Rameshwaram Cafe: ಬಾಂಬ್ ಸ್ಫೋಟದ ಬಳಿಕ ರಾಮೇಶ್ವರಂ ಕೆಫೆ ಆರಂಭ: ಸಿಎಂ, ಡಿಸಿಎಂ ಮುಖ್ಯ ಅತಿಥಿ

ಬೆಂಗಳೂರಿನ ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ ಒಂದು ವಾರದ ನಂತರ, ಶಿವರಾತ್ರಿಯ ಶುಭ ಸಂದರ್ಭದಲ್ಲಿ ಶುಕ್ರವಾರದಂದು ಜನಪ್ರಿಯ ಉಪಾಹಾರ ಗೃಹವು ಮತ್ತೆ ಆರಂಭವಾಗಲಿದೆ.

ಕೆಫೆಯ ಸಂಸ್ಥಾಪಕರಾದ ದಿವ್ಯಾ ಮತ್ತು ರಾಘವೇಂದ್ರ ರಾವ್ ಅವರ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಉಪ ಡಿ ಕೆ ಶಿವಕುಮಾರ್ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಸಂಜೆ 6 ಗಂಟೆಗೆ ಕೆಫೆ ಪುನರಾರಂಭ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

Rameshwaram Cafe to Reopen Tomorrow Hosting CM and DCM a Week After Blast

ಮಾರ್ಚ್ 1 ರಂದು, ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿತ್ತು. ಮುಸುಕುದಾರಿಯೊಬ್ಬ ಹೋಟೆಲ್‌ಗೆ ಬಂದು ಸ್ಫೋಟಕ ಹೊಂದಿರುವ ಚೀಲವನ್ನು ಸಮೀಪದಲ್ಲಿ ಇಟ್ಟಿದ್ದನು, ಅದರಲ್ಲಿ ಒಂದು ಗಂಟೆಯ ಟೈಮರ್ ಅನ್ನು ಹೊಂದಿಸಲಾಗಿತ್ತು, ಒಂದು ಗಂಟೆಯ ನಂತರ ನಡೆದ ಸ್ಫೋಟದಲ್ಲಿ 10 ಜನರು ಗಾಯಗೊಂಡರು ಎಂದು ಪೊಲೀಸರು ಮಾಹಿತಿ ನೀಡಿದರು.

ಸಿಸಿಟಿವಿಯಲ್ಲಿ ಸೆರೆಯಾಗಿರುವ ಶಂಕಿತ ಆರೋಪಿಯ ಪತ್ತೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ 10 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದೆ.

ಶಿವರಾತ್ರಿಯಿಂದ ಮತ್ತೆ ಆರಂಭ

ಸ್ಫೋಟದ ಬಳಿಕ ರಾಮೇಶ್ವರಂ ಕೆಫೆಯನ್ನು ಮುಚ್ಚಲಾಗಿತ್ತು. ಸ್ಫೋಟದಿಂದ ಕೆಫೆಗೆ ಹಾನಿಯಾಗಿತ್ತು, ಒಳಾಂಗಣವನ್ನು ಮರುವಿನ್ಯಾಸ ಮಾಡಲಾಗಿದ್ದು, ಶಿವರಾತ್ರಿಯಂದು ಮತ್ತೆ ಆರಂಭವಾಗಲಿದೆ.

ರಾಮೇಶ್ವರಂ ಕೆಫೆ ಬೆಂಗಳೂರಿನ ಯಶಸ್ವಿ ಕೆಫೆ ಉದ್ಯಮಗಳಲ್ಲಿ ಒಂದಾಗಿದೆ. ಬೆಂಗಳೂರಿನಲ್ಲಿ ಒಟ್ಟು 5 ಕಡೆಗಳಲ್ಲಿ ಈ ಕೆಫೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ತಿಂಗಳು ಕೋಟ್ಯಂತರ ವ್ಯವಹಾರ ಮಾಡುವ ರಾಮೇಶ್ವರಂ ಕೆಫೆ, ತನ್ನ ವಿಶೇಷ ಖಾದ್ಯಗಳಿಂದ ಸಾಕಷ್ಟು ಜನಪ್ರಿಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+