ಬೆಂಗಳೂರಿನ ಈ ಮೂರು ಪ್ರದೇಶಗಳಲ್ಲಿ ನಿರ್ಮಾಣ ಆಗಲಿವೆ ಪ್ರಮುಖ ಸಾರಿಗೆ ಹಬ್, ಇದರಿಂದ ಎಷ್ಟೆಲ್ಲ ಉಪಯೋಗವಾಗಲಿದೆ ಗೊತ್ತಾ?
ಬೆಂಗಳೂರು, ಜನವರಿ, 10: ಸಾರಿಗೆ ವಿಭಾಗದಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ನಗರ ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗುತ್ತಲೇ ಇದೆ. ಇದೀಗ ಈ ಮೂರು ಸ್ಥಳಗಳಲ್ಲಿ ಪ್ರಮುಖ ಸಾರಿಗೆ ಹಬ್ಗಳು ನಿರ್ಮಾಣ ಆಗಲಿವೆ. ಹಾಗಾದರೆ ಇದರಿಂದ ಏನೆಲ್ಲ ಉಪಯೋಗಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸಾಮಾನ್ಯವಾಗಿ ಊರುಗಳಿಂದ, ಹಾಗೂ ನಗರದ ಬೇರೆ ಬೇರೆ ಸ್ಥಳಗಳಿಗೆ ಸುಲಭವಾಗಿ ತಲುಪಬೇಕೆಂದರೆ ಮೆಜೆಸ್ಟಿಕ್ಗೆ ಬರಬೇಕಿತ್ತು. ಇದರಂದ ವಾಹನ ದಟ್ಟಣೆ ಅಲ್ಲದೆ ಜನರ ದಟ್ಟಣೆ ಕೂಡ ಆಗಲಿದೆ. ಇದೀಗ ಬೈಯಪ್ಪನಹಳ್ಳಿ, ಹೆಬ್ಬಾಳ ಮತ್ತು ಯಶವಂತಪುರ ಪ್ರಮುಖ ಸಾರಿಗೆ ಹಬ್ ಆಗಿ ರೂಪುಗೊಳ್ಳಲಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಮೆಜೆಸ್ಟಿಕ್ ನಿಲ್ದಾಣದ ಒತ್ತಡ ಕಡಿಮೆ ಆಗುವ ಸಾಧ್ಯತೆಯಿದೆ.

ಈಗಾಗಲೇ ಭಾರೀ ಟ್ರಾಫಿಕ್ ಜಾಮ್ನಿಂದ ಈ ಜಂಕ್ಷನ್ಗಳು ತುಂಬಿ ತುಳುಕುತ್ತಿವೆ. 2027-28ರ ಅವಧಿಯಲ್ಲಿ ನಗರದ ಅತಿಹೆಚ್ಚು ವಾಹನ ನಿಬಿಡ ಪ್ರದೇಶಗಳಲ್ಲಿ ಈ ನಿಲ್ದಾಣಗಳು ಸಿದ್ಧವಾಗಲಿವೆ. ಸದ್ಯ ಮೆಜೆಸ್ಟಿಕ್ನಿಂದ ಮಾತ್ರ ನಗರದ ಎಲ್ಲಾ ಭಾಗಗಳಿಗೂ ಸಾರಿಗೆ ಸಂಪರ್ಕ ಇರುವುದರಿಂದ ಎಲ್ಲರೂ ಮೆಜೆಸ್ಟಿಕ್ ಮೇಲೆ ಅವಲಂಬಿತರಾಗಿದ್ದಾರೆ. ಈ ಸಮಸ್ಯೆ 4-5 ವರ್ಷಗಳಲ್ಲಿ ಬಗೆಹರಿಯುವ ಸಾಧ್ಯತೆಯಿದೆ.
ಉಪನಗರ ರೈಲು ಯೋಜನೆಯಲ್ಲಿ ಬೈಯಪ್ಪನಹಳ್ಳಿ ಪ್ರಮುಖ ಮಾರ್ಗ ಬದಲಾವಣೆ ನಿಲ್ದಾಣವಾಗಿದೆ. ಈ ನಿಲ್ದಾಣದಲ್ಲಿ ಮೂರು ಮಾರ್ಗಗಳು ಕೂಡಲಿವೆ. ಈ ನಿಲ್ದಾಣದ ಮೂಲಕ ಕಾರಿಡಾರ್ 2 (ಮಲ್ಲಿಗೆ) ಬೈಯಪ್ಪನಹಳ್ಳಿ-ಚಿಕ್ಕಬಾಣಾವರ, ಕಾರಿಡಾರ್ 3 (ಪಾರಿಜಾತ) ಕೆಂಗೇರಿ-ಬೈಯಪ್ಪನಹಳ್ಳಿ ಹಾಗೂ ಕಾರಿಡಾರ್ 4 (ಕನಕ) ಹೀಲಲಿಗೆ - ರಾಜಾನುಕುಂಟೆ ಮಾರ್ಗದ ಕಡೆಗೆ ಸಂಪರ್ಕ ಪಡೆಯಬಹುದು.
ಇದೇ ಮಾರ್ಗದಲ್ಲಿ ಚಲ್ಲಘಟ್ಟ -ವೈಟ್ಫೀಲ್ಡ್ ನಡುವಿನ ನಮ್ಮ ಮೆಟ್ರೋ ನೇರಳೆ ಮಾರ್ಗದ ಸಂಪರ್ಕವಿದೆ. ನೈಋುತ್ಯ ರೈಲ್ವೆ ಹಾಗೂ ಬಸ್ ನಿಲ್ದಾಣ ಸಂಪರ್ಕ ಕೊಂಡಿ ಕೂಡ ಆಗಿದ್ದು, ಈ ನಿಲ್ದಾಣದ ಮೂಲಕ ಬೆಂಗಳೂರು ನಗರ ಪ್ರವೇಶ ಸುಲಭ ಆಗಲಿದೆ.
ಹೆಬ್ಬಾಳ: ಹೆಬ್ಬಾಳ ಮೇಲ್ಸೇತುವೆಯನ್ನು ಮಲ್ಟಿ ಮಾಡೆಲ್ ಇಂಟಿಗ್ರೇಷನ್ ಸಾರಿಗೆ ಕೇಂದ್ರವನ್ನಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ಒಂದೇ ಜಂಕ್ಷನ್ನಲ್ಲಿ ಒಂದು ಉಪನಗರ ರೈಲು ನಿಲ್ದಾಣ ಮತ್ತು ಮೂರು ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸುವ ಯೋಜನೆಗೆ ತಯಾರಿ ನಡೆಯುತ್ತಿದೆ. ನೀಲಿ ಮಾರ್ಗದ ಅಡಿಯಲ್ಲಿ ಬಿಎಂಆರ್ಸಿಎಲ್, ಬಿಎಂಟಿಸಿ ಡಿಪೋ ಬಳಿ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡುತ್ತಿದೆ.
ಜೆಪಿ ನಗರ 4ನೇ ಹಂತದ ಮಾರ್ಗ ಹಾಗೂ ಸರ್ಜಾಪುರ-ಹೆಬ್ಬಾಳ ಮೆಟ್ರೋ ಕಾರಿಡಾರ್ ಯೋಜನಾ ಹಂತದಲ್ಲಿದೆ. ಉಪನಗರ ರೈಲು ನಿಲ್ದಾಣಗಳ (ಮಲ್ಲಿಗೆ ಮಾರ್ಗ) ಕಾಮಗಾರಿ ಪ್ರಗತಿಯಲ್ಲಿ ಇದೆ. ಮೆಟ್ರೋ, ಉಪನಗರ ರೈಲು ಮತ್ತು ಬಿಎಂಟಿಸಿ ಸಾರಿಗೆ ಸಂಪರ್ಕವನ್ನು ಜಂಕ್ಷನ್ನಲ್ಲಿ ಸಂಯೋಜಿಸಲಾಗುತ್ತದೆ. ಪಾದಚಾರಿ ಮೇಲ್ಸೇತುವೆಗಳ ಮೂಲಕ ಎಲ್ಲಾ ನಿಲ್ದಾಣಗಳನ್ನು ಸಂಪರ್ಕಿಸುವ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಲಾಗುತ್ತಿದೆ.
ಯಶವಂತಪುರ: ತುಮಕೂರು ರಸ್ತೆ ಕಡೆಯಿಂದ ನಗರ ಪ್ರವೇಶಿಸುವವರಿಗೆ ಯಶವಂತಪುರ ಪ್ರಮುಖ ನಿಲ್ದಾಣವಾಗಿದೆ. ಉಪನಗರ ರೈಲ್ವೆ ಯೋಜನೆ ಎರಡು ನಿಲ್ದಾಣಗಳು (ಮಲ್ಲಿಗೆ ಮತ್ತು ಸಂಪಗಿ) ಇಲ್ಲಿ ನಿರ್ಮಾಣ ಆಗಲಿವೆ. ಇವುಗಳ ಜೊತೆಗೆ ಈಗಾಗಲೇ ನೈಋುತ್ಯ ರೈಲ್ವೆ ನಿಲ್ದಾಣಕ್ಕೆ ಮೆಟ್ರೋ ನಿಲ್ದಾಣದ ಮೂಲಕ (ಹಸಿರು ಮಾರ್ಗ) ಸಂಪರ್ಕ ಕಲ್ಪಿಸಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಬಸ್ ಸಂಪರ್ಕ ಕೂಡ ಇಲ್ಲಿ ಇರಲಿವೆ.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications