ಭೂಕಂಪ: ಗೂಗಲ್ ಗುರು ಬಳಸಿ ನಿಮ್ಮವರ ಹುಡುಕಾಟ ನಡೆಸಿ
ಬೆಂಗಳೂರು, ಏ.26: ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಜನರು ತತ್ತರಿಸುವ ಸಂದರ್ಭದಲ್ಲಿ ಜನರ ಹುಡುಕಾಟಕ್ಕೆ ನೆರವಾಗಲು ಸರ್ಚ್ ಇಂಜಿನ್ ದೈತ್ಯ ಗೂಗಲ್ ಮತ್ತೊಮ್ಮೆ ಸಿದ್ಧವಾಗಿದೆ. ನೇಪಾಳದ ಭೀಕರ ಭೂಕಂಪದಲ್ಲಿ ಸಿಲುಕಿ ನಾಪತ್ತೆಯಾದವರ ಪತ್ತೆಗೆ 'ಗೂಗಲ್ ಪರ್ಸನ್ ಫೈಂಡರ್' ಅಪ್ಲಿಕೇಷನ್ ನೆರವಿಗೆ ಬರಲಿದೆ. ಇದನ್ನು ಬಳಸುವುದು ಹೇಗೆ ಮುಂದೆ ಓದಿ...
ಬಂಧು ಮಿತ್ರರನ್ನು ಕಳೆದುಕೊಂಡವರು ತಮ್ಮವರ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆಯಲು Google Person Finder Service ಬಳಸಬಹುದು. ಜೊತೆಗೆ ಸಂತ್ರಸ್ತರ ಬಗ್ಗೆ ಮಾಹಿತಿ ಇದ್ದರೆ ಹೆಚ್ಚಿನ ವಿವರಗಳನ್ನು ಗೂಗಲ್ ಗೆ ಒದಗಿಸಬಹುದು. ಈ ಸೇವೆ ಸದ್ಯಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದೆ. [ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರ ಸ್ಥಿತಿ-ಗತಿ ಅಪ್ಡೇಟ್ಸ್]

2014ರ ಜಮ್ಮು ಮತ್ತು ಕಾಶ್ಮೀರ ಜಲಪ್ರವಾಹ, 2010ರ ಹೈತಿ ಭೂಕಂಪ, ಜಪಾನಿನಲ್ಲಿ 2011ರಲ್ಲಿ ಭೂಕಂಪ ಮತ್ತು ಉತ್ತರಾಖಂಡ್ ಅನಾಹುತ ಹಾಗೂ ಸುನಾಮಿಯಿಂದ ಮನೆ ಮಠ ಕಳೆದುಕೊಂಡವರ ಪತ್ತೆಗೆ ಗೂಗಲ್ ಇದೇ ಅಪ್ಲಿಕೇಷನ್ ಬಳಸಿತ್ತು.
ಭಾರತದ ಉತ್ತರಾಖಂಡದ ಪ್ರವಾಹದಲ್ಲಿ ಸಿಲುಕಿರುವ ಕಾಣೆಯಾದರವನ್ನು ಪತ್ತೆಹಚ್ಚುವ ಸಲುವಾಗಿ ಕೂಡಾ ಗೂಗಲ್ ಪರ್ಸನ್ ಫೈಂಡರ್ ವೆಬ್ ಅಪ್ಲಿಕೇಶನ್ ಬಳಸಲಾಗಿತ್ತು. [80 ವರ್ಷಕ್ಕೊಮ್ಮೆ ನೇಪಾಳದಲ್ಲಿ ಭೂಕಂಪ?]
ಇದು ಓಪನ್ ಸೋರ್ಸ್ ವೆಬ್ ಅಪ್ಲಿಕೇಷನ್ ಆಗಿದ್ದು, ಸಂದೇಶ ವಾಹಕ ಹಾಗೂ ಡಾಟಾಬೇಸ್ ಒಳಗೊಂಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪೋರ್ಸ್(NDRF) ನ ಜೊತೆ ಕೈ ಜೋಡಿಸಿದೆ.

ಹುಡುಕುವುದು ಹೇಗೆ?
* ನಾಪತ್ತೆಯಾದ ವ್ಯಕ್ತಿಯ ಹೆಸರು ಗೊತ್ತಿದ್ದರೆ I'm looking for someone ಕ್ಲಿಕ್ ಮಾಡಿ ಹೆಸರು ಟೈಪ್ ಮಾಡಿ ವಿವರ ಪಡೆಯಿರಿ.
* ವ್ಯಕ್ತಿಯ ಬಗ್ಗೆ ಮಾಹಿತಿ ಗೊತ್ತಿದ್ದರೆ ಅವರ ಹೆಸರು ವಿವರ ನೀಡಿ ಸಹಾಯ ಮಾಡಬಹುದು.
* ಅಥವಾ ಎಸ್ ಎಂಎಸ್ ಮಾಡಿ ಮಾಹಿತಿ ಕೋರಬಹುದು. [ಚಿತ್ರಸುದ್ದಿ : ಏಕೋ ಈ ಕೋಪ ಶಂಕರ, ಶಿವಶಂಕರ]
ಭಾರತೀಯರಿಗೆ : Search is available through SMS. Text "search " to 97733 00000
ಅಮೆರಿಕದವರಿಗೆ: Search is available through SMS. Text "search " to +1-650-800-3978.
ಭೂಕಂಪ ಪೀಡಿತರಿಗೆ ಸಹಾಯವಾಣಿ ಇಲ್ಲಿದೆ :
* ನೇಪಾಳದಲ್ಲಿ ಭಾರತೀಯ ರಾಯಭಾರಿ ಕಚೇರಿ : +977 9581107021, +977 9851135141
* 24X7 ಕಂಟ್ರೋಲ್ ರೂಮ್ : +91 11 2301 2113, +91 11 2301 4104 and +91 11 2301 7905.
ಇನ್ನೂ ಹೆಚ್ಚಿನ ಸಹಾಯವಾಣಿ ಮಾಹಿತಿ ಇಲ್ಲಿ ಕ್ಲಿಕ್ ಮಾಡಿ
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications