Get Updates
Get notified of breaking news, exclusive insights, and must-see stories!

ಟ್ರಾಫಿಕ್‌ ಸಿಗ್ನಲ್‌ ಇಲ್ಲದೆ ಏರ್‌ಪೋರ್ಟ್‌ಗೆ ನೆಮ್ಮದಿಯ ಪ್ರಯಾಣ: ಹಳೇ ಯೋಜನೆಗೆ ಮತ್ತೆ ಕೈ ಹಾಕಿದ NHAI

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಸಾದಹಳ್ಳಿ ಬಳಿ ಸದ್ಯ ಒಂದು ಸಿಗ್ನಲ್‌ ಇದೆ. ಹೆಬ್ಬಾಳದಿಂದ ಮಾರ್ಗದಿಂದ ಏರ್‌ಪೋರ್ಟ್‌ ರಸ್ತೆಯಲ್ಲಿ ಸದ್ಯಕ್ಕೆ ಈ ಒಂದು ಸಿಗ್ನಲ್‌ ಮಾತ್ರವೇ ಇದ್ದು, ಈ ಸ್ಥಳದಲ್ಲಿ ಅಂಡರ್‌ಪಾಸ್‌ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮುಂದಾಗಿದೆ. ಸುಮಾರು ದಶಕಗಳಷ್ಟು ಹಳೆಯದಾದ ಅಂಡರ್‌ಪಾಸ್‌ ಯೋಜನೆ ಈಗ ಮತ್ತೆ ಚುರುಕಾಗಿದೆ.

ಬಳ್ಳಾರಿ ರಸ್ತೆಯ ಸಾದಹಳ್ಳಿ ಗೇಟ್‌ ಬಳಿ ಈಗ ಸಿಗ್ನಲ್‌ ಇದೆ. ಹೆಬ್ಬಾಳದಿಂದ ಏರ್‌ಪೋರ್ಟ್‌ ರಸ್ತೆಯಲ್ಲಿ ಸಾಗುವವರಿಗೆ ಈ ಸಿಗ್ನಲ್‌ ಮಾತ್ರವೇ ಸದ್ಯ ಅಡಚಣೆಯಾಗಿದೆ. ಇಲ್ಲಿ ಅಂಡರ್‌ಪಾಸ್‌ ನಿರ್ಮಾಣವಾದರೆ ಯಾವುದೇ ಸಿಗ್ನಲ್‌ ಕಿರಿಕಿರಿ ಇಲ್ಲದೆ ವಾಹನಗಳು ಸಂಚರಿಸಬಹುದು ಎಂದು ಹೇಳಲಾಗುತ್ತಿದೆ. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಈ ಅಂಡರ್‌ಪಾಸ್ ಯೋಜನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತೆ ಕೈಗೆತ್ತಿಕೊಳ್ಳಲಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ಪ್ರಯಾಣಿಕರು ಸುಗಮ ಪ್ರಯಾಣದ ಅನುಭವ ಪಡೆಯಬಹುದು.

NHAI Revives Underpass Plan Near Sadahalli For Signal-Free Airport Road

ವಿಮಾನ ನಿಲ್ದಾಣದ ಮಾರ್ಗದಲ್ಲಿ ಉಳಿದಿರುವ ಈ ಏಕೈಕ ಟ್ರಾಫಿಕ್ ಸಿಗ್ನಲ್ ಅನ್ನು ತೆಗೆದು ಹಾಕುವ ಮೂಲಕ ಅಡಚಣೆಯನ್ನು ಪರಿಣಾಮಕಾರಿಯಾಗಿ ತೆಗೆದುಹಾಕುವ ಗುರಿಯನ್ನು ಈ ಯೋಜನೆ ಹೊಂದಿದೆ. ಸುಮಾರು ಒಂದು ದಶಕದ ಹಿಂದೆಯೇ ಇಲ್ಲಿ ಅಂಡರ್‌ಪಾಸ್‌ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಇದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಸುಮಾರು ಹತ್ತು ವರ್ಷಗಳ ಹಿಂದೆಯೇ ಪ್ರಾಧಿಕಾರ ಈ ಅಂಡರ್‌ಪಾಸ್ ಬಗ್ಗೆ ಪ್ರಸ್ತಾಪಿಸಿತ್ತು. ಆರಂಭದಲ್ಲಿ ಕಾಮಗಾರಿ ಶುರುವಾದರೂ ಸ್ಥಳೀಯರ ವಿರೋಧ, ವಿನ್ಯಾಸದ ಸಮಸ್ಯೆ ಹಾಗೂ ನಮ್ಮ ಮೆಟ್ರೋ ಯೋಜನೆಯ ಬ್ಲೂ ಲೈನ್ ಕಾರಿಡಾರ್‌ನಿಂದಾಗಿ ಈ ಯೋಜನೆಯು ಹಳಿತಪ್ಪಿತ್ತು. ಹಾಗಾಗಿ ದಶಕಗಳ ಕಾಲ ಇದು ಸ್ಥಗಿತಗೊಂಡಿತು. ಇದರಿಂದ ಪ್ರಯಾಣಿಕರಿಗೂ ನಿರಾಸೆಯಾಗಿತ್ತು.

Take a Poll

ಅಂಡರ್‌ಪಾಸ್‌ಗೆ ಹೊಸ ವಿನ್ಯಾಸ

ಇದೀಗ ಈ ಅಂಡರ್‌ಪಾಸ್‌ ನಿರ್ಮಾಣಕ್ಕೆ ಹೊಸ ವಿನ್ಯಾಸದ ಅನುಮತಿಗಳನ್ನು ಪಡೆದುಕೊಂಡು, ಹಿಂದಿನ ಅಡೆತಡೆಗಳು ಕೂಡ ನಿವಾರಣೆಯಾಗಿದೆ ಎನ್ನಲಾಗಿದ್ದು, ಈ ಯೋಜನೆ ಕೈಗೆತ್ತಿಕೊಳ್ಳಲು ಎನ್‌ಎಚ್‌ಎಐ ಮುಂದಾಗಿದೆ. ಈ ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಪ್ರಾಧಿಕಾರವು ಶೀಘ್ರದಲ್ಲೇ ಟೆಂಡರ್‌ಗಳನ್ನು ಕರೆಯುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಟೆಂಡರ್‌ ಪೂರ್ಣಗೊಂಡ ನಂತರ ಏರ್‌ಪೋರ್ಟ್‌ ಸಂಚಾರಕ್ಕೆ ಹಾಗೂ ದೇವನಹಳ್ಳಿ ಕಡೆಗೆ ಪ್ರಯಾಣಿಸುವವರಿಗೆ ಅಡೆತಡೆಯಿಲ್ಲದ ಪ್ರವೇಶವನ್ನು ಒದಗಿಸಲು ಈ ಅಂಡರ್‌ಪಾಸ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಈ ಅಂಡರ್‌ಪಾಸ್ ಸುಮಾರು 800 ಮೀಟರ್ ಉದ್ದವಿರುತ್ತದೆ. ಕೆಂಪೇಗೌಡ ಏರ್‌ಪೋರ್ಟ್‌ಗೆ ಸಂಚರಿಸುವವರು ಮತ್ತು ದೇವನಹಳ್ಳಿ ಕಡೆಗೆ ಹೋಗುವ ವಾಹನಗಳು ಈ ಅಂಡರ್‌ಪಾಸ್ ಬಳಸಿದರೆ, ಹತ್ತಿರದ ಪ್ರದೇಶಗಳ ವಾಹನ ಚಾಲಕರು ದೇವನಹಳ್ಳಿ ಮತ್ತು ಬೆಂಗಳೂರು ನಗರದ ಕಡೆಗೆ ಪ್ರಯಾಣಿಸಲು ಈ ಮಾರ್ಗ ಬಳಸುತ್ತಾರೆ. ಈ ಯೋಜನೆಗೆ ಅಂದಾಜು 40 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಅಂಡರ್‌ಪಾಸ್‌ ನಿರ್ಮಾಣ ದಶಕಗಳ ಕಾಲ ಸ್ಥಗಿತಗೊಂಡಿತ್ತು. ಈಗಲಾದರೂ ವೇಗವಾಗಿ ಈ ಕಾಮಗಾರಿ ಪೂರ್ಣಗೊಳ್ಳಿದೆಯೇ ಎಂಬುದು ಸದ್ಯದಲ್ಲೇ ತಿಳಿಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+