ವಿಶ್ವದಾಖಲೆಯ ರಕ್ಷಾ ಬಂಧನ: 5 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ
ಬೆಂಗಳೂರು, ಆಗಸ್ಟ್ 18: ಶ್ರಾವಣದ ಪೌರ್ಣಮಿ, ಚಾತುರ್ಮಾಸ ಜತೆಗೆ ರಕ್ಷಾ ಬಂಧನದ ಸಡಗರ ಅಲ್ಲಿ ನೂರಾರು ಜನರನ್ನು ಸೇರುವಂತೆ ಮಾಡಿತ್ತು. ಅಂತಃಕರಣ, ಪ್ರೀತಿ, ಭಕ್ತಿಯ ಸಂಗಮವಾಗಿದ್ದ ವೇದಿಕೆಗೆ ಸ್ಥಳ ಒದಗಿಸಿದ್ದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನ.[ಬೆಂಗಳೂರಿನಲ್ಲಿ ವಿಶ್ವದಾಖಲೆ ಸೇರಲಿದೆ ರಕ್ಷಾ ಬಂಧನ]
ಪ್ರಸನ್ನ ಸಾಗರಜೀ ಮಹಾರಾಜ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ರಾಖಿ ಹಬ್ಬ ವಿಶ್ವ ದಾಖಲೆಯಾಯಿತು. ಪಿಯೂಷ ಸಾಗರಜೀ ಮಹಾರಾಜರ ಮಾರ್ಗದರ್ಶನ ಕಾರ್ಯಕ್ರಮಕ್ಕಿತ್ತು. ತ್ಯಾಗಿ ಸೇವಾ ಸ್ಮಿತಿ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದರು.[ಪ್ರೀತಿಯ ಸೋದರನಿಗೆ ರಾಖಿಯ ಉಡುಗೊರೆ]
ಪ್ರಸನ್ನ ಸಾಗರಜೀ ಮಹಾರಾಜ್, ಪಿಯೂಷ ಸಾಗರಜೀ ಮಹಾರಾಜ್, ಪರ್ವಸಾಗರ್ ಜೀ ಮಹಾರಾಜ್ ಸೇರಿ ವಿ.ವಿ.ಪುರಂ ಮಹಾವೀರ ಧರ್ಮಶಾಲಾದಿಂದ ಆರಂಭಗೊಂಡ 'ಅಹಿಂಸಾ ಸಂಸ್ಕಾರ ಪಾದಯಾತ್ರೆ'ಗೆ ಚಾಲನೆ ನೀಡಿದರು.
ಕರ್ನಾಟಕ ಜೈನ್ ಅಸೋಸಿಯೇಷನ್ ನಿರ್ದೇಶಕ ಜಿತೇಂದ್ರ ಕುಮಾರ್ ಜೈನ್
ತ್ಯಾಗಿ ಸೇವಾ ಸಮಿತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದಾಜು 20 ಲಕ್ಷ ರುಪಾಯಿ ಇದಕ್ಕೆ ಖರ್ಚಾಗಿರಬಹುದು. ದಾನಿಗಳು ಧನಸಹಾಯ ಮಾಡಿದ್ದಾರೆ. ಈ ರಕ್ಷಾ ಬಂಧನ ಕಾರ್ಯಕ್ರಮ ದಾಖಲೆಯಾಗಿದೆ.
ರಾಖಿ ಕಟ್ಟಿದ ಸಂಭ್ರಮ
ಮೊದಲ ಸುತ್ತಿನಲ್ಲಿ 500ಕ್ಕೂ ಹೆಚ್ಚು ಯುವತಿಯರು ತಮ್ಮ ಒಡಹುಟ್ಟಿದ ಅಣ್ಣಂದಿರಿಗೆ, . ಎರಡನೇ ಸುತ್ತಿನಲ್ಲಿ 500ಕ್ಕೂ ಹೆಚ್ಚು ಅಣ್ಣಂದಿರು ತಮ್ಮ ತಂಗಿಯರಿಗೆ, ಮೂರನೇ ಸುತ್ತಿನಲ್ಲಿ 400ಕ್ಕೂ ಹೆಚ್ಚು ಹೆಣ್ಣುಮಕ್ಕಳು ತಮ್ಮ ಸೋದರಿಯರಿಗೆ ರಾಖಿ ಕಟ್ಟಿದರು.
ಜತಿನ್ ಜೈನ್-ರುತಿಕಾ ಜೈನ್
ಮಧ್ಯಾಹ್ನ 12.30ಕ್ಕೆ ಇಲ್ಲಿಗೆ ಬಂದಿವಿ. ಅದ್ಭುತವಾಗಿ ಈ ಕಾರ್ಯಕ್ರಮ ಆಗಿದೆ. ನಾವು ಇಷ್ಟು ಜನ ಇಲ್ಲಿ ಸೇರಿರುವುದೇ ಮತ್ತಷ್ಟು ಖುಷಿಗೆ ಕಾರಣ.
ಪುಟಾಣಿಗಳ ಸಂಭ್ರಮ
ರಾಖಿ ಹಬ್ಬದಲ್ಲಿ ಖುಷಿಯಿಂದ ಪಾಲ್ಗೊಂಡಿದ್ದ ದರ್ಶನಾ ಬಾಫ್ನಾ-ಗೌರವ್ ಬಾಫ್ನಾ.
ಮೂರು ತಲೆಮಾರು
ರಾಖಿ ಹಬ್ಬದಲ್ಲಿ ಪಾಲ್ಗೊಂಡಿದ್ದ ಒಂದೇ ಕುಟುಂಬಕ್ಕೆ ಸೇರಿದ ಮೂರು ತಲೆಮಾರಿನವರ ಸಂಭ್ರಮ.