Get Updates
Get notified of breaking news, exclusive insights, and must-see stories!

ವಿಜಯ ಕುಮಾರ್ ಹಠಾತ್ ನಿಧನಕ್ಕೆ ಭಾವುಕರಾದ ಅಭಿಮಾನಿಗಳು

ಬೆಂಗಳೂರು, ಮೇ 04: ಯಾವ ವಿವಾದವನ್ನೂ ತಮ್ಮ ಮೇಲೆ ಎಳೆದುಕೊಳ್ಳದ, ಯಾರಿಗೂ ಕೇಡು ಬಯಸದ ಸರಳ, ಸಜ್ಜನ ರಾಜಕಾರಣಿ ಬಿ ಎನ್ ವಿಜಯ ಕುಮಾರ್.

60 ವರ್ಷ ಎಂದರೆ ಸಾಯುವ ವಯಸ್ಸೇನಲ್ಲ. ಆದರೆ ಚುನಾವಣೆಯ ಹೊತ್ತಿನ ದಣಿವರಿಯದ ಕೆಲಸ, ಪರಿಶ್ರಮದಿಂದ ಅವರು ಹೃದಯಾಘಾತದಿಂದ ಮೃತರಾಗಿದ್ದಾರೆ. ಈ ಮೊದಲೇ ಅವರಿಗೆ ಸ್ಟೆಂಟ್ ಅಳವಡಿಸಲಾಗಿತ್ತು. ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದರೂ, ಜಯನಗರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ವಿಜಯಕುಮಾರ್ ನಿರಂತರ ಪ್ರಚಾರದಲ್ಲಿ ತೊಡಗಿದ್ದರು.

ಜನಾನುರಾಗಿ ನಾಯಕ ಎನ್ನಿಸಿಕೊಂಡಿದ್ದ ವಿಜಯ ಕುಮಾರ್ ಅವರ ಅಕಾಲಿಕ ನಿಧನಕ್ಕೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರ ಈ ಸಂತಾಪ, ಶಾಸಕರು ಜನಮನದಲ್ಲಿ ಗಳಿಸಿದ್ದ ಸ್ಥಾನ ಯಾವುದು ಎಂಬುದನ್ನು ತೋರಿಸಿಕೊಟ್ಟಿದೆ.

ಚಿತ್ರಗಳಲ್ಲಿ: ಸಜ್ಜನ ರಾಜಕಾರಣಿ ವಿಜಯಕುಮಾರ್ ಗೆ ಅಂತಿಮ ನಮನ

ಗುರುವಾರ ಚುನಾವಣಾ ಪ್ರಚಾರ ನಡೆಸುತ್ತಿದ್ದ ಜಯನಗರ ಕ್ಷೇತ್ರದ ಹಾಲಿ ಶಾಸಕ ಮತ್ತು ಬಿಜೆಪಿ ಅಭ್ಯರ್ಥಿ ಬಿ ಎನ್ ವಿಜಯ ಕುಮಾರ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಹೃದಯಾಘಾತದಿಂದ ಕುಸಿದು ಬಿದ್ದ ಅವರನ್ನು ತಕ್ಷಣವೇ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗಿನ ಜಾವ 1 ಗಂಟೆಗೆ ನಿಧನರಾದರು.

Array

ಸ್ವಚ್ಛ ರಾಜಕೀಯದ ದಂತಕತೆ

ಶುದ್ಧ ರಾಜಕಾರಣದ ದಂತಕತೆಯಾಗಿದ್ದ ಬಿ ಎನ್ ವಿಜಯಕುಮಾರ್ ಸರಳ ವ್ಯಕ್ತಿ. ಎಂಟು ವರ್ಷದ ಹಿಂದೆ ನಾನು ಅವರಿಗೆ ಕರೆ ಮಾಡಿದ್ದೆ. ಆಗ ಅವರು ಫೋನ್ ತೆಗೆದುಕೊಂಡಿರಲಿಲ್ಲ. ಆದರೆ ಮಿಸ್ಡ್ ಕಾಲ್ ನೋಡಿ ಅವರೇ ಹಿಂತಿರುಗಿ ಫೋನಾಯಿಸಿದ್ದರು. ಭಾರತಕ್ಕೆ ಇಂಥ ವಿಧೇಯ ರಾಜಕಾರಣಿಗಳು ಹೆಚ್ಚು ಹೆಚ್ಚು ಬೇಕಾಗಿದೆ. ಓಂ ಶಾಂತಿ ಎಂದಿದ್ದಾರೆ ನರೇಂದ್ರ ಮೂರ್ತಿ ಎಂಬುವವರು.

ಜನ ಮೆಚ್ಚಿದ ನಾಯಕ

ಬೆಂಗಳೂರಿನ ಸರಳ, ಆತ್ಮೀಯ ರಾಜಕಾರಣಿಗಳಲ್ಲಿ ಅತೀ ಹೆಚ್ಚು ಜನ ಮೆಚ್ಚುಗೆ ಗಳಿಸಿದವರು ಬಿ ಎನ್ ವಿಜಯಕುಮಾರ್. ಜಯನಗರದಿಂದ ಎರಡು ಭಾರಿ ಶಾಸಕರಾಗಿದ್ದ ವಿಜಯ ಕುಮಾರ್ ಇಂದು ಬೆಳಿಗ್ಗೆ ನಿಧನರಾದರು. ಇದು ಬಿಜೆಪಿಗೆ ಅತೀ ದೊಡ್ಡ ನಷ್ಟ. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಸರ್ ಎಂದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ ರಾಘು.

ಅವರು ಶಾಸಕ ಎಂದು ಅನ್ನಿಸುತ್ತಲೇ ಇರಲಿಲ್ಲ

ವಿಜಯ ಕುಮಾರ್ ಅವರ ಅಗಲಿಕೆ ನಿಜಕ್ಕೂ ಬಹಳ ಬೇಸರವನ್ನುಂಟು ಮಾಡಿದೆ. ಅವರೊಬ್ಬ ಪ್ರಾಮಾಣಿಕ, ಉತ್ತಮ ಶಾಸಕ. ಅವರನ್ನು ನಾನು ಹಲವು ಬಾರಿ ಭೇಟಿಯಾಗಿದ್ದೇನೆ, ಮಾತನಾಡಿದ್ದೇನೆ. ಆದರೆ ಅವರೊಂದಿಗೆ ಮಾತನಾಡುವಾಗ ಎಂದಿಗೂ, ನಾನೊಬ್ಬ ಶಾಸಕರೊಂದಿಗೆ ಮಾತನಾಡುತ್ತಿದ್ದೇನೆ ಎನ್ನಿಸುತ್ತಲೇ ಇರಲಿಲ್ಲ. ಅವರು ನಮ್ಮ ನೆರೆ ಮನೆಯ ಅಂಕಲ್ ಎಂಬಷ್ಟೇ ಆತ್ಮೀಯತೆಯಿಂದ ಮಾತನಾಡುತ್ತಿದ್ದರು ಎಂದು ಅವರೊಡನೆ ಒಡನಾಡಿದ ಅನುಭವವನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ.

ಜನರ ಶಾಸಕರನ್ನು ಕಳೆದುಕೊಂಡಿದ್ದೇವೆ!

ನಿಜಕ್ಕೂ ಅತ್ಯಂತ ನೋವಿನ ಸಂಗತಿ. ನಾವು ಒಬ್ಬ ವಿದೇಯ, ಪ್ರಾಮಾಣಿಕ ಮತ್ತು ಜನರ ಶಾಸಕರನ್ನು ಕಳೆದುಕೊಂಡಿದ್ದೇವೆ ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ ಅಶ್ವಿನ್ ಕಣ್ಣನ್.

ದೇವರಂಥ ವ್ಯಕ್ತಿ

ಭಾರತೀಯ ರಾಜಕಾರಣದಲ್ಲಿ ನನಗೆ ತಿಳಿದ ದೇವರಂಥ ಶುದ್ಧ ವ್ಯಕ್ತಿ ಎಂದರೆ ವಿಜಯ ಕುಮಾರ್. ಅವರು ಪ್ರತಿಯೊಬ್ಬರಿಗೂ ಅಪರಿಮಿತ, ನಿಸ್ವಾರ್ಥ ಪ್ರೀತಿ ತ್ತು ಸೇವೆ ಸಲ್ಲಿಸಿದವರು. ಜೀವನದುದ್ದಕ್ಕೂ ಅವರು ಹಾಗೆಯೇ ಬದುಕಿದರು. ಭಾರತ ಒಬ್ಬ ಒಳ್ಳೆಯ ಮಗನನ್ನು ಕಳೆದುಕೊಂಡಿದೆ ಎಂದಿದ್ದಾರೆ ವರಾ ಕುಮಾರ್.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+