ಮನೆ ಬಾಡಿಗೆ ಪಡೆಯಲು ವ್ಯಾಪಾರದ ನೆಪ: ಅಲ್ಲಿ ನಡೆಯುತ್ತಿದ್ದಿದ್ದೇ ಬೇರೆ

ಬೆಂಗಳೂರು, ನವೆಂಬರ್ 19: ವ್ಯಾಪಾರದ ನೆಪವೊಡ್ಡಿ ಮನೆಯನ್ನು ಬಾಡಿಗೆ ಪಡೆಯುತ್ತಿದ್ದ ಮುಂಬೈ ಮೂಲದ ಖದೀಮರು ಮಾನವ ಕಳ್ಳಸಾಗಣೆ ಮಾಡುತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಚಿಕ್ಕಜಾಲದಲ್ಲಿ ತರಕಾರಿ ವ್ಯಾಪಾರಕ್ಕೆಂದು ಮನೆ ಪಡೆದು ಬಾಂಗ್ಲಾ ಪ್ರಜೆಗಳನ್ನು ಅಕ್ರಮವಾಗಿಟ್ಟಿದ್ದರು ಎಂಬುದು ಪೊಲೀಸ್ ತನಿಖೆ ವೇಳೆ ಬಹಿರಂಗಗೊಂಡಿದೆ. ಬಂಧಿತ ಬೆಂಗಳೂರು ಮೂಲದ ಅಶ್ವಕ್ ಅಲಿಯಾಸ್ ಚಾನ್ ಖಾನ್ ಚಿಕ್ಕಜಾಲದ ಕೋಳಿಪುರದಲ್ಲಿರುವ ನಿರ್ಜನ ಪ್ರದೇಶವೊಂದರಲ್ಲಿ ಈ ಮನೆಯನ್ನು ಕೆಲವು ತಿಂಗಳ ಹಿಂದೆ ಬಾಡಿಗೆಗೆ ಪಡೆದುಕೊಂಡಿದ್ದ, ಆ ವೇಳೆ ವ್ಯಾಪಾರಕ್ಕೆಂದು ಮಾಲಿಕರ ಬಳಿ ಸುಳ್ಳು ಹೇಳಿದ್ದ.

ಆದರೆ ಮನೆಯನ್ನು ಬಾಂಗ್ಲಾ ಪ್ರಜೆಗಳನ್ನು ಅಕ್ರಮವಾಗಿ ಕೂಡಿಡಲು ಬಳಸಿಕೊಂಡಿದ್ದ, ರಾಮನಗರದಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ತಮ್ಮ ಸ್ಥಳವನ್ನು ಬೆಂಗಳೂರಿನ ಹೊರವಲಯಕ್ಕೆ ಸ್ಥಳಾಂತರ ಮಾಡಿದ್ದರು.

Police busts gand involved in human trafficking

ಇನ್ನು ಕೋಳಿಪುರದಲ್ಲಿ ರಕ್ಷಿಸಲಾಗಿರುವ ಬಾಂಗ್ಲಾ ದೇಶದ ಸರ್ದಾರ್ ಹುಸೇನ್, ಸುನಂಮುಂಚಿ, ಮೊಹಮ್ಮದ್ ಮುಷ್ರಫ್, ಶಕೀಲ್ ಬಳಿ ಆರೋಪಿಗಳು ಸುಮಾರು 26ಲಕ್ಷವನ್ನು ತಮ್ಮ ಖಾತೆಗೆ ದಂಧೆಕೋರರು ಜಮಾ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಯಲಹಂಕ ಮತ್ತು ಚಿಕ್ಕಜಾಲ ಠಾಣೆ ಪೊಲೀಸರ ರಕ್ಷಣೆಯಲ್ಲಿ ಬಾಂಗ್ಲಾ ದೇಶದ ಯುವಕರಿದ್ದು, ಈಗಾಗಲೇ ಯುವಕರ ಪೋಷಕರು ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+