Get Updates
Get notified of breaking news, exclusive insights, and must-see stories!

ಅನಂತಕುಮಾರ್‌ ದಾರಿ ನಮಗೆಲ್ಲ ಆದರ್ಶನೀಯ: ಆರ್‌ ಅಶೋಕ್‌

ಬೆಂಗಳೂರು ನ 13: ದಿವಂಗತ ಅನಂತಕುಮಾರ್‌ ಅವರು ರಾಷ್ಟ್ರ ಹಾಗೂ ರಾಜ್ಯದ ಅಭಿವೃದ್ದಿಗೆ ಅನುಸಸರಿಸಿದ ದಾರಿ ನಮಗೆಲ್ಲ ಆದರ್ಶನೀಯ ಎಂದು ಕಂದಾಯ ಸಚಿವರಾದ ಆರ್‌ ಅಶೋಕ್‌ ಹೇಳಿದರು.

ದಿವಂಗತ ಅನಂತಕುಮಾರ್‌ 2 ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಲಾಲ್‌ಬಾಗ್‌ ಬಳಿಯ ಅನಂತ ಸ್ಮೃತಿ ವನದಿಂದ ಆಯೋಜಿಸಲಾಗಿದ್ದ ಅನಂತ ಸೃತಿ ನಡಿಗೆ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

R Ashoka remembers Ananthkumars Death Anniversary event

ಬೆಂಗಳೂರನ್ನು ಇನ್ನಷ್ಟು ಸುಂದರಗೊಳಿಸಲು ಹಲವಾರು ಕನಸುಗಳನ್ನು ಹೊತ್ತಿದ್ದ ಅನಂತಕುಮಾರ್‌ ನಡೆದ ದಾರಿ ನಮಗೆ ದಾರಿ ದೀಪವಾಗಿದೆ. ಅವರು ಹಾಕಿಕೊಟ್ಟ ಅಭಿವೃದ್ದಿಯ ಮಾರ್ಗದಲ್ಲಿ ನಡೆಯುವ ಮೂಲಕ ಬೆಂಗಳೂರನ್ನ ಇನ್ನಷ್ಟು ಸುಂದರಗೊಳಿಸೋಣ. ಅದಮ್ಯ ಚೇತನ ಸಂಸ್ಥೆಯ ಮೂಲಕ ಕೋಟ್ಯಾಂತರ ಜನರ ಹಸಿವನ್ನು ನೀಗಿಸುವ ಕಾರ್ಯವನ್ನು ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಅವರು ಮಾಡುತ್ತಿದ್ದಾರೆ. ದಿವಂಗತ ಅನಂತಕುಮಾರ್‌ ಅವರ ಆಶಯವನ್ನು ಸರಿಯಾದ ದಾರಿಯಲ್ಲಿ ನಡೆಸುವಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

R Ashoka remembers Ananthkumars Death Anniversary event

ಅನಂತ ಸ್ಮೃತಿ ನಡಿಗೆ ಅಂಗವಾಗಿ ಪಂಜಿನ ಮೆರವಣಿಗೆಯಲ್ಲಿ ಸಾಗಿದ ಅಭಿಮಾನಿಗಳು ಪ್ರಮುಖರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡುತ್ತಾ ಸಾಗಿದರು. ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್‌, ಶಾಸಕ ಉದಯ ಗರುಡಚಾರ್, ರವಿ ಸುಬ್ರಮಣ್ಯ ಹಾಗು ಪಾಲಿಕೆಯ ಮಾಜಿ ಸದಸ್ಯರುಗಳು ಭಾಗವಹಿಸಿದ್ದರು. ಲಾಲ್ ಬಾಗ್ ವೆಸ್ಟ್ ಗೇಟ್ ಎದುರು ಇರುವ ಅನಂತ ಸ್ಮೃತಿ ವನದಿಂದ ಪ್ರಾರಂಭಿಸಿ ಅದಮ್ಯಚೇತನದವರೆಗೆ ಪಂಜಿನ ಮೆರವಣಿಗೆಯನ್ನು ನಡೆಸಲಾಯಿತು.

Recommended Video

      ರವಿ ಬೆಳಗೆರೆ ಮಾಡಿದ ಸಹಾಯವನ್ನು ನೆನಪಿಸಿಕೊಂಡ R ಅಶೋಕ್ | Oneindia Kannada
      R Ashoka remembers Ananthkumars Death Anniversary event
      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+