ನೇಪಾಳದಲ್ಲಿ ಸಿಲುಕಿರುವ 85 ಕನ್ನಡಿಗರು ಸುರಕ್ಷಿತ
ಬೆಂಗಳೂರು/ಕಠ್ಮಂಡು, ಏ.26: ಭೂಕಂಪ ಪೀಡಿತ ನೇಪಾಳದಲ್ಲಿ ಸಿಲುಕಿರುವ ಕರ್ನಾಟಕ ಮೂಲದ ಜನತೆಯನ್ನು ರಕ್ಷಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತ್ವರಿತ ಕಾರ್ಯಾಚರಣೆ ಕೈಗೊಂಡಿದೆ.
ಈ ಬಗ್ಗೆ ಕರ್ನಾಟಕ ಸರ್ಕಾರ ಭಾನುವಾರ ಬೆಳಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, 82ಜನ ನೇಪಾಳದಿಂದ ಕರ್ನಾಟಕದತ್ತ ಬರುತ್ತಿದ್ದಾರೆ ಎಂಬ ಶುಭ ಸಮಾಚಾರ ನೀಡಿದೆ. ಜೊತೆಗೆ ಕಂಟ್ರೋಲ್ ರೂಮ್ ನಂಬರ್ ಕೂಡಾ ನೀಡಲಾಗಿದೆ.
ನೇಪಾಳದ ಕಠ್ಮಂಡು ಸೇರಿದಂತೆ ವಿವಿಧೆಡೆ ಭೂಕಂಪದ ಆಘಾತಕ್ಕೆ ಸಿಲುಕಿ ತತ್ತರಿಸಿರುವ ಕನ್ನಡಿಗರಿಗೆ ಧೈರ್ಯ ತುಂಬಲು ಕರ್ನಾಟಕ ಸರ್ಕಾರ ಕ್ರಮ ಕೈಗೊಂಡಿದೆ. ಸಮರ್ಥ ಅಧಿಕಾರಿಗಳಾದ ಪಂಕಜ್ ಕುಮಾರ್ ಪಾಂಡೆ (99000 95440), ಐಎಎಸ್, ಉಮೇಶ್ ಕುಮಾರ್(94808 00029) ಐಪಿಎಸ್ ಅವರು ಕಠ್ಮಂಡು ತಲುಪಿದ್ದು, ಅಗತ್ಯ ಕ್ರಮ ಕೈಗೊಂಡಿದ್ದಾರೆ.[ನೇಪಾಳ, ಭಾರತ ಭೂಕಂಪ ಪೀಡಿತರಿಗೆ ಸಹಾಯವಾಣಿ]
ಆಪರೇಷನ್ ಮೈತ್ರಿ ಹೆಸರಿನಲ್ಲಿ ಭಾರತ ಸರ್ಕಾರ ಕೈಗೊಂಡಿರುವ ಕಾರ್ಯಾಚರಣೆಗೆ ಪೂರಕವಾಗಿ ಕರ್ನಾಟಕ ಸರ್ಕಾರದ ತಂಡ ಕಾರ್ಯ ನಿರ್ವಹಿಸುತ್ತಿದ್ದು, ಪ್ರವಾಸಿಗರು ಸುರಕ್ಷಿತವಾಗಿ ಬೆಂಗಳೂರು ತಲುಪಲಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಹೇಳಿದ್ದಾರೆ.

ಕನ್ನಡಿಗರ ಸ್ಥಿತಿಗತಿ ಅಪ್ಡೇಟ್ಸ್
* ಅಪಾಯದಲ್ಲಿ ಸಿಲುಕಿದ್ದ 82 ಜನ ಐಎಎಫ್ ವಿಶೇಷ ವಿಮಾನದ ಮೂಲಕ ದೆಹಲಿಗೆ ನಿನ್ನೆ ಆಗಮಿಸಿದ್ದಾರೆ.
* ಕನ್ನಡಿಗರಿಗೆ ದೆಹಲಿಯ ಕರ್ನಾಟಕ ಭವನದಲ್ಲಿ ಅವರಿಗೆ ಉಟ, ವಸತಿ ವ್ಯವಸ್ಥೆ ಮಾಡಲಾಗಿದೆ.
* ಭಾನುವಾರ ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ಒಂದು ತಂಡ ಬರುತ್ತಿದೆ.
* ಮಂಡ್ಯ, ಹಾರೋಹಳ್ಳಿ ಮೂಲದ 35 ಪ್ರವಾಸಿಗರ ತಂಡ ರಸ್ತೆ ಮಾರ್ಗವಾಗಿ ಭಾರತದ ಗೋರಖ್ ಪುರ ವನ್ನು ತಲುಪಿದ್ದಾರೆ.
* ಸೂರ್ಯಕಾಂತ್ ದಂಬಾಳ್ , 30 ಜನರ ತಂಡ ಭಾರತ ಗಡಿಭಾಗದತ್ತ ಮುಖ ಮಾಡಿದ್ದಾರೆ.

ಕರ್ನಾಟಕದ ವೈದ್ಯರ ತಂಡ ನೆರವು
ಇದೇ ವೇಳೆ ಭೂಕಂಪ ಪೀಡಿತ ನೇಪಾಳಕ್ಕೆ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದಾರೆ. ಅಗತ್ಯ ವಸ್ತು ಹಾಗೂ ಆಹಾರ ಸಾಮಾಗ್ರಿ ಪೂರೈಕೆಗೂ ಕ್ರಮ ಕೈಗೊಳ್ಳಲಾಗಿದೆ. ಸುಮಾರು 4 ಟನ್ ಗೂ ಅಧಿಕ ಆಹಾರ ಸಾಮಾಗ್ರಿಯನ್ನು ಭಾರತದಿಂದ ನೇಪಾಳಕ್ಕೆ ರವಾನಿಸಲಾಗಿದೆ.

ವಿವಿಧೆಡೆಗಳಿಂದ ನೇಪಾಳಕ್ಕೆ ತೆರಳಿದ್ದ ಪ್ರವಾಸಿಗರು
ನೇಪಾಳಕ್ಕೆ ತೆರಳಿರುವ ಮೈಸೂರಿನ ಮಂದಿ ಸುರಕ್ಷಿತವಾಗಿದ್ದಾರೆ. 20 ಜನರ ಪೈಕಿ 8 ಜನ ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ. ಶ್ರೀದುರ್ಗಾ, ಪುಷ್ಪಲತಾ, ನಾಗರಾಜು ಸೇರಿದಂತೆ ಒಂದೇ ಕುಟುಂಬದವರು ಪ್ರವಾಸಕ್ಕೆ ತೆರಳಿದ್ದರು.
ಅನೇಕ ಮಂದಿ ಪಶುಪತಿ ನಾಥನ ದೇಗುಲದಲ್ಲಿ ಆಶ್ರಯ ಪಡೆದಿದ್ದಕ್ಕೆ ಜೀವ ಉಳಿಯಿತು ಎಂದು ಪ್ರತಿಕ್ರಿಯಿಸಿದ್ದಾರೆ. ಪ್ರವಾಸಿಗರ ಪೈಕಿ ನಿವೃತ್ತರು, ವಯೋವೃದ್ಧರು, ಮಕ್ಕಳು ಅಧಿಕವಾಗಿದ್ದಾರೆ. ಈ ನಡುವೆ ಏವೆರೆಸ್ಟ್ ಪರ್ವರೋಹಣಕ್ಕೆ ತೆರಳಿರುವ ಕನ್ನಡಿಗ ಪ್ರದೀಪ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ

ಕನ್ನಡಿಗರಿಗೆ ಈ ಸಂಖ್ಯೆಗೆ ಕರೆ ಮಾಡಿ
ಕರ್ನಾಟಕ ಕಂಟ್ರೋಲ್ ರೂಮ್: 1070, 080- 2225 3707, 080- 2203 2582
ಕೆಎಸ್ ಸರೋಜಮ್ಮ, ಉಪ ಕಾರ್ಯದರ್ಶಿ, 94483 51194, 080- 2220 32995
ಇಮೇಲ್ : [email protected]
ಟ್ವಿಟ್ಟರ್: SEOC_Karnataka
ಕರ್ನಾಟಕ ಭವನ, ದೆಹಲಿ: ರಂಗಸ್ವಾಮಿ, 98683 93991
ಶಂಭುಲಿಂಗಪ್ಪ: 96683 93989
|
ನೇಪಾಳದಲ್ಲಿ ಸಿಲುಕಿರುವ 85 ಕನ್ನಡಿಗರು ಸುರಕ್ಷಿತ
ನೇಪಾಳದಲ್ಲಿ ಸಿಲುಕಿರುವ 85 ಕನ್ನಡಿಗರು ಸುರಕ್ಷಿತ ಎಂದು ಟ್ವೀಟ್ ಮಾಡಿದ ಕರ್ನಾಟಕ ಸರ್ಕಾರ
|
ನೇಪಾಳದಲ್ಲಿ ಕನ್ನಡಿಗರ ಪಟ್ಟಿ ಪ್ರಕಟ
ನೇಪಾಳಕ್ಕೆ ಪ್ರವಾಸ ತೆರಳಿರುವ ಕರ್ನಾಟಕ ಮೂಲದವರ ಪಟ್ಟಿ ಪ್ರಕಟಗೊಂಡಿದೆ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ












Click it and Unblock the Notifications