ಹೊಸ ವರ್ಷದ ಹಿನ್ನೆಲೆ ಬೆಂಗಳೂರಿನಲ್ಲಿ ಬಾರ್, ರೆಸ್ಟೋರೆಂಟ್ ಸಮಯ ವಿಸ್ತರಣೆ
ಬೆಂಗಳೂರು, ಡಿಸೆಂಬರ್ 25: ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ಸಜ್ಜಾಗುತ್ತಿರುವ ಬೆಂಗಳೂರಿನಲ್ಲಿ ಜನರು ಸಂತಸದಿಂದ 2024ನ್ನು ಬರಮಾಡಿಕೊಳ್ಳಲು ಹಾಗೂ ವ್ಯಾಪಾರ ಹೆಚ್ಚಾಗುವ ನಿರೀಕ್ಷೆಯಿಂದ ಬಾರ್ಗಳ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಗ್ರಾಹಕರನ್ನು ಆಕರ್ಷಿಸಲು ಪಬ್ಗಳು ಮತ್ತು ಬಾರ್ಗಳು ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ. ತಮ್ಮಲ್ಲಿ ಮಲ್ಲ್ಡ್ ವೈನ್ನಿಂದ ಹಿಡಿದು ಬಗಬಗೆಯ ಆಹಾರಗಳ ಸಿದ್ಧತೆಯೊಂದಿಗೆ ಪಬ್ಗಳು ತಮ್ಮ ಗ್ರಾಹಕರಿಗಾಗಿ ಕಾಯುತ್ತಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ನಗರದಲ್ಲಿರುವ 1,522 ಔಟ್ಲೆಟ್ಗಳಲ್ಲಿ ಕ್ಯುರೇಟೆಡ್ ಮೆನುಗಳನ್ನು ಸಿದ್ದಗೊಳಿಸಲಾಗುತ್ತಿದೆ. ಕಾರ್ಮೆಲರಾಮ್ನಲ್ಲಿರುವ ಅವರ ದೊಡ್ಡ ಔಟ್ಲೆಟ್ನಲ್ಲಿ ಡಿಜೆಗಳ ಜೊತೆಗೆ, ಕಲಾವಿದರ ಒಂದು ಶ್ರೇಣಿಯು ವಿವಿಧ ಹಾಡುಗಳ ಶ್ರೇಣಿಯನ್ನು ಪ್ರದರ್ಶಿಸುತ್ತದೆ ಎಂದು ಮಾಲೀಕ ಚೇತನ್ ಹೆಗ್ಡೆ ಹೇಳಿದರು.
ಭಾರತೀಯ ರಾಷ್ಟ್ರೀಯ ಉಪಹಾರ ಗೃಹಗಳ ಸಂಘದ ಅಧ್ಯಕ್ಷರೂ ಆಗಿರುವ ಚೇತನ್ ಹೆಗ್ಡೆ, "ಈ ಹೊಸ ವರ್ಷದ ಮುನ್ನಾದಿನದಂದು ಯಾವುದೇ ನಿರ್ಬಂಧಗಳಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ. ಇದು ಸ್ವಾಗತಾರ್ಹ ಸಂಕೇತವಾಗಿದೆ. ನಮ್ಮ ರೆಸ್ಟೋರೆಂಟ್ನಲ್ಲಿ ಕಡಿಮೆ ಗಾಳಿ ಇರುವ ಸ್ಥಳಗಳಲ್ಲಿ ಜನರು ಮಾಸ್ಕ್ಗಳನ್ನು ಧರಿಸುವುದನ್ನು ಕಡ್ಡಾಯ ಮಾಡಲು ನಾವು ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ ಎಂದರು.
ವೈನ್ ಮರ್ಚೆಂಟ್ಸ್ ಅಸೋಸಿಯೇಷನ್, ಕರ್ನಾಟಕ ಒಕ್ಕೂಟದ ಉಪಾಧ್ಯಕ್ಷ ಕರುಣಾಕರ ಹೆಗ್ಡೆ, ವ್ಯಾಪಾರಕ್ಕೆ ಈ ಸೀಸನ್ ಉತ್ತಮವಾಗಿದೆ. ಬಾರ್ ಮುಕ್ತಾಯದ ಸಮಯವನ್ನು ಕನಿಷ್ಠ ಒಂದು ಗಂಟೆ ವಿಸ್ತರಿಸಲು ಅನುಮೋದನೆಯನ್ನು ಪಡೆಯುವ ನಿರೀಕ್ಷೆಯಿದೆ ಎಂದು ಹೇಳಿದರು.
"ನಮಗೆ ಪಬ್ಗಳು ಮತ್ತು ಎ-ಕ್ಲಾಸ್ ರೆಸ್ಟೋರೆಂಟ್ಗಳಿಗೆ ಅವು ಅಗತ್ಯವಿದೆ. ಪ್ರಸ್ತುತ, ಈ ಸಂಸ್ಥೆಗಳು ಮಧ್ಯರಾತ್ರಿ 1 ಗಂಟೆಯವರೆಗೆ ತೆರೆದಿರಲು ಅನುಮತಿಸಲಾಗಿದೆ. ಬಾರ್ಗಳು, ರೆಸ್ಟೋರೆಂಟ್ಗಳು, ಪಬ್ಗಳು ಮತ್ತು ವೈನ್ ಸ್ಟೋರ್ಗಳು ಹೊಸ ವರ್ಷದ ಮುನ್ನಾದಿನ ಮತ್ತು ಹೊಸ ವರ್ಷದ ದಿನದಂದು ಸಾಮಾನ್ಯ ದಿನದಲ್ಲಿ ಗಳಿಸುವ ಆದಾಯಕ್ಕಿಂತ ಎರಡು ಪಟ್ಟು ಆದಾಯವನ್ನು ಗಳಿಸುತ್ತವೆ. ಕ್ರಿಸ್ಮಸ್ ಮುನ್ನಾದಿನದಂದು ಸರ್ಕಾರದ ಆದಾಯದಲ್ಲಿ 50% ಹೆಚ್ಚಳವಿದೆ. ಡಿಸೆಂಬರ್ 24 ಮತ್ತು ಜನವರಿ 1 ರ ನಡುವಿನ ಈ ಋತುವಿನಲ್ಲಿ ವ್ಯಾಪಾರವು ಹೆಚ್ಚು ಹೆಚ್ಚಾಗುತ್ತದೆ" ಎಂದು ಅವರು ಹೇಳಿದರು.
ಈ ವರ್ಷದ ಹೊಸ ವರ್ಷದ ಸಮಯದಲ್ಲಿ ಬೆಂಗಳೂರು ಹಿಂದೆ ನಡೆದಿರುವ ದುರ್ಘಟನೆಗಳನ್ನು ಪರಿಗಣಿಸಿ ಮಹಿಳೆಯರ ಸುರಕ್ಷತೆಯು ಅವರ ಆದ್ಯತೆಯಾಗಿದೆ. ನಾವು ನಮ್ಮ ಪ್ರವೇಶ ಪಟ್ಟಿಗಳನ್ನು ಕ್ಯುರೇಟ್ ಮಾಡುತ್ತಿದ್ದೇವೆ. ಇದು ಮಹಿಳೆಯರಿಗೆ ಉತ್ತಮ ಅನುಭವದೊಂದಿಗೆ ಬರಲು ಮತ್ತು ಸಂತಸದಿಂದಿರಲು ಸೂಕ್ತ ಸ್ಥಳವಾಗಿರಬೇಕು. ಹೆಬ್ಬಾಳ ಸೋಶಿಯಲ್ನಲ್ಲಿರುವ ಸ್ಥಳದಲ್ಲಿ ಮಹಿಳಾ ಬೌನ್ಸರ್ಗಳು ಇರುತ್ತಾರೆ" ಎಂದು ಅವರು ಹೇಳಿದರು.
ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾತನಾಡಿ, ನಗರದ ತಮ್ಮ ಅಂಗಸಂಸ್ಥೆ ಹೋಟೆಲ್ಗಳಲ್ಲಿ ಈಗಾಗಲೇ ಸುಮಾರು 50,000 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ, ದೇಶದ ವಿವಿಧ ಭಾಗಗಳಿಂದ ಜನರು ಹೆಚ್ಚಾಗಿ ಬರುತ್ತಿದ್ದಾರೆ. ಕೋವಿಡ್ -19 ಪ್ರಕರಣಗಳ ಹೆಚ್ಚಳ ಹಿನ್ನೆಲೆ ಚಿಂತಿಸಲು ಏನೂ ಇಲ್ಲ. ಏಕೆಂದರೆ ಆದೇಶದ ಪ್ರಕಾರ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಹಿರಿಯ ನಾಗರಿಕರು ಮತ್ತು ಗರ್ಭಿಣಿಯರು ಮಾಸ್ಕ್ ಧರಿಸುವುದನ್ನು ನಿರೀಕ್ಷಿಸಲಾಗಿದೆ ಎಂದರು.
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ -
ಬೆಂಗಳೂರು ಏರ್ಪೋರ್ಟ್ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್ಪೋರ್ಟ್'ಪ್ರಶಸ್ತಿ -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ












Click it and Unblock the Notifications