ಮನೆ ಪೂಜೆಗಾಗಿ ಪೂಜಾರಿ ಹುಡುಕಲು ಬಂತು ಮೊಬೈಲ್ ಆ್ಯಪ್
ಬೆಂಗಳೂರು, ಅಕ್ಟೋಬರ್ 29: ಈವರೆಗೆ ದೇವರ ದರ್ಶನಕ್ಕೆ ಆನ್ಲೈನ್ ಟಿಕೆಟ್ ಬುಕ್ ಮಾಡಿಸುವ ಪದ್ಧತಿ ಇರುವುದು ಎಲ್ಲರಿಗೂ ಗೊತ್ತು, ಇನ್ನುಮುಂದೆ ಮನೆಯಲ್ಲಿ ನಡೆಯುವ ಶುಭ ಕಾರ್ಯಗಳು, ಧಾರ್ಮಿಕ ಆಚರಣೆಗೆ ಬೇಕಾಗುವ ಪೂಜಾರಿಗಳು ಆನ್ಲೈನ್ ಮೂಲಕ ಕರೆದರೆ ಮನೆ ಬಾಗಿಲಿಗೆ ಬರುವ ಹೊಸ ಸೇವೆಯೊಂದು ಬೆಂಗಳೂರಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಎಕ್ಸಲೆಂಟ್ ಎಂಜಿನಿಯರಿಂಗ್ ಅಂಡ್ ಕಾರ್ಪೊರೇಟ್ ಸರ್ವೀಸಸ್ ಎಂಬ ಸಂಸ್ಥೆಯು ಮನೆಬಾಗಿಲಿಗೆ ಪೂಜಾರಿಗಳ್ನು ಕಳುಹಿಸಿಕೊಡಲು ಆನ್ಲೈನ್ ಪೋರ್ಟಲ್ ಹಾಗೂ ಮೊಬೈಲ್ ಅಪ್ಲಿಕೇಷನ್ ಸೇವೆ 'ಪೂಜಾರಿ ಸರ್ವೀಸಸ್' ಅಕ್ಟೋಬರ್ 29ರಂದು ಪರಿಚಯಿಸುತ್ತಿವೆ.
ನ್ನಮುಂದೆ ಯಾವುದೇ ಧಾರ್ಮಿಕ ಕಾರ್ಯಕ್ರಮ ಹಾಗೂ ಶುಭಾರಂಭಗಳಿಗೆ ಪೂಜಾರಿಗಳು ಬೇಕಾದರೆ ಅಲೆದಾಡಿ ಹುಡುಕುವ ಬದಲು ಮೊಬೈಲ್ ಅಪ್ಲಿಕೇಷನ್ ನಲ್ಲಿ ಸರ್ಚ್ ಮಾಡಿ ತಮಗೆ ಬೇಕಾದ ಪೂಜಾರಿಗಳನ್ನು ಮನೆಗೆ ಆಹ್ವಾನಿಸಬಹುದು. ಅದಕ್ಕಾಗಿ ಸಾಕಷ್ಟು ಮೊದಲೇ ಬುಕಿಂಗ್ ಮಾಡಿಕೊಳ್ಳಬಹುದು. ಬುಕಿಂಗ್ ಸಾಧ್ಯವಾಗದಿದ್ದರೆ ಆನ್ಲೈನ್ ಬುಕಿಂಗ್ ಮಾಡಿಕೊಳ್ಳಬಹುದು. ಬೆಂಗಳೂರಿನ ವಿವಿಧೆಡೆ ಲಭ್ಯವಿರುವ ಪೂಜಾರಿಗಳ ವಿವರಗಳನ್ನು ಪಡೆಯಬಹುದಾಗಿದೆ.

ಮನೆಯ ಗೃಹಪ್ರವೇಶ, ಮದುವೆ, ನಾಮಕರಣ, ಉಪನಯನ, ಸತ್ಯನಾರಾಯಣ ಕತೆ ಏನೇ ಶುಭ ಕಾರ್ಯಗಳಿರಲಿ ಸುಲಭವಾಗಿ ಪೂಜಾರಿಗಳನ್ನು ಹುಡುಕಬಹುದಾಗಿದೆ. ಹಳ್ಳಿಗಳಲ್ಲಾದರೆ ಮನೆಯ ಪುರೋಹಿತರು ಇರುತ್ತಾರೆ, ಅಥವಾ ಪರಿಚಯಸ್ತರಿರುತ್ತಾರೆ ಆದರೆ ಬೆಂಗಳೂರಲ್ಲಿ ಪೂಜಾರಿಗಳನ್ನು ಎಲ್ಲಿ ಅಂತಾ ಹುಡುಕೋದು ಎನ್ನುವುದು ಹಲವು ಮಂದಿಯ ಬೇಜಾರದ ಮಾತಾಗಿತ್ತು. ಕೆಲವೊಂದು ಸಲ ಕಾರ್ಯಕ್ಕೆ ಒಪ್ಪಿಕೊಂಡು ಬಳಿಕ ನಾಳೆ ಬೇರೆಡೆ ಕಾರ್ಯಕ್ರಮವಿದೆ ಎಂದು ಕೈಕೊಡುತ್ತಿದ್ದರು. ಆದರೆ ಇನ್ನುಮುಂದೆ ಹಾಗಾಗುವುದಿಲ್ಲ.
ಆಯಾ ಪ್ರದೇಶಕ್ಕೆ ಅನುಸಾರವಾಗಿ ಹತ್ತಿರದಲ್ಲಿರುವ ಪೂಜಾರಿಗಳನ್ನು ಭಕ್ತರು ಆಯ್ಕೆ ಮಾಡಿಕೊಳ್ಳಬಹುದು, ಪೂರ್ವ ನಿಗದಿತ ದಿನಾಂಕ ಹಾಗೂ ಮಾಹಿತಿ ಹಂಚಿಕೊಂಡರೆ ಪೋರ್ಟಲ್ ಸರ್ವೀಸ್ ಮೂಲಕವೇ ಮಾಹಿತಿ ಲಭ್ಯವಾಗಲಿದೆ.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಪ್ಲಿಕೇಷನ್ ಲೋಕಾರ್ಪಣೆಗೊಳಿಸಲಿದ್ದಾರೆ. ಹಿರಿಯ ನಟಿ ತಾರಾ ಅನುರಾಧ ಕಾರ್ಯಕ್ರಮಕ್ಕೆ ಮುಖ್ಯ ಅರ್ತಿಗಳಾಗಿ ಆಗಮಿಸಲಿದ್ದಾರೆ. ಶಾರದಾ ಸ್ತ್ರೀ ಸಮಾಜದಲ್ಲಿ ಕಾರ್ಯಕ್ರಮ ನಡೆಯಲಿದೆ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications