ಮಾಲ್ಗಳಲ್ಲಿದ್ದ ಹಣ್ಣು-ಹಂಪಲು, ತರಕಾರಿ ಖಾಲಿ, ನಾಳೆ ಬಗ್ಗೆ ಗೊತ್ತಿಲ್ಲ!
ಬೆಂಗಳೂರು, ಮಾರ್ಚ್ 23: ಕೊರೊನಾ ವೈರಸ್ ಜನರ ದೈನಂದಿನ ಬದುಕನ್ನು ನುಂಗಿ ಹಾಕಿದೆ. ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ದಿನಗೂಲಿ ಕಾರ್ಮಿಕರ ಪರಿಸ್ಥಿತಿ ಕೇಳುವುದೇ ಬೇಡ. ಬೀದಿ ವ್ಯಾಪಾರಿಗಳು, ತಳ್ಳುವ ಗಾಡಿಯಲ್ಲಿ ತರಕಾರಿ, ಹಣ್ಣ ಹಂಪಲು ಮಾರುತ್ತಿದ್ದವರು ಮನೆಯಲ್ಲೆ ಕುಳಿತು ಯೋಚನೆ ಮಾಡುವಂತಾಗಿದೆ. ಈ ಕಡೆ ಮಾಲ್ಗಳನ್ನು ನಂಬಿ ಕೂತಿದ್ದ ಜನರಿಗೂ ಈಗ ಆತಂಕ ಕಾಡುತ್ತಿದೆ.
ಅಗತ್ಯ ವಸ್ತುಗಳನ್ನು ಪೂರೈಸುವ ಉದ್ದೇಶದಿಂದ ಕೆಲವು ಮಾಲ್ಗಳು ತೆರೆದಿರುವುದು ಬಿಟ್ಟರೆ ಉಳಿದ ಎಲ್ಲ ಮಾಲ್ಗಳು ಬಹುತೇಕ ಮುಚ್ಚಿದೆ. ಅದರಲ್ಲೂ ಡಿ-ಮಾರ್ಟ್, ಮೋರ್ ಅಂತಹ ಮಾಲ್ಗಳ ಮೇಲೆ ಹೆಚ್ಚಿನ ಜನರು ಅವಲಂಬಿತರಾಗಿದ್ದರು. ಇದೀಗ, ಅಂತವರಿಗೆ ಆತಂಕ ಮೂಡಿದೆ.
ಕೊಡಗು ಜಿಲ್ಲಾಡಳಿತದಿಂದ ಹೊರ ಹೋಗಲು, ಬರಲು ಪಾಸ್ ವಿತರಣೆ
ಯಾಕಂದ್ರೆ, ಬಹುತೇಕ ಮಾಲ್ಗಳಲ್ಲಿದ್ದ ತರಕಾರಿ, ಹಣ್ಣು-ಹಂಪಲು ಖಾಲಿಯಾಗಿದೆ, ಇಷ್ಟು ದಿನ ಸಂಗ್ರಹಿಸಿದ್ದ ಎಲ್ಲವೂ ಬಹುತೇಕ ಕೊನೆಯ ಹಂತದಲ್ಲಿದೆ. ಬಹುಶಃ ಮುಂದಿನ ಸರಬರಾಜು ಆಗುವವರೆಗೂ ಮಾಲ್ಗಳಲ್ಲಿ ತರಕಾರಿ, ಹಣ್ಣು-ಹಂಪಲು ಸಿಗುವುದಿಲ್ಲವಾ ಎಂಬ ಭಯ ಹುಟ್ಟಿಕೊಂಡಿದೆ.
ಈ ಬಗ್ಗೆ ಹೊಸಕೆರೆಹಳ್ಳಿಯ ಮಾಲ್ನಲ್ಲಿ ಸಿಬ್ಬಂದಿಯೊಬ್ಬರನ್ನು ವಿಚಾರಿಸಿದಕ್ಕೆ, 'ಸದ್ಯಕ್ಕೆ ಇರುವುದನ್ನು ಮಾರಾಟ ಮಾಡುತ್ತಿದ್ದೇವೆ, ನಾಳೆ ಬಗ್ಗೆ ಗೊತ್ತಿಲ್ಲ, ಬಹುಶಃ ಸರಬರಾಜು ಆಗಬಹುದು, ನೋಡ್ಬೇಕು' ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
'ಕೊರೊನಾ ವಿಚಾರದಲ್ಲಿ ಚೀನಾ ಬಗ್ಗೆ ನಮಗೆ ಬೇಸರ ಇದೆ': ಟ್ರಂಪ್ ಹೀಗೆ ಹೇಳಿದ್ದೇಕೆ?
ಸರಬರಾಜು ಆದರೆ ಓಕೆ. ಒಂದು ವೇಳೆ ತರಕಾರಿ, ಹಣ್ಣು ಹಂಪಲುಗಳ ಸರಬರಾಜು ಆಗಿಲ್ಲ ಅಂದ್ರೆ ಪರಿಸ್ಥಿತಿ ಏನಾಗಲಿದೆ ಎಂಬ ಸಣ್ಣದೊಂದು ಆತಂಕ ಶುರುವಾಗಿದೆ. ಇದು ಕೇವಲ ತರಕಾರಿ ಮತ್ತು ಹಣ್ಣು ಹಂಪಲುಗಳ ಕಥೆ ಅಷ್ಟೆ.