Bengaluru Rains : ಬೆಂಗಳೂರಿಗೆ ಇನ್ನೂ ಮೂರು ದಿನಗಳವರೆಗೆ ಜಿಟಿಜಿಟಿ ಮಳೆ

ಬೆಂಗಳೂರು, ಡಿಸೆಂಬರ್‌ 12: ಸೋಮವಾರ ಬೆಳಿಗ್ಗೆ 5.30 ಯಿಂದಲೇ ಜಿಟಿಜಿಟಿ ಮಳೆ ಬರುತ್ತಿದೆ. ವಾತಾವರಣದಲ್ಲಿ ಬಿಸಿಲು ಅವಿತುಕೊಂಡು ಜನರು ಮನೆಯಿಂದ ಬರಲು ಹಿಂದೇಟು ಹಾಕಿದರು. ಈ ಮಳೆ ಇನ್ನೂ ಮೂರು ದಿನಗಳವರೆಗೆ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.

ಐಎಂಡಿ ಪ್ರಕಾರ ಬೆಂಗಳೂರು ನಗರದಲ್ಲಿ ಭಾನುವಾರ ಸಂಜೆ 5. 30 ರವರೆಗೆ 52. 5 ಮೀಮೀ ಮಳೆ ಸುರಿದಿದೆ. ಮಾಂಡೌಸ್ ಚಂಡಮಾರುತದ ನಂತರದ ಪರಿಣಾಮಗಳು ಮುಂದುವರೆದಿದೆ. ಮುಂದಿನ ಎರಡು ದಿನಗಳ ಕಾಲ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಮತ್ತು ತಾಪಮಾನವು ಮತ್ತಷ್ಟು ಕಡಿಮೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಿನವಿಡೀ ಮಳೆ ಸುರಿದರೂ ಪ್ರವಾಹದ ವರದಿಯಾಗಿಲ್ಲ. ಆದರೆ, ಪೂರ್ವ ಬೆಂಗಳೂರಿನ ಪುಲಿಕೇಶಿನಗರದಲ್ಲಿ ಬೆಳಗ್ಗೆ ಮರ ಬಿದ್ದ ವರದಿಯಾಗಿದ್ದು, ಬಿಬಿಎಂಪಿ ತೆರವುಗೊಳಿಸಿದೆ. ಗರಿಷ್ಠ ತಾಪಮಾನ 21. 6 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ, 17. 8. ಮಳೆಯಿಂದಾಗಿ ಕೋಲಾರ ಜಿಲ್ಲೆಯಲ್ಲಿ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ಸೋಮವಾರ ರಜೆ ನೀಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಶಾಲೆಗಳಿಗೆ ಮಾತ್ರ ರಜೆ ನೀಡಲಾಗಿದೆ.

ಮಳೆಯೊಂದಿಗೆ ಚಳಿಯು ಬೆಂಗಳೂರಿನಲ್ಲೂ ಕರ್ನಾಟಕದ ಇತರ ಭಾಗಗಳಲ್ಲಿ ಆವರಿಸಿದೆ. ಹವಾಮಾನ ತಜ್ಞರು ಚಳಿಗಾಲ ಮುನ್ಸೂಚನೆಯ ಹೊರತಾಗಿಯೂ, ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ತೀವ್ರವಾದ ಶೀತ ಪರಿಸ್ಥಿತಿಗಳಿಗೆ ಸಾಕ್ಷಿಯಾಗುತ್ತಿವೆ. ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕನಿಷ್ಠ 3-4 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

ಮಂಜು ಚಳಿಯ ವಾತಾವರಣದ ಜೊತೆಗೆ ವಾಯುಮಟ್ಟಲ್ಲಿನ ಹಠಾತ್ ಕುಸಿತವು ಹೆಚ್ಚಿನ ಮಳೆಯ ಮುನ್ಸೂಚನೆಯನ್ನು ನೀಡಿದೆ ಎಂದು ವೈದ್ಯರು ಹೇಳಿದ್ದಾರೆ. ಹೆಚ್ಚುತ್ತಿರುವ ಗಾಳಿಯಿಂದ ಹರಡುವ ಸೋಂಕುಗಳು ಮತ್ತು ಉಸಿರಾಟದ ತೊಂದರೆಗಳು ಸಹ ಈ ಸಂದರ್ಭದಲ್ಲಿ ಕಂಡುಬರುತ್ತವೆ ಎಂದು ತಿಳಿಸಿದ್ದಾರೆ. ಈ ಶೀತ ಪರಿಸ್ಥಿತಿಗಳಲ್ಲಿ ಜನರು ತಮ್ಮನ್ನು ಬೆಚ್ಚಗಿರುವಂತೆ ಸೂಚಿಸಿದ್ದಾರೆ.

ದೀರ್ಘಕಾಲದ ಉಸಿರಾಟದ ಸಮಸ್ಯೆ

ದೀರ್ಘಕಾಲದ ಉಸಿರಾಟದ ಸಮಸ್ಯೆ

ನಗರದ ಆಸ್ಪತ್ರೆಗಳ ವೈದ್ಯರು ಸಾರ್ವಜನಿಕರು ಎರಡು ದಿನಗಳಿಗಿಂತ ಹೆಚ್ಚು ಕಾಲ ಜ್ವರ ರೋಗಲಕ್ಷಣಗಳನ್ನು ಹೊಂದಿದ್ದರೆ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ವೈದ್ಯರ ಪ್ರಕಾರ, ರೋಗ ನಿರ್ಣಯದಲ್ಲಿ ವಿಳಂಬ ಈ ತೊಡಕುಗಳನ್ನು ನ್ಯುಮೋನಿಯಾ ಅಥವಾ ದೀರ್ಘಕಾಲದ ಉಸಿರಾಟದ ಸಮಸ್ಯೆಗಳಾಗಿ ಪರಿವರ್ತಿಸಬಹುದು, ಇದು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು ಎಂದು ಹೇಳಿದರು.

ಬೆಂಗಳೂರು ನಗರದ 12.9 ಡಿಗ್ರಿ ಸೆಲ್ಸಿಯಸ್‌

ಬೆಂಗಳೂರು ನಗರದ 12.9 ಡಿಗ್ರಿ ಸೆಲ್ಸಿಯಸ್‌

ಬೆಂಗಳೂರಿನಲ್ಲಿ ಚಳಿಗಾಲದಲ್ಲಿ ಸಾಮಾನ್ಯ ಕನಿಷ್ಠ ತಾಪಮಾನವು ಸುಮಾರು 17ರಿಂದ 18 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕೆಲವು ದಿನಗಳ ಹಿಂದೆ ಬೆಂಗಳೂರು ನಗರದ ಕನಿಷ್ಠ ತಾಪಮಾನವು 12.9 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಇದು ನಿರಂತರವಾಗಿ 14-15 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಡಾ.ಎನ್.ಜಿ.ಕಾಂಚನ್, ಹಲವಾರು ರೋಗಿಗಳು ಬ್ರಾಂಕೈಟಿಸ್ ಮತ್ತು ಉಬ್ಬಸಕ್ಕೆ ಒಳಗಾಗುತ್ತಿದ್ದಾರೆ. ಒಂದು ವೇಳೆ ಗಂಟಲು ತುರಿಕೆ ಕಂಡುಬಂದರೆ ವೈದ್ಯರ ಬಳಿಗೆ ಹೋಗುವ ಮೊದಲು ಒಂದೆರಡು ದಿನ ಮಾತ್ರ ಭೇಟಿ ನೀಡುವುದು ಉತ್ತಮ ಎಂದು ಅವರು ಹೇಳಿದರು.

ಹೃದಯದ ಸಮಸ್ಯೆಗಳಿರುವವರು ಜಾಗರೂಕರಾಗಿರಿ

ಹೃದಯದ ಸಮಸ್ಯೆಗಳಿರುವವರು ಜಾಗರೂಕರಾಗಿರಿ

ಹಿರಿಯ ಸಮಾಲೋಚಕ ವೈದ್ಯ ಡಾ.ಮಹೇಶ್ ಕುಮಾರ್ ಅವರು 8ರಿಂದ 10 ರೋಗಿಗಳು ನ್ಯುಮೋನಿಯಾಕ್ಕೆ ದಾಖಲಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಮಧುಮೇಹ ಮತ್ತು ಹೃದಯದ ಸಮಸ್ಯೆಗಳಿರುವವರು ಹೆಚ್ಚು ದುರ್ಬಲರಾಗಿದ್ದಾರೆ. ಕೆಮ್ಮಿನಿಂದ ಅವರು ಸುರಕ್ಷಿತರಾಗುವಂತೆ ಅವರಿಗೆ ಸೂಚನೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಯಸ್ಸಾದವರಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣ

ವಯಸ್ಸಾದವರಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣ

ಮಕ್ಕಳು ತಮ್ಮ ಶಾಲಾ ಸಹಪಾಠಿಗಳಿಂದ ಕೆಮ್ಮು ಅಥವಾ ನೆಗಡಿಯಿಂದ ಬಳಲುತ್ತಿದ್ದಾರೆ. ಮನೆಯಲ್ಲಿಯೇ ಜ್ವರ ಹರಡುವ ವಯಸ್ಸಾದವರಲ್ಲಿ ರೋಗನಿರೋಧಕ ಶಕ್ತಿಯ ಮಟ್ಟವು ಕ್ಷೀಣವಾಗಿ ಕ್ಷಿಪ್ರವಾಗಿ ಸೋಂಕು ಹರಡುವ ಸಾಧ್ಯತೆಯಿದೆ. ಆದ್ದರಿಂದ ವೈದ್ಯರು ಜನರನ್ನು ಜಾಗರೂಕರಾಗಿರಲು ಇತರ ಆರೋಗ್ಯ ಸಮಸ್ಯೆಗಳಿಂದ ಜಾಗರೂಕವಾಗಿರುವಂತೆ ಸೂಚನೆ ನೀಡಲಾಗಿದೆ. ಕಿವಿ ಮತ್ತು ತಲೆಯನ್ನು ಸಾಕಷ್ಟು ಬೆಚ್ಚಗೆ ಇರಿಸಿ ಎಂದು ಸ್ಪರ್ಶ್ ಆಸ್ಪತ್ರೆಯ ಸಲಹೆಗಾರ ವೈದ್ಯ ಡಾ.ಲೋರೈನ್ ಡಯಾಸ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+