ನಮ್ಮ ಮೆಟ್ರೋಗೆ ಬೀಡಿ ಸಿಗರೇಟು ಕಳ್ಳರ ಕಾಟ !
ಬೆಂಗಳೂರು, ಫೆಬ್ರವರಿ 23: ಬೀಡಿ ಸಿಗರೇಟಿಗಾಗಿ ಕಬ್ಬಿಣ ಕದಿಯುವ ಕಳ್ಳರ ಕಾಟ ಕಾಟಕ್ಕೆ ನಮ್ಮ ಮೆಟ್ರೋ ಸಂಸ್ಥೆ ಹೈರಾಣಿ ಹೋಗಿದೆ. ಮೆಟ್ರೋ ಕಾಮಗಾರಿಗೆ ಹಾಕಿರುವ ಕಬ್ಬಿಣದ ಸಾಮಾನು ರಾತ್ರೋ ರಾತ್ರಿ ಖಾಲಿಯಾಗುತ್ತಿವೆ. ಬೌನ್ಸ್ ಬೈಕ್ ನಲ್ಲಿ ಬರುವ ಕಳ್ಳರು ನಮ್ಮ ಮೆಟ್ರೋ ಕಾಮಗಾರಿಗೆ ಹಾಕಿರುವ ಸಾಮಾನು ಕದ್ದು ಮಾರಾಟ ಮಾಡುತ್ತಿದ್ದಾರೆ. ಒಂದು ತಿಂಗಳಿಂದ ಈಚೆಗೆ ಬರೋಬ್ಬರಿ 23 ಲಕ್ಷ ರೂಪಾಯಿ ಮೌಲ್ಯದ ಮೆಟ್ರೋ ವಸ್ತುಗಳನ್ನು ಮಾಯ ಮಾಡಿದ್ದಾರೆ !
ಬೀಡಿ ಸಿಗರೇಟಿಗಾಗಿ ಕಬ್ಬಿಣದ ಉಪಕರಣ ಕದಿಯುವ ಕಳ್ಳರ ಕಾಟಕ್ಕೆ ಬೇಸತ್ತ ನಮ್ಮ ಮೆಟ್ರೋ ಸಂಸ್ಥೆ ಪೊಲೀಸರ ಮೊರೆ ಹೋಗಿದೆ. ಬೈಯಪ್ಪನಹಳ್ಳಿ, ಮಹದೇವಪುರ, ರಾಮಮೂರ್ತಿನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸರಣಿ ದೂರುಗಳನ್ನು ದಾಖಲಿಸಿದೆ. ವೈಟ್ ಫೀಲ್ಡ್ ನಮ್ಮ ಮೆಟ್ರೋ ಮಾರ್ಗ ನಿರ್ಮಾಣವಾಗುತ್ತಿದೆ. ಕಾರಣಾಂತರಗಳಿಂದ ಕಾಮಗಾರಿ ಮಂದ ಗತಿಯಲ್ಲಿ ಸಾಗುತ್ತಿದೆ.

ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಬ್ಬಿಣ ಕಳ್ಳರು ಸಿಕ್ಕ ಸಿಕ್ಕ ವಸ್ತುಗಳನ್ನು ಕದ್ದು ಮಾರಾಟ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಕುಡಿತಕ್ಕೆ, ಬೀಡಿ ಸಿಗರೇಟಿಗಾಗಿ ಕದಿಯುವ ಈ ಕಳ್ಳರು ಸತತವಾಗಿ ಕದ್ದು ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಮಾಯ ಮಾಡಿದ್ದಾರೆ.

ಮೆಟ್ರೋ ವಸ್ತುಗಳು ಕದ್ದಿರುವ ಬಗ್ಗೆ ಸಿಸಿಟಿವಿ ದೃಶ್ಯಗಳನ್ನು ಪಡೆದು ಪರಿಶೀಲಿಸಿದಾಗ, ರಾತ್ರಿ ವೇಳೆ ಕಳ್ಳರು ಬೌನ್ಸ್ ಬಾಡಿಗೆ ಬೈಕ್ ನಲ್ಲಿ ಬಂದು ಮೆಟ್ರೋ ಕಬ್ಬಿಣದ ಸಾಮಾನು ಕದಿಯುತ್ತಿರುವುದು ಗೊತ್ತಾಗಿದೆ. ಕೂಡಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ನಮ್ಮ ಮೆಟ್ರೋ ಸಂಸ್ಥೆ ಸಿಬ್ಬಂದಿ ದೂರು ನೀಡಿದ್ದಾರೆ. ಆದರೆ, ಕಳ್ಳರನ್ನು ಹಿಡಿಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ದೊಡ್ಡ ಕಳ್ಳರನ್ನು ಹಿಡಿಯಲಿಕ್ಕೆ ಪೊಲೀಸರಿಗೆ ಸಮಯವಿಲ್ಲ. ಇನ್ನು ಚಿಲ್ಲರೆ ಕಳ್ಳರನ್ನು ಹಿಡಿಯಲಿಕ್ಕೆ ಸಮಯ ಎಲ್ಲಿ. ಹೀಗಾಗಿ ಸಹಜವಾಗಿ ನಿರ್ಲಕ್ಷಿಸಿದ್ದಾರೆ. ಚಿಲ್ಲರೆ ಕಳ್ಳರ ಉಪಟಳಕ್ಕೆ ನಮ್ಮ ಮೆಟ್ರೋ ಸಂಸ್ಥೆ ಹೈರಾಣಿ ಹೋಗಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications