ಮಾಜಿ ಜೇಮ್ಸ್ ಬಾಂಡ್ 'ಪಾನ್ ' ತಿಂದು ಕಾಮಿಡಿ ಸ್ಟಾರ್ ಆಗ್ಬಿಟ್ಟ
ಹಾಲಿವುಡ್ ನ ಸ್ಟಾರ್, ಮಾಜಿ ಜೇಮ್ಸ್ ಬಾಂಡ್ ಪಿಯರ್ಸ್ ಬ್ರೋಸ್ನನ್ ಗರಂ ಆಗಿದ್ದಾರೆ.ಕ್ಯಾನ್ಸರ್ ಕಾರಕ ಉತ್ಪನ್ನದ ಬಗ್ಗೆ ಪ್ರಚಾರಕ್ಕೆ ಬಳಸಿಕೊಂಡಿದ್ದಕ್ಕೆ ಕಂಪನಿ ವಿರುದ್ಧ ಕಿಡಿಕಾರಿದ್ದಾರೆ.
ಲಾಸ್ ಏಂಜಲೀಸ್, ಅಕ್ಟೋಬರ್ 21: ಹಾಲಿವುಡ್ ನ ಸ್ಟಾರ್, ಮಾಜಿ ಜೇಮ್ಸ್ ಬಾಂಡ್ ಪಿಯರ್ಸ್ ಬ್ರೋಸ್ನನ್ ಗರಂ ಆಗಿದ್ದಾರೆ. ಪಾನ್ ಮಸಾಲ ಪರ ಪ್ರಚಾರ ನಡೆಸಿ ರಾಯಭಾರಿ ಎನಿಸಿಕೊಂಡಿದ್ದ ಮಾಜಿ ಜೇಮ್ಸ್ ಬಾಂಡ್ ಅವರು ಪಾನ್ ಬಹಾರ್ ವಿರುದ್ಧ ಕಿಡಿಕಾರಿದ್ದಾರೆ.
ಪಾನ್ ಬಹಾರ್ ಜಾಹೀರಾತು ನೋಡುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ನಗೆ ಪಟಾಲಿಗೆ ಈಡಾಗಿದ್ದು ಹಳೆ ಸಂಗತಿ. ಈಗ ಕ್ಯಾನ್ಸರ್ ಕಾರಕ ಉತ್ಪನ್ನದ ಬಗ್ಗೆ ಪ್ರಚಾರಕ್ಕೆ ಬಳಸಿಕೊಂಡಿದ್ದಕ್ಕೆ ಕಂಪನಿ ವಿರುದ್ಧ ನಟ ಪಿಯರ್ಸ್ ಬ್ರೋಸ್ನನ್ ಕೋಪ ವ್ಯಕ್ತಪಡಿಸಿದ್ದಾರೆ.

ಇದಕ್ಕಿಂತ ಹೆಚ್ಚಾಗಿ, ಪಾನ್ಬಾಹರ್ ಗುತ್ತಿಗೆ ನಿಯಮ ಉಲ್ಲಂಘಿಸಿ, ತಂಬಾಕು ಮಿಶ್ರಿತ ಮೌತ್ ಫ್ರೆಶ್ನರ್ ಸೇರಿದಂತೆ ಎಲ್ಲ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯನ್ನಾಗಿ ತನ್ನನ್ನು ಬಳಸಿಕೊಂಡಿರುವುದು ಪಿಯರ್ಸ್ ಬ್ರೋಸ್ನನ್ ಗೆ ಕೋಪ ತಂದಿದೆ. ಈಗ ಪಾನ್ ಬಾಹರ್ ಕಂಪೆನಿ ವಿರುದ್ಧ ಕಿಡಿಕಾರಿದ್ದಾರೆ.
ಭಾರತದ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ, ಅಲ್ಲಿನ ಜನರಿಗೆ ಮಾರಕವಾಗುವ ಇಂಥ ಉತ್ಪನ್ನಗಳ ಪರ ನಾನು ಪ್ರಚಾರಕನಾಗಿ ಕಾಣಿಸಿಕೊಂಡಿರುವುದು ಅಪರಾಧವಾಗಿದೆ. ಇದಕ್ಕಾಗಿ ಹೃದಯಪೂರ್ವಕ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.
#PierceBrosnan #panbahar Name is Bond. James 'Pichaaaaaak' Bond! :P
— SidDirector (@siddarthb6) October 10, 2016
ಭಾರತದಲ್ಲಿ ತಂಬಾಕು ಉತ್ಪನ್ನಗಳು "ಕ್ಯಾನ್ಸರ್ಗೆ ಕಾರಣವಾಗುತ್ತದೆ" ಎಂದ ಎಚ್ಚರಿಕೆಯೊಂದಿಗೆ ಮಾರಾಟವಾಗುತ್ತವೆ.
Look what we just found in 007's car! #PanBahar #PierceBrosnan pic.twitter.com/NsXBH8GvSO
— CARS24 (@cars24india) October 10, 2016
'ನನ್ನ ಮೊದಲ ಪತ್ನಿ, ಮಗಳು ಹಾಗೂ ಅಸಂಖ್ಯಾತ ಸ್ನೇಹಿತರು ಕ್ಯಾನ್ಸರ್ಗೆ ಬಲಿಯಾಗಿದ್ದಾರೆ. ಮಹಿಳೆಯರ ಆರೋಗ್ಯ ಸುರಕ್ಷೆಗೆ ನಾನು ಬದ್ಧ. ಮಾನವ ಆರೋಗ್ಯ ಸುಧಾರಿಸುವ ಉದ್ದೇಶದ ಸಂಶೋಧನಾ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲವಿದೆ" ಎಂದು ಸ್ಪಷ್ಟನೆ ನೀಡಿದ್ದಾರೆ.
Waiting to see #PierceBrosnan featuring in a Bhojpuri movie now😂 #PanBahar
— Your Crush (@MeinTeraHero) October 10, 2016
ಪಾನ್ ಬಾಹರ್ ಅವರು ಸಂಪೂರ್ಣ ನೈಸರ್ಗಿಕ, ತಂಬಾಕು, ಅಡಿಕೆ ಹಾಗೂ ಯಾವುದೇ ಹಾನಿಕಾರಕ ಅಂಶಗಳಿಲ್ಲದ ಉತ್ಪನ್ನಕ್ಕೆ ಪ್ರಚಾರ ರಾಯಭಾರಿಯಾಗಿ ನೇಮಿಸಿಕೊಂಡಿದ್ದಾರೆ. ಆದ್ದರಿಂದ ತಕ್ಷಣವೇ ಕಂಪೆನಿಯ ಜಾಹೀರಾತುಗಳಿಂದ ತಮ್ಮನ್ನು ತೆಗೆದುಹಾಕಬೇಕು ಎಂದು 63ವರ್ಷ ವಯಸ್ಸಿನ ನಟ ಕೋರಿದ್ದಾರೆ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications