ಜಲಾಶಯಗಳು ಖಾಲಿ ಖಾಲಿ ಎದುರಾಗಲಿದೆ ನೀರಿನ ಸಮಸ್ಯೆ
ಬೆಂಗಳೂರು.ಫೆಬ್ರವರಿ 8: ಕೃಷ್ಣರಾಜ ಸಾಗರ ಅಣೆಕಟ್ಟು ಮತ್ತು ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವ ಪರಿಣಾಮ ಬೆಂಗಳೂರು, ಮಂಡ್ಯ, ಮೈಸೂರು ಜನತೆಗೆ ಶೀಘ್ರದಲ್ಲಿಯೇ ನೀರಿನ ಕೊರತೆ ಎದುರಾಗಲಿದೆ.
ಕೆಆರ್ ಎಸ್ ಅಣೆಕಟ್ಟಿನಲ್ಲಿ ಸೋಮವಾರಕ್ಕೆ ನೀರಿನ ಮಟ್ಟ 78.96 ಅಡಿಗಳಷ್ಟಿದೆ. ಅದರೆ ಮೂಲ ಸಾಮರ್ಥ್ಯ 124 ಅಡಿಗಳು. ಅಣೆಕಟ್ಟು ಒಟ್ಟು ಹೊಂದಿರುವ ಲೈವ್ ಸ್ಟೋರೇಜಿನ ಸಾಮರ್ಥ್ಯ 1.955 ಟಿಎಮ್ ಸಿ ಎಂದು ನೀರಾವರಿ ಇಲಾಖೆ ತಿಳಿಸಿದೆ. ಇನ್ನು ಹೋದ ವರ್ಷಕ್ಕೆ ಹೊಲಿಸಿದರೆ ಕಬಿನಿ ಜಯಲಾಶಯದಲ್ಲಿ 2.32 ಟಿಎಂಸಿ ನೀರು ಕಡಿಮೆಯಿದ್ದು, ಜಲಾಶಯದ ಮಟ್ಟ ಅರ್ಥಕ್ಕಿಂತ ಕಡಿಮೆಯಾಗಿದೆ. ಬೆಂಗಳೂರಿಗೆ ಪ್ರತಿ ತಿಂಗಳಿಗೆ 2 ಟಿಎಂಸಿ ನೀರು ಬೇಕು ಎಂದು ಟಿಎನ್ಐಇ ವರದಿ ತಿಳಿಸಿದೆ.[ಮಲೆನಾಡಿನಲ್ಲೂ ಜಲಕ್ಷಾಮ! ಇದಕ್ಕೆ ಕಾರಣಗಳು ಇಲ್ಲಿವೆ]

ಜಲಾಶಯಗಳಿಗೆ ಒಳಹರಿವು ಮಾತ್ರ ಎರಡು ತಿಂಗಳಿನಿಂದ 300 ಕ್ಯೂಸೆಕ್ಸ್ ಮೀರಿಲ್ಲ. ಎರಡು ಜಲಾಶಯದಲ್ಲಿಯೂ ಡೆಡ್ ಸ್ಟೋರೇಜಿನ ಮಟ್ಟ 60 ಅಡಿಗಳಿಗಿಂತ ಕಡಿಮೆಯಾದರೆ ರಾಜ್ಯಕ್ಕೆ ಉಳಿಯುವುದು 4.4 ಟಿಎಂಸಿ ಅಡಿಗಳಷ್ಟು ನೀರು. ಅಲ್ಲದೆ ಕುಡಿಯುವ ನೀರಿನ ಬಳಕೆ, ತಾಪಮಾನದಿಂದಾಗಿ ಆವಿಯಾಗುವ ನೀರು, ಮತ್ತು ತಮಿಳುನಾಡಿಗೆ ಬಿಡುಗಡೆಯಾಗುವ ನೀರು ಎಲ್ಲವನ್ನು ಇದರಲ್ಲಿಯೇ ನಿಭಾಯಿಸಬೆಕಾಗುತ್ತದೆ.[ಉಡುಪಿಯಲ್ಲೂ ನೀರಿಗೆ ಬರ, ಶ್ರೀ ಕೃಷ್ಣನಿಗೆ ಕೇಳುವುದೇ ಮೊರೆ?]
ಬೇಸಿಗೆ ಹೊತ್ತಿಗೆ ನೀರಿನ ಪ್ರಮಾಣ ಡೆಡ್ ಸ್ಟೊರೇಜ್ ಅನ್ನು ಮೀರಿ ಹೋಗುವ ಸಾದ್ಯತೆಗಳಿಗಳಿದ್ದು, ಜನಜೀವನಕ್ಕೆ ತೊಂದರೆಯಾಗಲಿದೆ. ಬೆಂಗಳೂರಿಗೂ ನೀರನ್ನು ಕೊಡುವುದು ಕಷ್ಟಸಾಧ್ಯ, ಇದನ್ನು ತಿಳಿದಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ ಅಧಿಕಾರಿಗಳು ಬೆಂಗಳೂರಿನಲ್ಲಿ ಅಧಿಕ ಪ್ರಮಾಣದ ಬೋರ್ ವೆಲ್ ಕೊರೆಯಲು ಚಿಂತಿಸಿದ್ದಾರೆ ಎಂದು ವರದಿ ತಿಳಿಸಿದೆ.

