ಕಾಶ್ಮೀರದ ಪ್ರವಾಹ : ಜನ ಹುಡುಕಾಟಕ್ಕೆ ಗೂಗಲ್ ಹೆಲ್ಪ್
ಶ್ರೀನಗರ, ಸೆ.10: ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಜನ ತತ್ತರಿಸುವ ಸಂದರ್ಭದಲ್ಲಿ ಜನರ ಹುಡುಕಾಟಕ್ಕೆ ನೆರವಾಗಲು ಸರ್ಚ್ ಇಂಜಿನ್ ದೈತ್ಯ ಗೂಗಲ್ ಮತ್ತೊಮ್ಮೆ ಸಿದ್ಧವಾಗಿದೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಧು ಮಿತ್ರರನ್ನು ಕಳೆದುಕೊಂಡವರು ತಮ್ಮವರ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆಯಲು Google Person Finder Service ಬಳಸಬಹುದು.ಜೊತೆಗೆ ಸಂತ್ರಸ್ತರ ಬಗ್ಗೆ ಮಾಹಿತಿ ಇದ್ದರೆ ಹೆಚ್ಚಿನ ವಿವರಗಳನ್ನು ಗೂಗಲ್ ಗೆ ಒದಗಿಸಬಹುದು. ಈ ಸೇವೆ ಸದ್ಯಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದೆ.
2010ರ ಹೈತಿ ಭೂಕಂಪ, ಜಪಾನಿನಲ್ಲಿ 2011ರಲ್ಲಿ ಭೂಕಂಪ ಮತ್ತು ಸುನಾಮಿಯಿಂದ ಮನೆ ಮಠ ಕಳೆದುಕೊಂಡವರ ಪತ್ತೆಗೆ ಗೂಗಲ್ ಇದೇ ಅಪ್ಲಿಕೇಷನ್ ಬಳಸಿತ್ತು. [ಸಂತ್ರಸ್ತರಿಗೆ ದೇಣಿಗೆ ನೀಡಲು ಆರ್ ಎಸ್ಎಸ್ ಮನವಿ]

ಭಾರತದ ಉತ್ತರಾಖಂಡದ ಪ್ರವಾಹದಲ್ಲಿ ಸಿಲುಕಿರುವ ಕಾಣೆಯಾದರವನ್ನು ಪತ್ತೆಹಚ್ಚುವ ಸಲುವಾಗಿ ಕೂಡಾ ಗೂಗಲ್ ಪರ್ಸನ್ ಫೈಂಡರ್ ವೆಬ್ ಅಪ್ಲಿಕೇಶನ್ ಬಳಸಲಾಗಿತ್ತು. ಇದು ಓಪನ್ ಸೋರ್ಸ್ ವೆಬ್ ಅಪ್ಲಿಕೇಷನ್ ಆಗಿದ್ದು, ಸಂದೇಶ ವಾಹಕ ಹಾಗೂ ಡಾಟಾಬೇಸ್ ಒಳಗೊಂಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪೋರ್ಸ್(NDRF) ನ ಜೊತೆ ಕೈ ಜೋಡಿಸಿದೆ.
ಹುಡುಕುವುದು ಹೇಗೆ?
Person Finder : Jammu & Kashmir Floods, September 2014 ಕ್ಲಿಕ್ ಮಾಡಿ
ನಾಪತ್ತೆಯಾದ ವ್ಯಕ್ತಿಯ ಹೆಸರು ಗೊತ್ತಿದ್ದರೆ I'm looking for someone ಕ್ಲಿಕ್ ಮಾಡಿ ಹೆಸರು ಟೈಪ್ ಮಾಡಿ ವಿವರ ಪಡೆಯಿರಿ. ವ್ಯಕ್ತಿಯ ಬಗ್ಗೆ ಮಾಹಿತಿ ಗೊತ್ತಿದ್ದರೆ ಅವರ ಹೆಸರು ವಿವರ ನೀಡಿ ಸಹಾಯ ಮಾಡಬಹುದು. ಅಥವಾ ಎಸ್ ಎಂಎಸ್ ಮಾಡಿ ಮಾಹಿತಿ ಕೋರಬಹುದು.
Search is available through SMS. Text "search " to 97733 00000
ಜಮ್ಮು ಮತ್ತು ಕಾಶ್ಮೀರದ ಸಹಾಯವಾಣಿ: (011) 2309 3054, 2309 2763, 2309 3564, 2309 2923, 2309,2885, 2309,3566 2309,3563
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications