ಲಾಲ್ಬಾಗ್ನಲ್ಲಿ ರಾಜ್ ಕುಮಾರ್ 'ಅಪ್ಪು'ಗೆಯ ಅದ್ಭುತ ಪುಷ್ಪ ದೃಶ್ಯ ವೈಭವ
ಬೆಂಗಳೂರು, ಆಗಸ್ಟ್ 05: ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಡಾ. ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ರ ವೈಭೋಗ ಮೇಳೈಸಿದೆ. ಪ್ರದರ್ಶನವನ್ನು ಪುನೀತ್ ಬಾಲ್ಯದಿಂದ ಸಾಧನೆಯ ಹಾದಿಯವರಿಗೂ ಜನರ ಮನಸ್ಸನ್ನು ಸೂರೆ ಮಾಡವ ರೀತಿಯಲ್ಲಿ ವೈಭವಯುತವಾಗಿ ಆಯೋಜಿಸಲಾಗಿದೆ. ಸ್ವಾತಂತ್ರ್ಯೋತ್ಸವ ಸಮಯದಲ್ಲಿನ ಪುನೀತ್ ಪುಷ್ಪೋತ್ಸವದಲ್ಲಿ ಏನಿದೆ? ಎನ್ನೋದರ ಬಗ್ಗೆ ವಿಶೇಷ ವರದಿ ಒನ್ಇಂಡಿಯಾ ಕನ್ನಡದಲ್ಲಿ.
ಗಾಜಿನ ಮನೆಯಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ಡಾ. ರಾಜ್ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಪುಷ್ಪ ವೈಭವವನ್ನು ಕಾಣಬಹುದಾಗಿದೆ. 212ನೇ ಫಲಪುಷ್ಪ ಪ್ರದರ್ಶನವನ್ನು ಬಹಳ ವಿಶಿಷ್ಟವಾಗಿ ಆಯೋಜನೆಯನ್ನು ಮಾಡಲಾಗಿದೆ. ಗಾಜಿನ ಮನೆಯ ಸುತ್ತಲು ಪುನೀತ್ ಮತ್ತು ಡಾ. ರಾಜ್ ಕುಮಾರ್ರ ಫೋಟೋಗಳನ್ನು ಕಾಣಬಹುದಾಗಿದೆ.
ಗಾಜಿನ ಮನೆಯ ಮುಖ್ಯದ್ವಾರದ ಎಡಭಾಗದಲ್ಲಿ ಪುನೀತ್ ರಾಜ್ಕುಮಾರ್ ಮತ್ತು ಬಲಬದಿಯಲ್ಲಿ ಡಾ. ರಾಜ್ ಕುಮಾರ್ರ ಚಿನ್ನದ ಬಣ್ಣದ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವ ಜನರು ಇಬ್ಬರಿಗೂ ನಮನನ್ನು ಅರ್ಪಿಸಿ ಮುಂದೆ ನಡೆದರೆ ಪುಷ್ಪಾಲಂಕಾರವನ್ನು ನೋಡಿ, ಕಣ್ತುಂಬಿಕೊಳ್ಳಬುದಾಗಿದೆ.

ಮಯೂರನಾಗಿ ನಿಂತ ರಾಜ್, ರಾಜಕುಮಾರನಾದ ಅಪ್ಪು
ಗಾಜಿನ ಮನೆಯನ್ನು ಎಂಟ್ರಿಯಾಗುತ್ತಿದ್ದಂತೆ ಅಪ್ಪ ರಾಜ್ಕುಮಾರ್ ಮತ್ತು ಮಗ ಪುನೀತ್ ರಾಜ್ಕುಮಾರ್ ಚಿಕ್ಕದಾದ ಪುತ್ಥಳಿಗಳು ಹೂವಿನ ಅಲಂಕಾರದೊಂದಿಗೆ ನೋಡುಗರನ್ನು ಆಕರ್ಷಿಸುತ್ತವೆ. ಹಾಗೆಯೇ ದೃಷ್ಟಿಯನ್ನು ಹಾಯಿಸಿದರೇ ಮಯೂರನಾಗಿದ್ದ ರಾಜ್ ಕುಮಾರ್ ಪುತ್ಥಳಿ ಎದುರಾಗುತ್ತದೆ. ಇನ್ನೊಂದು ಬದಿಯಲ್ಲಿ ರಾಜಕುಮಾರ ಸಿನಿಮಾದಲ್ಲಿನ ರಾಜನಂತೆ ಪುನೀತ್ ರಾಜ್ ಕುಮಾರ್ ಹೆಜ್ಜೆ ಹಾಕುತ್ತಿರುವ ಪುತ್ಥಳಿ ಜನರನ್ನು ಸೂರೆಗೊಳ್ಳಲಿದೆ.

ಅಪ್ಪ ಅಮ್ಮನ ಮಡಿಲಲ್ಲಿ ಪುನೀತ್ ರಾಜವೈಭೋಗ
ಡಾ. ರಾಜ್ ಕುಮಾರ್ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲಾ ರೀತಿಯ ಪಾತ್ರಗಳಿಗೆ ಬಣ್ಣ ಹಚ್ಚಿದ ಮೇರು ನಟ. ಇವರ ಶ್ರೀ ಕೃಷ್ಣದೇವರಾಯ ಕುಳಿತುಕೊಳ್ಳವ ಶೈಲಿ. ಸುತ್ತಲು ಇರುವ ಹೂವಿನ ಅಲಂಕಾರ ಇವೆಲ್ಲವೂ ಜನರನ್ನು ಮೂಕವಿಸ್ಮಿತರಾಗಿ ನೋಡುವಂತೆ ಮಾಡಿದೆ. ಇನ್ನು ಅಪ್ಪ ಅಮ್ಮನ ಮಡಿಲಲ್ಲಿ ಮುದ್ದು ರಾಜಕುಮಾರ ಪುನೀತ್ ಇರುವುದು ಜನರನ್ನು ಇಷ್ಟ ಪಡುವಂತೆ ಮಾಡುತ್ತದೆ. ಈ ಮೂವರು ಇಹಲೋಕವನ್ನು ತ್ಯಜಿಸಿರುವುದರಿಂದ ಒಟ್ಟಿಗೆ ಈ ಪುತ್ಥಳಿಯನ್ನು ನೋಡಿದಾಗ ಜನರ ಕಣ್ಣುಗಳು ತುಂಬಿ ಬರುತ್ತವೆ.

ಭಕ್ತ ಪ್ರಹ್ಲಾದದ ದೃಶ್ಯ ವೈಭೋಗ
ಡಾ. ರಾಜ್ಕುಮಾರ್ ಮತ್ತು ನಿವೃತ್ತ ಐಪಿಎಸ್ ಕೆಂಪಯ್ಯ ನೇತೃತ್ವದಲ್ಲಿ ಸ್ಥಾಪಿತವಾದ ಶಕ್ತಿಧಾಮ ಮಹಿಳೆಯರ, ಮಕ್ಕಳ ಏಳಿಗೆಗೆ ದುಡಿಯುತ್ತಿದೆ. ಈ ಶಕ್ತಿಧಾಮಕ್ಕೆ ಪುನೀತ್ ವಿಶೇಷ ಕೊಡುಗೆಯನ್ನು ನೀಡಿ ನಡೆಸಿಕೊಂಡು ಬಂದಿದ್ದರು. ಶಕ್ತಿಧಾಮವನ್ನು ಪುಷ್ಪದಲ್ಲೂ ನಿರ್ಮಾಣ ಮಾಡಿ ಅದರ ಮುಂದೆ ಪುನೀತ್ ಪುತ್ಥಳಿಯನ್ನು ಇಡಲಾಗಿದೆ. ಇನ್ನು ಡಾ. ರಾಜ್ ಕುಮಾರ್ ಮತ್ತು ಪುನೀತ್ ಅಭಿನಯಕ್ಕೆ ಸಾಕ್ಷಿಯಾಗಿದ್ದು ಭಕ್ತ ಪ್ರಹ್ಲಾದ ಚಿತ್ರ. ಈ ಸಿನಿಮಾದ ಕ್ಲೈಮ್ಯಾಕ್ಸ್ ಭಾಗವನ್ನು ಮರು ಸೃಷ್ಠಿಸಿರುವಂತೆ ಬಾಲ ಪುನೀತ, ರಾಜ್ ಕುಮಾರ್, ಕಂಭವನ್ನು ಸೀಳಿಕೊಂಡು ಬರುವ ನರಸಿಂಹನ ಪ್ರತಿಮೆ ಜನರನ್ನು ಆಕರ್ಷಿಸುತ್ತದೆ.

ಪುನೀತ್ ಮತ್ತು ರಾಜ್ ಕುಮಾರ್ ಬಗೆಗಿನ ಸಂಪೂರ್ಣ ವಿವರ
ಡಾ. ರಾಜ್ ಕುಮಾರ್ ರಾಘವೇಂದ್ರ ಸ್ವಾಮಿಗಳ ಪರಮಭಕ್ತರಾಗಿದ್ದರು. ರಾಘವೇಂದ್ರ ಸ್ವಾಮಿಗಳ ಪಾತ್ರವನ್ನು ನಿಭಾಯಿಸಿದ್ದರು ಇದರಿಂದ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು , ಬೃಂದಾವನವನ್ನು ಸೃಷ್ಟಿಸಲಾಗಿದ್ದ ಭಕ್ತಿಯುವಾಗಿ ಅಲಂಕಾರವನ್ನು ಮಾಡಲಾಗಿದೆ. ಬೇಡರ ಕಣ್ಣಪ್ಪನಾಗಿ ಅವತರಿಸಿರುವ ಡಾ. ರಾಜ್ ಕುಮಾರ್ ಶಿವಲಿಂಗದ ಮೇಲೆ ಕಾಲನ್ನಿಡುವ ದಶ್ಯವು ಪುಷ್ಪಾಲಂಕೃತವಾಗಿದೆ. ಇನ್ನು ಗಾಜಿನ ಮನೆಯ ಸುತ್ತಲು ಡಾ. ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಹಾಕಲಾಗಿದ್ದು. ಗಾಜಿನ ಮನೆ ಜನರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ ಎನ್ನುವಂತಿದೆ.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು










Click it and Unblock the Notifications