ಈಗಾಗಲೇ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 7.920 ಬೋರ್ ವೆಲ್ ಗಳಿವೆ. ಅವುಗಳಲ್ಲಿ 938ರಲ್ಲಿ ನೀರಿಲ್ಲ. ಹೀಗಾಗಿ ನೀರು ಸರಬರಾಜು ಮಂಡಲಿ 200-400 ಬೋರ್ ವೆಲ್ ಗಳನ್ನು ಕೊರೆಯುವ ಚಿಂತನೆ ನಡೆಸಿದೆ. ಟೆಂಡರ್ ಆಧಾರದ ಮೇಲೆ ಈ ಕೆಲಸವನ್ನು ಮಾಡಲು ಹೊರಟಿದ್ದು ಕಾರ್ಯ ಮಂದಗತಿ ಪಡೆಯಲಿದೆ.[ಮೆಟ್ಟೂರು ಜಲಾಶಯದಿಂದ ನೀರು ಬಿಟ್ಟ ತಮಿಳುನಾಡು]
ಬೆಂಗಳೂರಿನಲ್ಲಿ ಇರುವ ಇತರೆ ಕೊಳವೆ ಬಾವಿಗಳು ಸರಕಾರಿ ಮಾನ್ಯತೆ ಪಡೆದಿದೆಯೋ ಇಲ್ಲವೋ ತಿಳಿದಿಲ್ಲ ಆದರೆ ನಗರ ವ್ಯಾಪ್ತಿಯಲ್ಲಿ ನೀರಿನ ಪ್ರಮಾಣ ತೀವ್ರವಾಗಿ ಕುಡಿದಿದೆ. ಹೇಗೆಂದರೆ ಈ ವ್ಯಾಪ್ತಿಯಲ್ಲಿ ಅಂತರ್ಜಲ ಸಿಗುತ್ತಿರುವುದು ಸಾವಿರ ಅಡಿಗಳಿಗಿಂತ ಹೆಚ್ಚು ಕೊರೆದಾಗ ಮಾತ್ರ.

ಅಲ್ಲದೆ ಕಾವೇರಿ ನೀರಾವರಿ ನಿಗಮಕ್ಕೆ ಬೆಂಗಳೂರು ನೀರು ಸರಬರಾಜು ನಿಗಮ ಪತ್ರ ಬರೆದಿದ್ದು, ಬೆಂಗಳೂರಿಗೆ ದಿನಕ್ಕೆ 1,400 ಎಂಎಲ್ ಡಿ ನೀರು ಬೇಕು ಅದರೆ ಮಂಡಲಿಯಿಂದ ಸರಬರಾಜಾಗುತ್ತಿರುವುದು 1.250 ಎಂಎಲ್ ಡಿ ನೀರು ಎಂದು ಹೇಳಿದೆ. ಕೆಆರ್ ಎಸ್ ಡ್ಯಾಮಿನಲ್ಲಿಯೂ ನೀರಿನಮಟ್ಟ ಕುಸಿದಿದೆ ಈಗ ಏನು ಮಾಡಬೇಕು ನೀವೇ ಹೇಳಿ?
ನೀರು ಸರಬರಾಜು ಮಂಡಲಿ ಮಳೆ ಕೊಯ್ಲಿನ ಮಾಹಿತಿಯನ್ನು ಎಲ್ಲ ನಗರ ನಿವಾಸಿಗಳಿಗೆ ತಿಳಿಸುತ್ತಿದ್ದಾರೆ. 2009 ರಿಂದಲೂ ಮಳೆಕೊಯ್ಲನ್ನು ಮನೆಗಳಿಗೆ ಮಾಡಿಸಿ ಎಂದು ಹೇಳುತ್ತಿದೆ. ಅದರೆ ವರದಿಯ ಪ್ರಕಾರ ಬೆಂಗಳೂರಿನಲ್ಲಿ 9.15 ಲಕ್ಷ ಜನ ಜಲಮಂಡಲಿಯ ನೀರಿನ ಕನೆಕ್ಷನ್ ಪಡೆದುಕೊಂಡಿದ್ದಾರೆ. ಅದರೆ ಇವರಲ್ಲಿ ಮಳೆಕೊಯ್ಲನ್ನು ಅಳವಡಿಕೊಂಡಿರುವವರು 1.4 ಲಕ್ಷ ಜನ ಅದನ್ನು ಬಳಸಿಕೊಂಡಿರುವವರು 62.00 ಮಾತ್ರ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications