ಉತ್ತರ ಕರ್ನಾಟಕದ ಊಟ-ತಿಂಡಿಗೆ ಕತ್ರಿಗುಪ್ಪೆಯ 'ಗಮಗಮ' ಹೋಟೆಲ್
ಬೆಂಗಳೂರು, ಸೆಪ್ಟೆಂಬರ್ 9: 'ಗಮ ಗಮ' - ಇದು ಆ ಹೋಟೆಲ್ ನ ಹೆಸರು. ಉತ್ತರ ಕರ್ನಾಟಕದ ರೊಟ್ಟಿ ಊಟ ಮಾಡಬೇಕು ಅಂದುಕೊಂಡರೆ ಖಂಡಿತಾ ಈ ಹೋಟೆಲ್ ನಲ್ಲಿ ಪ್ರಯತ್ನಿಸಬಹುದು. ಕತ್ರಿಗುಪ್ಪೆಯ ಡಾಮಿನೋಸ್ ಪಿಜ್ಜಾದ ಪಕ್ಕದಲ್ಲೇ ಈ 'ಗಮ ಗಮ' ಇರೋದು. ಇಲ್ಲಿ ಊಟವಷ್ಟೆ ಅಲ್ಲ, ನಾಷ್ಟಾ ಕೂಡ ಸಿಗುತ್ತದೆ.
ಇದರ ಜತೆಗೆ ಸಂಜೆ ಹೊತ್ತಿನಲ್ಲಿ ಬಜ್ಜಿ, ಗಿರ್ಮಿಟ್, ಸಾಬೂದಾನ ವಡಾ, ಚೂಡಾ ಅವಲಕ್ಕಿ, ಕಾಫಿ-ಟೀ, ಹಣ್ಣಿನ ರಸ ಕೂಡ ಸಿಗುತ್ತದೆ. ಮಧ್ಯಾಹ್ನ ಹಾಗೂ ರಾತ್ರಿ ಊಟವಂತೂ ಸಿಕ್ಕೇ ಸಿಗುತ್ತದೆ. ಎರಡು ಬಗೆಯಲ್ಲಿ ಉತ್ತರ ಕರ್ನಾಟಕದ ಶೈಲಿ ಊಟ ಸಿಗುತ್ತದೆ. ವಿಶೇಷ ಅಡುಗೆ ಅಂದರೆ ಬೆಲೆ ಸ್ವಲ್ಪ ಹೆಚ್ಚು.

ಈ ಊಟದಲ್ಲಿ ಜೋಳದ ರೊಟ್ಟಿ, ಪಲ್ಯ, ಎಣ್ಣೆಗಾಯಿ. ಅನ್ನ-ಸಾಂಬಾರು, ರಸಂ, ಮೊಸರಿನ ಜತೆಗೆ ಹೋಳಿಗೆ ಹಾಗೂ ಮಿರ್ಚಿ ಬಜ್ಜಿ ಹೆಚ್ಚುವರಿಯಾಗಿ ಕೊಡ್ತಾರೆ. ಸಾಮಾನ್ಯ ಊಟ ಅಂದರೆ ಅದರಲ್ಲಿ ಹೋಳಿಗೆ-ಮಿರ್ಚಿ ಬಜ್ಜಿ ಇರೋದಿಲ್ಲ.
ಉತ್ತರ ಕರ್ನಾಟಕದ ಅಡುಗೆ ಖಾರವೇನೋ ಅಂತ ಗಾಬರಿ ಆಗಬೇಡಿ. ಏಕೆಂದರೆ ತೀರಾ ಖಾರ ಏನಿಲ್ಲ. ಹೋಳಿಗೆ ಬಿಸಿಬಿಸಿಯಾಗಿ ಮಾಡಿದ್ದರು. ಅದಕ್ಕೆ ತುಪ್ಪ ಹಾಕಿಸಿಕೊಂಡು ತಿಂದ ರುಚಿ ಅದ್ಭುತವಾಗಿತ್ತು. ಇನ್ನು ಹೋಟೆಲ್ ಕೂಡ ಸ್ವಚ್ಛವಾಗಿದೆ. ಅಲ್ಲೇ ಕೂತು ನೆಮ್ಮದಿಯಾಗಿ ತಿಂಡಿ-ಊಟ ಮಾಡಬಹುದು.
ಇದೇ ಜಾಗದಲ್ಲೇ ಖಡಕ್ ರೊಟ್ಟಿ ಕೂಡ ಸಿಗುತ್ತದೆ. ಬೆಳಗ್ಗೆ 8ರಿಂದ ರಾತ್ರಿ 10.30ರವರೆಗೆ, ವಾರದ ಎಲ್ಲ ದಿನವೂ ಹೋಟೆಲ್ ತೆರೆದಿರುತ್ತದೆ. ಉತ್ತರ ಕರ್ನಾಟಕದ ಇತರ ಆಹಾರ ಪದಾರ್ಥಗಳು-ಐಸ್ ಕ್ರೀಮ್..ಎಲ್ಲ ಒಂದೇ ಕಡೆ ಸಿಗುವುದರಿಂದ ಈ ಹೋಟೆಲ್ ಗೆ ನೀವೊಮ್ಮೆ ಭೇಟಿ ಕೊಡಬಹುದು. ಆ ನಂತರ ನಿಮಗೆ ಏನನ್ನಿಸಿತು ಅಂತಲೂ ತಿಳಿಸಿ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications