ನಿಗಮವು ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಈ ಕುರಿತಂತೆ ನಿಗಮವು ರಸ್ತೆ ಸುರಕ್ಷೆಯ ಕುರಿತು ಕಾರ್ಯಗಾರವನ್ನು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಗಂಭೀರ ಮಾಹಿತಿಯನ್ನು ಗಮನ ಸೆಳದಿದ್ದು ಬಸ್ ಚಾಲಕರು ಎಚ್ಚರವಹಿಸಿ ಬಸ್ ಚಲಾಯಿಸಬೇಕಾಗುತ್ತದೆ ಹಾಗೂ ಮಾರಣಾಂತಿಕ ಅಪಘಾತಗಳನ್ನು ತಡೆಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ನಿಗಮವು ಕಾರ್ಯಗಾರದಲ್ಲಿ ಗಮನ ಸೆಳೆದಿದೆ. ಈ ವಿಶೇಷ ಕಾರ್ಯಾಗಾರದಲ್ಲಿ ಕೆಲವು ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಚರ್ಚಿಸಲಾಯಿತು. 27ರಷ್ಟು ಅಪಘಾತಗಳು ಮಧ್ಯಾಹ್ನದ ಸಮಯದಲ್ಲಿ ಸಂಭವಿಸಿವೆ. ಪಾದಚಾರಿಗಳು ಮೊಬೈಲ್ನಲ್ಲಿ ಮಾತನಾಡಿಕೊಂಡು ದಾಟುತ್ತಿರುವುದು ಅಪಘಾತಗಳಿಗೆ ಕಾರಣ ತಿಳಿದು ಬಂದಿದೆ ಹಾಗೂ 40%ರಷ್ಟು ಕೆಎಸ್ಆರ್ಟಿಸಿ ಬಸ್ ಅಪಘಾತಗಳು 40 ವರ್ಷಕ್ಕಿಂತ ಮೇಲ್ಪಟ್ಟ ಚಾಲಕರಿಂದ ಉಂಟಾಗುತ್ತಿರುವುದು ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟಿದೆ.

ಕೆಎಸ್ಆರ್ಟಿಸಿಯ ಹಿರಿಯ ಅಧಿಕಾರಿಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ಕೆಎಸ್ಆರ್ಟಿಸಿ ಬಸ್ ಅಪಘಾತದಲ್ಲಿ ಗಾಯಗೊಂಡಿರುವ ಪ್ರಯಾಣಿಕರು, ನೌಕರರು ಮತ್ತು ಅವರ ಕುಟುಂಬಗಳನ್ನು ಭೇಟಿ ಮಾಡಿದರು. ಅವರಿಗೆ ಸಾಂತ್ವನ ಹೇಳಿ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು. ಅವರಿಗಾಗಿ 'ಗೆಟ್ ವೆಲ್' ಕಿಟ್ ನೀಡಲಾಗಿದೆ ಎಂದು ನಿಗಮ ತಿಳಿಸಿತು. ಇನ್ನು ಇದೇ ವೇಳೆ ಅಪಘಾತಕ್ಕೀಡಾದ ಚಾಲಕರಿಗಾಗಿ ನಡೆದ ಜಾಗೃತಿ ಕಾರ್ಯಾಗಾರದಲ್ಲಿ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಮಾತನಾಡಿ, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಉತ್ತಮ ಅಭ್ಯಾಸಗಳನ್ನು ಕಲಿಯಲು ಅವಕಾಶವನ್ನು ಬಳಸಿಕೊಳ್ಳುವಂತೆ ಬಸ್ ಚಾಲಕರಿಗೆ ಕರೆ ನೀಡಿದರು.
Recommended Video
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications