Get Updates
Get notified of breaking news, exclusive insights, and must-see stories!

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ: ಜನಪ್ರಿಯ ಹೋಟೆಲ್‌ಗಳಿಗೆ ತೊಂದರೆ

ಬೆಂಗಳೂರು, ಆಗಸ್ಟ್ 26: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಏಕಮುಖ ಸಂಚಾರ ಆರಂಭವಾಗಿದೆ. ಕಳೆದ ಮೂರು ದಿನಗಳಿಂದ ಹೆದ್ದಾರಿಯಲ್ಲಿ ಬಸವನಪುರ (ರಾಮನಗರ ಸಮೀಪ)ದಿಂದ ಹೆಜ್ಜಾಲದವರೆಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಡೆಲಿವರಿ ಕೆಲಸಗಳಲ್ಲಿ ದೈನಂದಿನ ಕನಿಷ್ಠ ಗ್ಯಾರಂಟಿ ಮತ್ತು ವಾರದ ಪ್ರೋತ್ಸಾಹ ಧನನೊಂದಿಗೆ 30,000 ವರೆಗೆ ಗಳಿಸಿ.

ಆಗಸ್ಟ್ 15 ರಿಂದ ಸಂಚಾರಕ್ಕೆ ಅವಕಾಶ ನೀಡಬೇಕಾಗಿತ್ತು, ಆದರೆ ನಡೆಯುತ್ತಿರುವ ಕಾಮಗಾರಿಯಿಂದಾಗಿ ಪರೀಕ್ಷಾ ದಿನಾಂಕ ವಿಳಂಬವಾಗಿದೆ. ಮತ್ತೊಂದೆಡೆ ಆಗಸ್ಟ್ ಅಂತ್ಯದ ವೇಳೆಗೆ ಹೆಜ್ಜಾಲದಿಂದ ರಾಮನಗರ ಕಡೆಗೆ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಫೇಸ್‌ಬುಕ್‌ನಲ್ಲಿ ಮಾಹಿತಿ ಕೂಡ ನೀಡಿದ್ದರು. ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಯದೇ ಇರುವುದರಿಂದ ಸಂಚಾರಕ್ಕೆ ಅನುವು ಮಾಡಿಕೊಡಲು ವಿಳಂಬವಾಗುತ್ತಿದೆ ಎಂದು ಹೇಳಿದ್ದರು.

ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಸಂಚಾರಕ್ಕೆ ಮುಕ್ತವಾಗಿರುವುದಕ್ಕೆ ವಾಹನ ಸವಾರರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ರಸ್ತೆಯ ಬದಿಗಳಲ್ಲಿ ಇರುವ ಹೋಟೆಲ್ ಮಾಲೀಕರು ತಮ್ಮ ವ್ಯಾಪಾರಕ್ಕೆ ಧಕ್ಕೆಯಾಗಿರುವುದರಿಂದ ಅಸಮಾಧಾನಗೊಂಡಿದ್ದಾರೆ.

ಬೆಂಗಳೂರು-ಮೈಸೂರು ರಸ್ತೆಯು ಆಹಾರ ಪ್ರಿಯರಿಗೆ ಸ್ವರ್ಗವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಹಲವಾರು ಜನಪ್ರಿಯ ಫುಡ್ ಜಾಯಿಂಟ್‌ಗಳು ಆಹಾರಕ್ಕೆ ಸಾಕಷ್ಟು ಜನಪ್ರಿಯವಾಗಿವೆ, ಬೆಂಗಳೂರು-ಮೈಸೂರು ಪ್ರಯಾಣಿಕರೇ ಈ ಹೋಟೆಲ್‌ಗಳ ಪ್ರಮುಖ ಗ್ರಾಹಕರಾಗಿದ್ದರು.

 ಹೋಟೆಲ್ ಉದ್ಯಮದ ಮೇಲೆ ಪರಿಣಾಮ

ಹೋಟೆಲ್ ಉದ್ಯಮದ ಮೇಲೆ ಪರಿಣಾಮ

ಹೋಟೆಲ್‌ಗಳು ಬಿಡದಿಯಿಂದ ಪ್ರಾರಂಭವಾಗುತ್ತವೆ. ಬಿಡದಿಯ ತಟ್ಟೆ ಇಡ್ಲಿ ಭಾರಿ ಪ್ರಸಿದ್ಧವಾದ ಸಾಂಪ್ರದಾಯಿಕ ಆಹಾರ. ಅದರಲ್ಲೂ ಬೆಂಗಳೂರು-ಮೈಸೂರು ಭಾಗದ ಪ್ರಯಾಣಿಕರಿಗೆ ಪ್ರಯಾಣದ ನಡುವೆ ಈ ಹೋಟೆಲ್‌ಗಳು ನೆಚ್ಚಿನ ತಾಣವಾಗಿದ್ದವು. ಬಿಡದಿ ತಟ್ಟೆ ಇಡ್ಲಿ, ಮದ್ದೂರು ವಡೆ ನೆಚ್ಚಿನ ಖಾದ್ಯವಾಗಿದ್ದವು.

ಆದರೆ, ಆರು-ಪಥದ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆಗೆ ಸಾಗಲು ಸೀಮಿತ ಅವಕಾಶ ಮಾತ್ರ ಇರುತ್ತದೆ. ಜೊತೆಗೆ ಪ್ರಯಾಣದ ಸಮಯವನ್ನು 75 ನಿಮಿಷಗಳಿಗೆ ಕಡಿತಗೊಳಿಸುವ ನಿರೀಕ್ಷೆಯಿದೆ. ವಾಹನ ಬಳಕೆದಾರರಿಗೆ ಹೋಟೆಲ್ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ.

 ಕಡಿಮೆಯಾಗಿದೆ ವ್ಯಾಪಾರ

ಕಡಿಮೆಯಾಗಿದೆ ವ್ಯಾಪಾರ

ಬಿಡದಿಯ ತಟ್ಟೆ ಇಡ್ಲಿ ಹೊಟೇಲ್‌ಗಳು ಕಳೆದ ಕೆಲವು ದಿನಗಳಿಂದ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದು, ಬಹುತೇಕ ಗ್ರಾಹಕರು ಬಿಡದಿ ಪೇಟೆಗೆ ಪ್ರವೇಶಿಸದೆ ಹೆದ್ದಾರಿಯಲ್ಲೇ ಹೋಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಮೊದಲ ಹಂತದ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಮೊದಲ ಹಂತದ ಕಾಮಗಾರಿಯು ನೈಸ್ ರಸ್ತೆ ಜಂಕ್ಷನ್‌ನಿಂದ (ಕೆಂಗೇರಿ ಬಳಿ) ನಿಡಘಟ್ಟದವರೆಗೆ ಆರು ಲೇನ್‌ಗಳನ್ನು ಮಾಡುತ್ತದೆ. ಈ ವಿಸ್ತರಣೆಯು ಬಹುತೇಕ ಪೂರ್ಣಗೊಂಡಿದೆ ಮತ್ತು ಶೀಘ್ರದಲ್ಲೇ ತೆರೆಯುವ ಸಾಧ್ಯತೆಯಿದೆ.j

 ಎರಡನೇ ಹಂತದ ಕಾಮಗಾರಿ ಇನ್ನೂ ಮುಗಿದಿಲ್ಲ

ಎರಡನೇ ಹಂತದ ಕಾಮಗಾರಿ ಇನ್ನೂ ಮುಗಿದಿಲ್ಲ

ನಿಡಘಟ್ಟದಿಂದ ಮೈಸೂರು ವರ್ತುಲ ರಸ್ತೆವರೆಗಿನ ಎರಡನೇ ಹಂತದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದನ್ನು ಸೆಪ್ಟೆಂಬರ್‌ ವೇಳೆಗೆ ಪೂರ್ಣಗೊಳಿಸುವ ಯೋಜನೆ ಇತ್ತಾದರೂ, ಈಗ ಅದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.

ಈ ವರ್ಷ ದಸರಾ ವೇಳೆಗೆ ಮುಖ್ಯರಸ್ತೆಯ ಕಾಮಗಾರಿ ಪೂರ್ಣಗೊಳ್ಳಲಿದ್ದು, ಮುಂದಿನ ವರ್ಷದ ಫೆಬ್ರವರಿಯೊಳಗೆ ಸರ್ವಿಸ್ ರಸ್ತೆಗಳು ಮತ್ತು ಇತರ ಬೈಪಾಸ್‌ಗಳನ್ನು ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.

 ಕುಂಬಳಗೋಡು ಬಳಿ ಶೀಘ್ರದಲ್ಲೇ ಟೋಲ್ ಸಂಗ್ರಹ ಆರಂಭ

ಕುಂಬಳಗೋಡು ಬಳಿ ಶೀಘ್ರದಲ್ಲೇ ಟೋಲ್ ಸಂಗ್ರಹ ಆರಂಭ

ಮೊದಲ ಹಂತದ ವೆಚ್ಚ 3,501 ಕೋಟಿ ರುಪಾಯಿ ಮತ್ತು ಎರಡನೇ ಹಂತದಲ್ಲಿ 2,920 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ. ಯೋಜನೆಯು ಹೆದ್ದಾರಿಯುದ್ದಕ್ಕೂ ಪಟ್ಟಣಗಳಲ್ಲಿ ಸಂಚಾರ ದಟ್ಟಣೆಯನ್ನು ತಪ್ಪಿಸಲು ಐದು ಬೈಪಾಸ್‌ಗಳನ್ನು ಹೊಂದಿರುತ್ತದೆ.

ಬಿಡದಿ ಬೈಪಾಸ್ 6.9 ಕಿ.ಮೀ ಉದ್ದ, ರಾಮನಗರ-ಚನ್ನಪಟ್ಟಣ 22.35 ಕಿ.ಮೀ, ಮದ್ದೂರು 4.5 ಕಿ.ಮೀ, ಮಂಡ್ಯ 10 ಕಿ.ಮೀ ಮತ್ತು ಶ್ರೀರಂಗಪಟ್ಟಣ 8 ಕಿ.ಮೀ. ಇದಲ್ಲದೆ, ಎಂಟು ಕಿಮೀ ಉದ್ದದ ಕಾರಿಡಾರ್ ಜೊತೆಗೆ ಒಂಬತ್ತು ಪ್ರಮುಖ ಸೇತುವೆಗಳು, 44 ಸಣ್ಣ ಸೇತುವೆಗಳು ಮತ್ತು ನಾಲ್ಕು ರೈಲ್ವೆ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ.

ರಾಮನಗರದ ಬೈ-ಪಾಸ್ ರಸ್ತೆಯಲ್ಲಿ ಸೌಕರ್ಯಗಳೊಂದಿಗೆ ಹೊಸ ಲೇ-ಬೈ ಅನ್ನು ರಚಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೇಳಿದೆ. ಕುಂಬಳಗೋಡು ಮತ್ತು ಶ್ರೀರಂಗಪಟ್ಟಣದಲ್ಲಿ ಟೋಲ್ ಬೂತ್‌ಗಳು ಬರಲಿವೆ. ಮೊದಲ ಹಂತದ ರಸ್ತೆ ಕಾಮಗಾರಿ ಪೂರ್ಣಗೊಂಡು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟ ನಂತರ ಕುಂಬಳಗೋಡು ನಗರದಲ್ಲಿ ಟೋಲ್ ಸಂಗ್ರಹಿಸಲು ಉದ್ದೇಶಿಸಲಾಗಿದೆ.

ಸಂಪೂರ್ಣ ರಸ್ತೆ ಪೂರ್ಣಗೊಂಡ ನಂತರ ಶ್ರೀರಂಗಪಟ್ಟಣದಲ್ಲಿ ಎರಡನೇ ಟೋಲ್ ಕಾರ್ಯನಿರ್ವಹಿಸಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+