80 ವರ್ಷಕ್ಕೊಮ್ಮೆ ನೇಪಾಳದಲ್ಲಿ ಭೂಕಂಪ?
ನವದೆಹಲಿ, ಏ. 25 : 80 ವರ್ಷಗಳಿಗೊಮ್ಮೆ ನೇಪಾಳದಲ್ಲಿ ಭೂಕಂಪವಾಗುತ್ತದೆ ಎಂಬ ಮಾತಿದೆ. ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ. ನೇಪಾಳದಲ್ಲಿ 1934ರ ಬಳಿಕ ಶನಿವಾರ ಭಾರೀ ಭೂಕಂಪವಾಗಿದೆ. ಇದುವರೆಗೂ ಸುಮಾರು 600 ಜನರು ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ.
2011ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭೂಕಂಪದಲ್ಲಿ 11 ಜನರು ಮೃತಪಟ್ಟಿದ್ದರು. ಕಳೆದ ವರ್ಷವೇ ಭಾರೀ ಭೂಕಂಪವಾಗಲಿದೆ ಅದಕ್ಕೆ ಸಿದ್ಧವಾಗಬೇಕು ಎಂದು ಮಾತು ಹಬ್ಬಿತ್ತು. 80 ವರ್ಷಗಳಿಗೊಮ್ಮೆ ಭೂಕಂಪವಾಗುತ್ತದೆ ಎಂಬ ಭಯ ಅಲ್ಲಿನ ಜನರನ್ನು ಕಾಡುತ್ತಲೇ ಇದೆ. [ನೇಪಾಳ ಮತ್ತು ಉತ್ತರ ಭಾರತದ ಹಲವೆಡೆ ಭೂಕಂಪ]

ದೊಡ್ಡ ಭೂಕಂಪ : 80 ವರ್ಷಗಳಿಗೊಮ್ಮೆ ನೇಪಾಳ ಭೂಕಂಪಕ್ಕೆ ತುತ್ತಾಗುತ್ತದೆ ಎಂಬ ಆತಂಕ ಜನರ ಮನಸ್ಸಿನಲ್ಲಿದೆ. ಇದು ನಿಜವಾಗುವುದು ಬೇಡ ಎಂಬುದು ಜನರ ಬಯಕೆ. ಆದರೆ. ವಾಸ್ತವವೇ ಬೇರೆ ಇಂದು ಮತ್ತೊಮ್ಮೆ ಭೂಕಂಪ ಸಂಭವಿಸಿದೆ. [ನೇಪಾಳ, ಭಾರತ ಭೂಕಂಪ ಪೀಡಿತರಿಗೆ ಸಹಾಯವಾಣಿ]
1934ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭೂಕಂಪದಲ್ಲಿ 12,000 ಜನರು ಮೃತಪಟ್ಟಿದ್ದರು. ಇಂದು ಸಂಭವಿಸಿರುವ ದುರಂತ ಅದಕ್ಕಿಂತ ದೊಡ್ಡದಾಗಲಿದೆ ಎಂದು ಅಂದಾಜಿಸಲಾಗಿದೆ. ಇದುವರೆಗೂ ಸುಮಾರು 600 ಜನರು ಮೃತಪಟ್ಟಿರುವ ಮಾಹಿತಿ ಲಭ್ಯವಾಗುತ್ತಿದೆ. [ಭೀಕರ ಭೂಕಂಪಕ್ಕೆ ನೇಪಾಳ ತತ್ತರ]
2015ರ ಭೂಕಂಪ ಅಪಾಯಕಾರಿ ಏಕೆ : 1934ಕ್ಕಿಂತ ಹೆಚ್ಚು ಅಪಾಯಕಾರಿಯಾದದ್ದು ಇಂದಿನ ಭೂಕಂಪ ಎಂದು ತಜ್ಞರು ಹೇಳುತ್ತಾರೆ. ಅಂದಿಗಿಂತಲೂ ನೇಪಾಳದ ಜನಸಂಖ್ಯೆ ಅಧಿಕವಾಗಿದೆ, ಸಾವಿರಾರು ಕಟ್ಟಡಗಳು ನಿರ್ಮಾಣವಾಗಿವೆ. ನೇಪಾಳದಲ್ಲಿರುವ ಕಟ್ಟಡಗಳು ಭೂಕಂಪದಂತಹ ಪ್ರಾಕೃತಿಕ ವಿಕೋಪಗಳನ್ನು ತಡೆದುಕೊಳ್ಳುವಷ್ಟು ಶಕ್ತಿಶಾಲಿಯಾಗಿಲ್ಲ ಎಂಬುದು ತಜ್ಞರು ಅಭಿಪ್ರಾಯ.
ತಜ್ಞರ ಪ್ರಕಾರ ನೇಪಾಳ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ರಕ್ಷಣಾ ಕಾರ್ಯಚರಣೆಯನ್ನು ತುರ್ತಾಗಿ ಕೈಗೊಳ್ಳುವಷ್ಟು ಶಕ್ತಿ ಮತ್ತು ತಂತ್ರಜ್ಞಾನವನ್ನು ಹೊಂದಿಲ್ಲ. ಇಂತಹ ಸಮಯದಲ್ಲಿ ನೆರೆಯ ದೇಶಗಳ ಸಹಕಾರ ಅನಿವಾರ್ಯವಾಗಿದೆ. ನೇಪಾಳಕ್ಕೆ ಭೇಟಿ ನೀಡಿ ಬಂದ ಪ್ರವಾಸಿಗರು ಈ ಮಾತನ್ನು ಒಪ್ಪುತ್ತಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications