ಬೆಂಗಳೂರಿನ ಹರಟೆ ಮಲ್ಲರಿಂದ ಜಯನಗರದಲ್ಲಿ 'ನಮೋ ಹರಟೆ'
ಬೆಂಗಳೂರು, ಸೆಪ್ಟೆಂಬರ್ 29: ಹರಟೆ ಕಾರ್ಯಕ್ರಮದ ಮೂಲಕ ರಾಜ್ಯದ ಜನರಿಗೆ ಚಿರಪರಿಚಿತರಾಗಿರುವ ಹಿರೆಮಗಳೂರು ಕಣನ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ 'ನಮೋ ಹರಟೆ' ನಡೆಯಲಿದೆ.
ಸೆಪ್ಟೆಂಬರ್ 29ರಂದು ಸಂಜೆ 5 ಗಂಟೆಗೆ ಜಯನಗರ ಮೂರನೇ ಹಂತದ, ಎನ್ಎಂಕೆಆರ್ವಿ ಕಾಲೇಜಿನ ಮಂಗಳ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹಿರೇಮಗಳೂರು ಕಣ್ಣನ್ ಅವರ ಜೊತೆಗೆ ಶಕುಂತಲಾ ಐಯರ್, ಗಿರಿಧರ ಉಪಾಧ್ಯಾಯ, ಶ್ರೆಯಾಂಕ ರಾನಡೆ, ಅಕ್ಷತಾ ಭಾಜಪೆ ಅವರು ಇರಲಿದ್ದಾರೆ.

ನಮೋ ಭರತ್ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಪ್ರವೇಶ ಉಚಿತವಾಗಿದೆ. ನರೇಂದ್ರ ಮೋದಿ ಅವರ ಬಗ್ಗೆ ಸೃಜನಾತ್ಮಕ ಮಾತುಕತೆಗಳು ವೇದಿಕೆಯಲ್ಲಿ ನಡೆಯಲಿವೆ.
ಕನ್ನಡ ಪೂಜಾರಿ ಎಂದೇ ಕರೆಯಲಾಗುವ ಹಿರೇಮಗಳೂರು ಕಣ್ಣನ್ ಅವರು ತಮ್ಮ ಹಾಸ್ಯ ಮಿಶ್ರಿತ ವಿಡಂಬನೆಗಳಿಗೆ ಬಹು ಖ್ಯಾತರು. ಅವರ ಮಾತಿನಲ್ಲಿ ಮೋದಿ ಅವರ ವ್ಯಕ್ತಿತ್ವ, ಕಾರ್ಯಗಳು ಹೇಗೆ ಹೊಸ ರೂಪ ಪಡೆದುಕೊಳ್ಳುತ್ತವೆ ಎಂಬ ಕುತೂಹಲ ಇರುವವರು ಕಾರ್ಯಕ್ರಮಕ್ಕೆ ಭೇಟಿ ನೀಡಬೇಕು.












Click it and Unblock the Notifications