'ಮಠಗಳ ಆಡಳಿತದಲ್ಲಿ ರಾಜ್ಯ ಸರ್ಕಾರ ಮೂಗು ತೂರಿಸಲ್ಲ'
ಬೆಂಗಳೂರು, ಡಿ.23: ಉತ್ತರಾಧಿಕಾರಿ ನೇಮಕ ವಿವಾದ, ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ಮಠಗಳನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಸರ್ಕಾರ ಯತ್ನಿಸುತ್ತಿದೆ ಎಂಬ ವರದಿಯನ್ನು ಸಿಎಂ ಸಿದ್ದರಾಮಯ್ಯ ಅಲ್ಲಗೆಳೆದಿದ್ದಾರೆ.
ಸೂಕ್ತ ನಿರ್ವಹಣೆ ಇಲ್ಲದ ಮಠ, ವಿವಾದಕ್ಕೆ ಸಿಲುಕಿರುವ ಮಠ, ಧಾಮಿಕ ಸಂಸ್ಥೆಗಳು ಹಾಗೂ ದೇಗುಲಗಳ ಸ್ವಾಧೀನಕ್ಕಾಗಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ-2014ನ್ನು ರಾಜ್ಯಸರ್ಕಾರ ಬೆಳಗಾವಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಮಂಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.[ಮಠಗಳ ಮೇಲೆ ಹಿಡಿತಕ್ಕೆ ಸಜ್ಜಾದ ಸರ್ಕಾರ]
ಸುಪ್ರೀಂಕೋರ್ಟ್
ನಿರ್ದೇಶನದಂತೆ
ಕರ್ನಾಟಕ
ಹಿಂದೂ
ಧಾರ್ಮಿಕ
ಮತ್ತು
ಧರ್ಮದಾಯ
ಕಾಯ್ದೆಗೆ
ತಿದ್ದುಪಡಿ
ತರಲಾಗಿದೆ.
ಆದರೆ,
ಇದರಿಂದ
ಮಠಗಳ
ಆಡಳಿತದಲ್ಲಿ
ರಾಜ್ಯ
ಸರ್ಕಾರ
ಮೂಗು
ತೂರಿಸಲಿದೆ
ಎಂಬ
ಆಂತಕ
ಬೇಡ
ಎಂದು
ಸಿದ್ದರಾಮಯ್ಯ
ಭರವಸೆ
ನೀಡಿದ್ದಾರೆ.
ಮಸೂದೆ ಬಗ್ಗೆ ಚರ್ಚೆಯಾಗಲಿ: ಮಸೂದೆ ತಿದ್ದುಪಡಿ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗಬೇಕು. ಎಲ್ಲಾ ಮಠಾಧೀಶರಲ್ಲಿ ಮನವಿ ಮಾಡುತ್ತೇನೆ. ಅನಗತ್ಯವಾಗಿ ಗೊಂದಲ ಮತ್ತು ಆತಂಕ ಬೇಡ ಎಂದು ಸ್ಪಷ್ಟಪಡಿಸಿದರು.ಬಿಜೆಪಿ ಸಾಧ್ಯವಾದ ಕಡೆಗಳೆಲ್ಲಾ ಕಿತಾಪತಿ ಹುಡುಕಿ ಮೂಗು ತೂರಿಸುವುದು ಅದರ ಚಾಳಿ ಎಂದು ತರಾಟೆಗೆ ತೆಗೆದುಕೊಂಡರು.
ಹೈಕಮಾಂಡ್ ಗೆ ದೂರು?: ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿರುವ ಧಾರ್ಮಿಕ ದತ್ತಿ ಕಾಯ್ದೆ ವಿರೋಧಿಸಿ ಮಠಾಧೀಶರು ಸಿಎಂ ವಿರುದ್ಧ ಹೈಕಮಾಂಡ್ಗೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ದೂರು ನೀಡಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸಮಯಾವಕಾಶ ಕೇಳಿದ್ದಾರಂತೆ. [ಮಠಾಧೀಶರಿಂದ ಹೋರಾಟ]
ಈ ಧಾರ್ಮಿಕ ದತ್ತಿ, ಧರ್ಮಾದಾಯ ಮಸೂದೆ ಮಠಗಳ ಸ್ವಾಯತ್ತತೆಗೆ ಧಕ್ಕೆ ತರುವುದಿಲ್ಲ. ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ತಂದಂತಹ ಮಸೂದೆ ನಿವೃತ್ತ ನ್ಯಾಯಮೂರ್ತಿ ಡಿ.ರಾಮಾ ಜೋಯಿಸ್ ಅವರು ನೀಡಿದ ವರದಿ ಅನ್ವಯ ಸುಪ್ರೀಂಕೋರ್ಟ್ಗೆ ನೀಡಿರುವ ನೋಟಿಸ್ ಹಿನ್ನೆಲೆಯಲ್ಲಿ ಉತ್ತರ ನೀಡಬೇಕಾಗಿರುವ ಕಾರಣ ಸದನದಲ್ಲಿ ಬಿಲ್ ಮಂಡಿಸಲಾಗಿದೆಯೇ ಹೊರತು ಮಠಗಳ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದಲ್ಲ ಎಂದು ಸಿಎಂ ಅವರು ಕಾನೂನು ಸಚಿವ ಟಿ.ಬಿ.ಜಯಚಂದ್ರ ಸ್ಪಷ್ಟನೆ ನೀಡಿದ್ದರು.